Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಾವನ್ ಐಜಿ..ಮೂಡಿಗೆರೆಗೆ ನಾನೇ ದೊಡ್ಡವನು : ಏನಿದು ವೈರಲ್ ಆದ ವಿಡಿಯೋದಲ್ಲಿ ಎಂ ಪಿ ಕುಮಾರಸ್ವಾಮಿಯ ಮಾತು..?

Facebook
Twitter
Telegram
WhatsApp

ಚಿಕ್ಕಮಗಳೂರು: ಎಷ್ಟು ಓದಿದರೇನು..? ಎಷ್ಟು ಪ್ರತಿಭೆ ಇದ್ದರೇನು..? ಸರ್ಕಾರಿ ನೌಕರಿ ಬೇಕು ಅಂದ್ರೆ ಸ್ವಲ್ಪೇ ಸ್ವಲ್ಪ ನಾಲೆಡ್ಜ್ ಇದ್ದರು, ಲಕ್ಷ ಲಕ್ಷ ಹಣ ಇದ್ದರೆ ಸಾಕು ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಒಂದೊಂದೇ ಒಂದೊಂದೆ ಬೆಳಕಿಗೆ ಬರುತ್ತಿದೆ. ಒಂದು ಕಡೆ ಪಿಎಸ್ಐ ಅಕ್ರಮದಲ್ಲಿ ಇನ್ನು ಬಂಧನವಾಗುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಬೆನ್ನಲ್ಲೇ ಪೊಲೀಸರೊಬ್ಬರಿಗೆ ಎಂ ಪಿ ಕುಮಾರಸ್ವಾಮಿ ನೀನ್ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದಿಯಾ ಗೊತ್ತಿದೆ ಎಂಬ ಆಡಿಯೋ ವೈರಲ್ ಆಗಿದೆ.

ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಮತ್ತು ಪಿಎಸ್ಐ ರವೀಶ್ ಮಾತನಾಡಿರುವ ಸಂಭಾಷಣೆಯೊಂದು ವೈರಲ್ ಆಗಿದೆ. ಈ ಸಂಭಾಷಣೆಯಲ್ಲಿ ಮಾತನಾಡಿರುವುದು ಕುಮಾರಸ್ವಾಮಿ ಎಂದೇ ಹೇಳಲಾಗುತ್ತಿದೆ. ಆಡಿಯೋದಲ್ಲಿ ಕುಮಾರಸ್ವಾಮಿ ತೀರಾ ದರ್ಪ, ಅಧಿಕಾರದಲ್ಲಿ ಮಾತನಾಡಿರುವುದು ಕೇಳಿ ಬಂದಿದೆ. ಮೂಡಿಗೆರೆಗೆ ನಾನೇ ದೊಡ್ಡವನು ಎಂದಿದ್ದಾರೆ.

ಆಡಿಯೋದಲ್ಲಿ, ಯಾರಪ್ಪ ಇದು ನಂಬರ್ ಎಂದು ಕುಮಾರಸ್ವಾಮಿ ಅವರದ್ದು ಎನ್ನಲಾದ ಧ್ವನಿ ಕೇಳಿ ಬಂದಿದೆ. ನಾನು ಸರ್ ರವೀಶ್ ಎಂದಾಗ, ಈಗ ಎಲ್ಲಿದ್ದೀಯಪ್ಪ ಎಂದು ಕೇಳಿದ್ದಾರೆ. ಸ್ಟೇಷನ್ ಎಂದಾಗ ಇಲ್ಲಿಗೆ ಬರಬೇಡ ಅಂತ ಹೇಳಿದ್ನಲ್ಲ. ವಾಪಾಸ್ ಹೋಗಲೇ, ಮರ್ಯಾದೆಯಿಂದ ವಾಪಾಸ್ ಹೋಗು. ನನಗೆ ವಾಪಾಸ್ ಕಳುಹಿಸುವುದು ಗೊತ್ತು. ಯಾರ್ಯಾರಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದೀಯಾ ಅದು ಗೊತ್ತು ಎಂದಾಗ ಆ ಕಡೆಯಿಂದ ರವೀಶ್ ಎಂಬುವವರು ಇಲ್ಲ ಸರ್ ಯಾರಿಗೆ ಏನು ಕೊಟ್ಟಿಲ್ಲ. ಐಜಿ ಸಾರ್ ಹೇಳಿದ್ರು ಅಂತ ಬಂದೆ. ನಾಳೆ ನಿಮ್ಮನ್ನು ಬಂದು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಯಾವಾನ್ ಐಜಿ, ಮೂಡಿಗೆರೆಗೆ ನಾನೇ ದೊಡ್ಡವನು. ಸುಮ್ಮನೆ ವಾಪಾಸ್ ಹೋಗು ಎಂದಿದ್ದಾರೆ. ಈ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಎಳಸು, ರಾಜಕೀಯ ಜ್ಞಾನ ಇರದವನು : ವಿಜಯೇಂದ್ರ ಮೇಲೆ ಈಶ್ವರಪ್ಪ ಮಾತಿನ ಪ್ರಹಾರ

ಉಡುಪಿ: ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರಿಗೆ ಬಿಜೆಪಿ ನಿರಾಸೆ ಮಾಡಿದಾಗಿನಿಂದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಕ್ಕಳ ಮೇಲೆ ಹರಿಹಾಯುತ್ತಲೇ ಇದ್ದಾರೆ. ಬಿಜೆಪಿ ನಾಯಕರ ಮಾತನ್ನು ಮೀರಿ, ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

error: Content is protected !!