ಇತ್ತೀಚೆಗೆ ಅವರದ್ದು ಬಹಳ ಆಗಿದೆ : ಕಾರು ಅಡ್ಡಗಟ್ಟಿ ಕಾಗೋಡು ತಿಮ್ಮಪ್ಪನ ಪುತ್ರಿಗೆ ಕೊಲೆ ಬೆದರಿಕೆ..!

suddionenews
1 Min Read

ಶಿವಮೊಗ್ಗ: ಇತ್ತೀಚೆಗೆ ರಾಜನಂದಿಯವರು ತಮ್ಮ ತಂದೆಯವರ ರಾಜಕೀಯದ ವಿಚಾರವಾಗಿ ಮಾತನಾಡಿದ್ದರು. ತಂದೆಗೆ ಟಿಕೆಟ್ ಬೇಕು ಎಂದು ಹೇಳಿದ್ದರು. ತಂದೆಯ ರಾಜಕೀಯ ವಿಚಾರದ ಜೊತೆ ಜೊತೆಗೆ ಸಮಾಜ ಸೇವೆಯಲ್ಲೂ ಮುಂದುವರೆದಿದ್ದಾರೆ. ತಮ್ಮದೇ ಫೌಂಡೇಶನ್ ನಲ್ಲಿ ಸಾಕಷ್ಟು ಸಮಾಜ ಸೇವೆ ಮಾಡುತ್ತಿರುತ್ತಾರೆ.

ಇಂದು ಕೂಡ ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಸಾಗರ ತಾಲೂಕಿನ ಹಲವಡೆಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿದ್ದರು. ತ್ಯಾಗಾರ್ತಿ ಗ್ರಾಮದಲ್ಲಿ ಶಿಬಿರ ಮುಗಿಸಿ ಹೊರಟಿದ್ದರು. ಆದರೆ ರಾಜನಂದಿನಿ ಬೇರೊಂದು ಕಾರಿನಲ್ಲಿ ಹೊರಟಿದ್ದರು. ಪ್ರಕಾಶ್ ಕಾರು ತೆಗೆದುಕೊಂಡು ಹೊರಟಿದ್ದರು.

ಈ ವೇಳೆ ಮಂಜು ಎಂಬಾತ ರಾಜನಂದಿನಿಯವರ ಕಾರನ್ನು ಅಡ್ಡಗಟ್ಟಿ, ಕಾರಿನಲ್ಲಿ ಬೇರೆಯಾರಿದ್ದಾರೆ, ರಾಜನಂದಿಯವರಿಲ್ಲವಾ. ಇತ್ತೀಚೆಗೆ ಅವರದ್ದು ಜಾಸ್ತಿಯಾಗಿದೆ. ಹೀಗೆ ಮುಂದುವರೆದರೆ ಅವರನ್ನು ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆಯಾಕಿ ಹೋಗಿದ್ದಾನೆ. ಕಾರು ಚಾಲಕ ಪ್ರಕಾಶ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಆರು ಜನರ ಮೇಲೆ ದೂರು ನೀಡಿದ್ದು, ಕೊಲೆ ಮಾಡುವುದಾಗಿ ನಿಮ್ಮ ಮೇಡಂಗೆ ಹೋಗಿ ಹೇಳು ಎಂದಿದ್ದನಂತೆ. ಸದ್ಯ ಈ ಘಟನೆ ಸಂಬಂಧ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *