Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇವೇಗೌಡರ ಮೇಲೆ ಆಣೆ ಮಾಡು ಅಂತ ಕೇಳಲು ಯಾವೂರ ದಾಸಯ್ಯ : ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು

Facebook
Twitter
Telegram
WhatsApp

 

ಹಾಸನ: ಬಿಜೆಪಿ ಜೊತೆಗೆ ಹೊಂದಾಣಿಕೆ‌ ಮಾಡಿಕೊಳ್ಳಲ್ಲ ಅಲ್ಲ ನಿಮ್ಮ ಅಪ್ಪನ ಮೇಲೆ ಆಣೆ ಮಾಡಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಮೊದಲು ಸುಳ್ಳಿನ ರಾಮಯ್ಯನಿಗೆ ಹೇಳ್ತೀನಿ, ನಿನ್ನೆ ಮೊನ್ನೆ ನಾಲ್ಕು ಪ್ರಶ್ನೆ ಕೇಳಿದ್ದೀನಲ್ಲ ಅದಕ್ಕೆ ಉತ್ತರ ಕೊಡೋಕೆ ಹೇಳಿ. ಟ್ವೀಟ್ ನೋಡಿದೆ, ಏನೋ ಕೋಮುವಾದ, ಜಾತ್ಯಾತೀತವಾದದ ಕಾಲಘಟ್ಟವನ್ನು ಸರಿಪಡಿಸಲು ನಿಂತವರಂತಲ್ಲ, ಇಡೀ ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿಯಾಗಿದೆ. ಕರ್ನಾಟಕ ಒಂದರಲ್ಲಿ ಇನ್ನು ಜೀವ ಆಡುತ್ತಾ ಇದೆ. ಇವರ್ಯಾವ ಕೋಮುವಾದ, ಜಾತ್ಯಾವಾದ ನಿಲ್ಲಿಸುತ್ತಾರೆ. ಕಾಂಗ್ರೆಸ್ ನಾಯಕರೆ ನಿನ್ನೆ ಹುಬ್ಬಳ್ಳಿಯಲ್ಲಿ ಸ್ಟೇಷನ್ ಹತ್ರ ಹೋಗಿ ಗಲಾಡೆ ಮಾಡಿದ್ರು ಅಂತ ಸುದ್ದಿಯಾಗಿದೆ. ಇದೆಲ್ಲಾ ಇಟ್ಟುಕೊಂಡು ಈ ದೇಶದಲ್ಲಿ ಜಾತ್ಯಾತೀತ ಉಳಿಸುತ್ತಾರಾ.

ದೇವೇಗೌಡರ ಮೇಲೆ ಆಣೆ ಮಾಡು ಅಂತ ಕೇಳುವುದಕ್ಕೆ ಯಾವೂರ ದಾಸಯ್ಯ ಅಂತ ಕೇಳ್ತೀನಿ. ಎಚ್ಚರಿಕೆಯಿಂದ ಮಾತನಾಡಲಿ. ಪದೇ ಪದೇ ಬಿಜೆಪಿ ಬಿಟೀಂ ಬಿಟೀಂ ಅಂತ ಹೇಳಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಮೂಲ‌ಕಾರಣ ಇವರೇ. 150 ಸೀಟು ಗೆಲ್ಲುತ್ತೀವಿ ಅಂತ ಭಾಷಣ ಮಾಡಿಕೊಂಡು ಹೋಗುತ್ತಿದ್ದೀರಲ್ಲ. ನಿಮ್ಮ ಯೋಗ್ಯತೆ 50-60ಕ್ಕೋ ಬರ್ತೀರಿ. ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕಾರ ಮಾಡ್ತಾರೆ, ಮೆಜಾರಿಟಿ ಬರಲ್ಲ. ಕುಮಾರಸ್ವಾಮಿ ಜೆಡಿಎಸ್ ಪಕ್ಷ ನಮಗೆ ಬೆಂಬಲ ಕೊಡಬೇಕು ಅಂತ ತಾನೇ ಕೇಳುತ್ತಾ ಇರೋದು. ಅದನ್ನು ಕೇಳಿ. ಒಂದು ಪ್ರಶ್ನೆಯನ್ನು ಅವರಿಗೆ ಕೇಳಿ. ಯಾತಕ್ಕೆ ನನಗೆ ಈ ಪ್ರಶ್ನೆಯನ್ನು ಕೇಳುತ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಯಾವನ್ ರೀ ವಚನ ಭ್ರಷ್ಟ ಆಗಿದ್ದು. ಯಾವುದೋ ಒಂದು ಅಗ್ರಿಮೆಂಟ್ ತಗೊಂಡು ಬಂದು ಸಹಿ‌ ಮಾಡಿಸಿ, ವಚನ ಭ್ರಷ್ಟರಾಗಿದ್ದು ಬಿಜೆಪಿಗರು. ನಾನ್ಯಾಕೆ ವಚನ ಭ್ರಷ್ಟನಾಗಲಿ. 9 ದಿನ ಮುಖ್ಯಮಂತ್ರಿಯಾಗಿರಲಿಲ್ಲ. ಪದೇ ಪದೇ ಆ ಮಾತು ಹೇಳುವ ಅಗತ್ಯವಿಲ್ಲ. ತಿಂದ ಮನೆಗೆ ದೋಖಾ ಹಾಕಿ ಹೋದಂತ ವ್ಯಕ್ತಿ ನನ್ನ ಬಗ್ಗೆ ಮಾತಾಡ್ತಾರಾ. ವಚನ ಭ್ರಷ್ಟತೆ ಬಗ್ಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!