ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ : 40% ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ

suddionenews
1 Min Read

ಉಡುಪಿ: ಜಿಲ್ಲೆಯ ಶಾಂಭಾವಿ ಲಾಡ್ಜ್ ನಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿಂದೆ ಗುತ್ತಿಗೆದಾರರಿಂದ 40% ಪರ್ಸೆಂಟ್ ಕಮೀಷನ್ ಬಗ್ಗೆ ನೇರ ಆರೋಪ ಮಾಡಿದ್ದರು. ಇದೀಗ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಟ್ಸಾಪ್ ನಲ್ಲಿ ಮಾಧ್ಯಮಗಳಿಗೆ ಡೆತ್ ನೋಟ್ ಕಳುಹಿಸಿದ್ದಾರೆ. ನನ್ನ ತ್ನಿ, ಮಕ್ಕಳಿಗೆ ಸಹಾಯ ಮಾಡಬೇಕೆಂದು ಪ್ರಧಾನಿ ಮೋದಿ, ಯಡಿಯೂರಪ್ಪ ಅವರೇ ಸಹಾಯ ಮಾಡಬೇಕೆಂದು ಡೆತ್ ನೋಟಲ್ಲಿ ಬರೆದಿಟ್ಟಿದ್ದಾರೆ.

ನನ್ನ ಸಾವಿಗೆ ನನ್ನ ಸ್ನೇಹಿತರು ಕಾರಣ ಅಲ್ಲ. ನೇರಾನೇರ ಈಶ್ವರಪ್ಪ ಅವೃಎ ಕಾತಣ ಎಂದು ಬರೆದಿದ್ದಾರೆ. 40 ಪರ್ಸೆಂಟ್ ಗೆ ಹಾರಿಹೋಯ್ತಾ ಸಂತೋಷ್ ಪಾಟೀಲ್ ಪ್ರಾಣಾ ಎಂಬ ಚರ್ಚೆಗಳು ಶುರುವಾಗಿದೆ. ಸ್ಬೇಹಿತರ ಜೊತೆಗೆ ಉಡುಪಿಗೆ ಹೋಗಿದ್ದ ಸಂತೋಷ್ ಸ್ನೇಹಿತರನ್ನು ಬೇರೆ ಕೊಠಡಿಯಲ್ಲಿ ಬಿಟ್ಟು ಸಂತೋಷ್ ಮತ್ತೊಂದು ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *