ಸಿದ್ದರಾಮಯ್ಯ, ಡಿಕೆಶಿ ಯಾವತ್ತಾದರೂ ಬಿಜೆಪಿ ಹೊಗಳಿದ್ದಾರಾ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆ

1 Min Read

ಮೈಸೂರು: ವ್ಯಾಪಾರ ದಂಗಲ್ ಬಗ್ಗೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಮಾಜದಲ್ಲಿ ಅನೇಕ ಚರ್ಚೆಗಳು ಬರುತ್ತವೆ. ಆದರೆ ನಮ್ಮ ಸರ್ಕಾರದ ನಿಲುವಲ್ಲಿ ಇಡೀ ಸಮಾಜ ಒಟ್ಟಾಗಿ ಒಂದಾಗಿ ಬದುಕಬೇಕಾಗಿದೆ. ಯಾರೋ ಒಬ್ಬರು ಹೇಳಿರುತ್ತಾರೆ. ಒಬ್ಬೊಬ್ಬರು ಟೀಕೆ ಮಾಡುತ್ತಾರೆ, ಇನ್ನೊಬ್ಬರು ಮರು ಟೀಕೆ ಮಾಡುತ್ತಾರೆ. ಸರ್ಕಾರ ಯಾವತ್ತು ಕೂಡ ಎಲ್ಲರನ್ನು ಒಳಗೊಂಡಂತೆ ಆಡಳುತ ಮಾಡುತ್ತೆ. ಎಲ್ಲರಿಗೂ ಸಮಾನ ನ್ಯಾಯ ಕಿಡೋದಕ್ಕೆ ಬದ್ಧವಾಗಿದೆ. ಪ್ರಚಾರದ ಹುಚ್ಚು ಸರ್ಕಾರಕ್ಕಿಲ್ಲ. ಭಾವನೆಗಳನ್ನು ಅರ್ಥ ಮಾಡಿಕೊಂಡು, ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಸರ್ಕಾರದ ಜವಬ್ದಾರಿ ಅದನ್ನು ಅರ್ಥಪೂರ್ಣವಾಗಿ ಮಾಡುತ್ತದೆ.

ಕಾಂಗ್ರೆಸ್ ನವರು ಯಾವತ್ತಾದ್ರೂ ಬಿಜೆಪಿಯನ್ನು ಹೊಗಳಿದ್ದಾರಾ..? ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಯಾವಾಗಲೂ ಬಿಜೆಪಿ ಸರ್ಕಾರ ಸಾಮರಸ್ಯಕ್ಕೆ ಬದ್ಧವಾಗಿದೆ ಅಂತ ಹೇಳಿದ್ದಾರಾ..? ಬಿಜೆಪಿಯ ಬೊಮ್ಮಾಯಿ ಅವರ ಸರ್ಕಾರ ಸರ್ವರಿಗೂ ಸಾಮಾಜಿಕ ನ್ಯಾಯ ಕೊಡುವಂತೆ, ಕಠಿಣವಾದ ಸಾಮಾಜಿಕ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದೆ. ಹಿಜಾಬ್ ಸೇರಿದಂತೆ ಯಾವುದೇ ಸಮಸ್ಯೆ ಬಂದಾಗಲೂ ಕಾನೂನಿನಲ್ಲಿ ಯಾವ ರೀತಿ ಪರಿಹಾರವಾಗುತ್ತೆ, ನ್ಯಾಯಾಲಯ ಏನು ಆದೇಶ ಕೊಡುತ್ತದೆ ಅದರ ಮೇಲೆಯೇ ನಡೆಯುತ್ತದೆ.

 

ಕೆಲವು ಆರೋಪಗಳನ್ನು ಎದುರಿಸಿದ್ದರು ಸಹ ಬಿಜೆಪಿ ಸರ್ಕಾರ ಸರಿಯಾದ ಧಿಕ್ಕಿನಲ್ಲಿ ಬಿಜೆಪಿ ಸರ್ಕಾರ ನಡೆಯುತ್ತದೆ. ವ್ಯವಸ್ಥಿತವಾದಂತ, ಯೋಜನೆ ಬದ್ಧವಾದಂತ ಆಡಳಿತ ನಡೆಸುತ್ತಿದೆ. ಯಾವುದೇ ಆತಂಕಗಳು ಬೇಡ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *