Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲಾ ಕ್ಷೇತ್ರದಲ್ಲೂ ಕರ್ನಾಟಕ ನಂಬರ್ ಒನ್, ಮಸಿ ಬಳಿಯುವ ಕೆಲಸ ಮಾಡಬೇಡಿ : ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಚಿವ ಅಶ್ವತ್ಥ್ ನಾರಾಯಣ್

Facebook
Twitter
Telegram
WhatsApp

ಬೆಂಗಳೂರು: ಸಿದ್ದರಾಮಯ್ಯ ಪೂರ್ತಿ confuse ಆಗಿಬಿಟ್ಟವರೆ. ಪಾಪ ಅವ್ರಿಗೆ ತಳಮಳ ಆಗೋಗಿದೆ. ಏನಂದ್ರೆ ಏನು ಹೇಳಬೇಕು ಗೊತ್ತಾಗ್ತಿಲ್ಲ ಅವ್ರಿಗೆ. ಯೂನಿಫಾರ್ಮ್ ಹಾಕೊಳಿ ಅಂತ ಹೇಳಬೇಕೋ ಬೇಡ ಅಂತ ಹೇಳಬೇಕಾ ಗೊತ್ತಾಗ್ತಿಲ್ಲ. ಈ ಸ್ಪಷ್ಟತೆ ಅವರನ್ನು ಕಾಡುತ್ತಿದೆ. ಈ ಸ್ಪಷ್ಟತೆ ಇಲ್ಲದ ಕಾರಣ ಯಾವ ರೀತಿಯ ನಿಲುವನ್ನು ತೆಗೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಗೊಂದಲವಾಗಿದೆ ಎಂದಿದ್ದಾರೆ.

ಸಮವಸ್ತ್ರ ಹಾಕಿಕೊಳ್ಳಬೇಕು ಅಂದ್ರೆ ಯಾಕೆ ಹಾಕಿಕೊಳ್ಳಬೇಕು, ಯಾವ ಕಾಲದಲ್ಲಿ ಮಾಡಿದ್ರು. ಹಾಕಿಕೊಳ್ಳಬೇಕು ಬೇಕು ಅಂತ ಇದ್ದಾಗ ಹಾಕಿಕೊಳ್ಳಿ ಅಂತ ಹೇಳಬೇಕು ತಾನೇ ಗೊಂದಲ ಯಾಕೆ..? ಇವತ್ತು ಬೇರೆ ಬೇರೆ ಕಾನೂನು ಮಾಡೋಕೆ ಆಗುತ್ತಾ..? ಕಾನೂನು ಒಂದೇ ಇರುತ್ತೆ. ಅದನ್ನು ಪಾಲನೆ ಮಾಡುವಂತದ್ದು ಈ ಪಕ್ಷಗಳಿಗೆ ಇರಬೇಕು.

ಬರೀ ಒಲೈಕೆ ಮಾಡುವ ಕೆಲಸವನ್ನೆ ಮಾಡುತ್ತಾ ಬಂದಿದ್ದಾರೆ. ಇನ್ಬಾದರೂ ಈ ಒಲೈಕೆ ಮಾಡೋದನ್ನ ನಿಲ್ಲಿಸಿ ಕಾನೂನಿಗೆ ಗೌರವ ಕೊಡಿ. ನಮ್ಮ ಮಾತುಗಳನ್ನು ಗೌರವಿಸಬೇಡಿ ಕಾನೂನು ಗೌರವಿಸಿ ಸಾಕು. ಆಗ ತನಗೆ ತಾನೇ ಸಮಸ್ಯೆಗಳು ಬಗೆಹರಿಯುತ್ತವೆ. ಕಾನೂನು ಯಾರಪ್ಪ ಅಂದ್ರೆ ಕಷ್ಟ. ಅವರು ಮಾಡಿರುವ ಕಾನೂನನ್ನೇ ಅವರು ಗೌರವಿಸಲಿ ಸಾಕು.

 

ಆಜಾನ್ ವಿಚಾರದಲ್ಲಿ, ಹಿಜಾಬ್, ಸಮವಸ್ತ್ರ ಇನ್ನೊಂದು ಎಲ್ಲದರಲ್ಲೂ ಕಾನೂನು ಪಾಲಿಸಿ. ನಾಡಿಗೆ ಅವಮಾನ ಮಾಡಬೇಡಿ. ಕನ್ನಡ ನಾಡು ಒಂದು ಸೌಹಾರ್ದಯುತವಾಗಿ, ಪ್ರಗತಿಯುತವಾಗಿ, ಸಮೃದ್ಧಿಯಿಂದ ಇಡೀ ವಿಶ್ವದ ಮಾನ್ಯತೆ ಪಡೆದಿದೆ. ಆವಿಷ್ಕಾರ, ತಂತ್ರಜ್ಞಾನ ಯಾವ ಕ್ಷೇತ್ರದಲ್ಲಿ ಆಗಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿದೆ. ಹಾಗಾಗಿ ಮಸಿ ಬಳಿಯುವ ಕೆಲಸ ಮಾಡಬೇಡಿ. ರಾಜಕೀಯ ಪಕ್ಷಗಳು ಕಾನೂನು ಪಾಲಿಸಿ, ಪಾಲಿಸಲು ಸೂಚಿಸಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಯಶೋಧಮ್ಮ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಶ್ರೀಮತಿ ಯಶೋಧಮ್ಮ(77) ಬುರುಜನಹಟ್ಟಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು. ಮೃತರು ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್. ಮಲ್ಲಿಕಾರ್ಜುನ್ ಸೇರಿದಂತೆ ಇಬ್ಬರು ಪುತ್ರರು ಇಬ್ಬರು ಪುತ್ರಿಯರು

ಬೆಳೆ ಸಮೀಕ್ಷೆ ವ್ಯತ್ಯಾಸ: ಮರು ಪರಿಶೀಲಿಸಿ ಬೆಳೆವಿಮೆ ಪರಿಹಾರ ವಿತರಣೆಗೆ ಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ

ಚಿತ್ರದುರ್ಗ. ಮೇ.07:  ಬೆಳೆ ಸಮೀಕ್ಷೆಯಲ್ಲಿ ಉಂಟಾದ ವ್ಯತ್ಯಾಸದಿಂದ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗದಿರುವುದು ಗಮನಕ್ಕೆ

ಸ್ವಂತ ಹಣದಿಂದ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ದೂರವಾಗಿ ಬಹಳ ವರ್ಷಗಳೇ ಕಳೆದವು. ಒಂದೆರಡು ಸಿನಿಮಾ ಮಾಡಿ, ನಟನೆಯಿಂದ ದೂರವಾದರೂ. ಡ್ಯಾನ್ಸ್ ಮಾಡುವುದರಲ್ಲಿ ವಿನೋದ್ ರಾಜ್ ಎತ್ತಿದ ಕೈ. ಆದರೆ ಅವರನ್ನು ಸ್ಯಾಂಡಲ್

error: Content is protected !!