Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುಗಾದಿ ಕವಿತೆ : ಯುಗಾದಿ ಎಂದರೆ ಹೊಸತನದ ಸಂಕೇತ : ಬಾಲಾಜಿ

Facebook
Twitter
Telegram
WhatsApp

ಪ್ರಕೃತಿಯ ಸಿರಿಮುಡಿಗೆ
ಕಳೆಕಟ್ಟಿದೆ
ಪ್ರಕೃತಿಯೇ ತೋರಣ ಕಟ್ಟಿ
ಸಜ್ಜಾಗಿ ನಿಂತಿದೆ

ಎಲ್ಲೆಲ್ಲೂ ನವೋಲ್ಲಾಸ
ನವಚೈತನ್ಯ ತುಂಬಿದೆ
ಮಾವು-ಬೇವು ಹಚ್ಚಹಸಿರು
ಹೊತ್ತು ಸಾಗಿದೆ

ನವ ವಸಂತನ
ಆಗಮನ
ದುಂಬಿಯ ಝೇಂಕಾರ
ಚಂದ್ರಮಾನ

ನವ ವಧುವಿನಂತೆ
ನಿಸರ್ಗದ ಶೃಂಗಾರ
ತನ್ನ ನಲ್ಲವಸಂತನಾಗಮನದ
ಕಾತುರ

ಅನ್ನದಾತನ ಮೊಗದಲಿ
ಮುಗುಳ್ನಗೆಯ ಹೊಂಬೆಳಕು
ನೂತನ ವರ್ಷಾರಂಭದ
ಯುಗಾದಿಯ ಹೊಸಬೆಳಕು

ಸೃಷ್ಟಿಕರ್ತ ಬ್ರಹ್ಮದೇವ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ
ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ
ಪಟ್ಟಾಭಿಷೇಕವಾದ ಸುದಿನ

ಮನೆಮಂದಿಯೆಲ್ಲ
ನಸುಕಿನಲ್ಲೆದ್ದು
ಅಭ್ಯಂಜನ ಸ್ನಾನದಿಂದ
ಮಿಂದೆದ್ದು

ಮನೆಯ ಬಾಗಿಲಿಗೆ ಮಾವಿನ ಎಲೆ ಬೇವಿನ ಎಲೆಯ ತೋರಣ
ಮನೆಯೊಳಗೆ
ಕಡಲೆಬೇಳೆ ಹೋಳಿಗೆ ಹೂರಣ

ಯುಗಾದಿ ಎಂದರೆ
ಹೊಸತನ ಸಂಕೇತ
ಪ್ರಕೃತಿಯಲ್ಲಿ ಸಂವತ್ಸರದಲ್ಲಿ
ಕಾಣುವೆವು ಹೊಸತನ

ಬೇವು-ಬೆಲ್ಲ
ಸುಖ ದುಃಖಗಳ ಸಂಕೇತ
ಎರಡನ್ನೂ ಸಮಾನವಾಗಿ ಸ್ವೀಕರಿಸ ಬೇಕಂತ

ಬಾಲಾಜಿ, ನಾಗಲಕ್ಷ್ಮಿ ಹಾರ್ಡ್ವೇರ್

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!