ಬೊಮ್ಮಾಯಿ ಅವರಿಗೆ ಮತ್ತೊಂದು ಬಜೆಟ್ ಮಂಡನೆಗೆ ಅವಕಾಶವಿಲ್ವಾ..? : ಹೆಚ್ ಕೆ ಪಾಟೀಲ್ ಪ್ರಶ್ನೆ

suddionenews
1 Min Read

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದ್ದು, ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದ 2023-24ರ ಬಜೆಟ್ ಇಟ್ಟುಕೊಂಡು ಎಲೆಕ್ಷನ್ ಹೋಗ್ತೇವೆ ಎಂಬ ವಿಚಾರದ ಮೇಲೆ ಚರ್ಚೆ ನಡೆಯುತ್ತಿದೆ. ಅವರ ಈ ಬಗ್ಗೆ ಪ್ರಸ್ತಾಪಿಸಿದ ಎಚ್ ಕೆ ಪಾಟೀಲ್ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಹಾಗಾದ್ರೆ ಬೊಮ್ಮಾಯಿ ಅವರಿಗೆ ಮತ್ತೊಂದು ಬಜೆಟ್ ಮಂಡನೆಗೆ ಅವಕಾಶ ಇಲ್ಲವಾ..? ನೀವೂ ಬೊಮ್ಮಾಯಿ ಅವರನ್ನ ಸಿಎಂ ಆಗಿ ಮುಂದುವರೆಸುವ ಹಾಗಿದ್ದರೆ. 2023-24ರ ಬಜೆಟ್ ಬೊಮ್ಮಾಯಿ ಅವರು ಮಂಡನೆ ಮಾಡಬೇಕು. ಈಗಿನ ಬಜೆಟ್ ಇಟ್ಟುಕೊಂಡು ಎಲೆಕ್ಷನ್ ಗೆ ಹೋಗ್ತೀವಿ ಅಂದ್ರು. ಬಿಎಸ್ವೈ ಹೇಳಿಕೆ ನೋಡಿದ್ರೆ ಎಲೆಕ್ಷನ್ ಮಾಡಲು ಹೊರಟ ಹಾಗಿದೆ ಎಂದಿದ್ದಾರೆ.

ಇನ್ನು ಕಳೆದ ಕೆಲವು ತಿಂಗಳಿನಿಂದ ಸಿಎಂ ಬದಲಾವಣೆ ವಿಚಾರ ಓಡಾಡುತ್ತಲೇ ಇದೆ. ಆದ್ರೆ ಈ ವಿಚಾರವನ್ನ ಹೈಕಮಾಂಡ್ ತೆಗೆದು ಹಾಕಿದೆ. ಬಿಜೆಪಿಯ ಒಳಗಿನ ನಾಯಕರು ಕೂಡ ನಾಯಕತ್ವ ಬದಲಾವಣೆಯ ಮಾತೇ ಇಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯೂ ನಡೆಯಲಿದೆ ಎಂದಿದ್ದಾರೆ. ಈ ಮಧ್ಯೆ ವಿಧಾನಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿದೆ.

Share This Article
Leave a Comment

Leave a Reply

Your email address will not be published. Required fields are marked *