Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಮದಕರಿಪುರ PDO

Facebook
Twitter
Telegram
WhatsApp

ಚಿತ್ರದುರ್ಗ, (ಮಾ.07) : ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯತಿ PDO ಅವರು ಶಾಲಾ ಶಿಕ್ಷಕರೋರ್ವರಿಂದ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಆರೋಪಿಯು ಚಳ್ಳಕೆರೆ ರಸ್ತೆಯ ಅಕ್ಷಯ ಗ್ಲೋಬಲ್ ಆಸ್ಪತ್ರೆ ಹಿಂಭಾಗದ ಶ್ರೀರಾಮ್ ಬಡಾವಣೆಯ ಪ್ರಾಥಮಿಕ ಶಾಲಾ ಶಿಕ್ಷಕರ ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಈ ಸಂಬಂಧವಾಗಿ ದೂರುದಾರರು ಎಸಿಬಿ ಠಾಣೆಗೆ ಹಾಜರಾಗಿ ನೀಡಿರುತ್ತಾರೆ. ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.

ಇಂದು (ಸೋಮವಾರ) ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದೂರುದಾರರೊಂದಿಗೆ ಮದಕರಿಪುರ ಗ್ರಾಮ ಪಂಚಾಯಿತಿ ಕಛೇರಿಗೆ ಹಾಜರಾಗಿ ತನ್ನ ಬಾಕಿಯಿದ್ದ ಕೆಲಸದ ಬಗ್ಗೆ ಪಿ.ಡಿ.ಓ.ರವರನ್ನು ಭೇಟಿ ಮಾಡಿ ವಿಚಾರಿಸಿದ್ದು, ಪಿ.ಡಿ.ಓ. ಲಂಚದ ಹಣವನ್ನು ನೀಡುವಂತೆ ತಮ್ಮ ಕೈಸನ್ನೆಯಿಂದ ಸೂಚಿಸಿದ್ದು ಪಿ.ಡಿ.ಓ.ರವರು ಸೂಚಿಸಿದಂತೆ 2ನೇ ಅಪಾದಿತೆ ದೂರುದಾರರು‌ ಲಂಚದ ಹಣವನ್ನು ಪಡೆದಿದ್ದು, ಆರೋಪಿತರನ್ನು ಟ್ರ್ಯಾಪ್ ಮಾಡಲಾಗಿದೆ.

ಆಪಾದಿತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿರುತ್ತದೆ. ಅದೇ ವೇಳೆಯಲ್ಲಿ ಆಪಾದಿತರ ಮನೆಯ ಶೋಧನೆಯನ್ನು ಸಹ ಕೈಗೊಳ್ಳಲಾಯಿತು. ಶೋಧನಾ ಕಾರ್ಯವನ್ನು ಪಿ.ಐ. ಪ್ರವೀಣ್ ಕುಮಾರ್ ವಿ. ರವರ ತಂಡ ಕೈಗೊಂಡಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿದೆ.

ಆ ಸಂದರ್ಭದಲ್ಲಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಪ್ರತಾಪ್‌ರೆಡ್ಡಿ., ಡಿ.ವೈ.ಎಸ್.ಪಿ, ಹಾಗೂ ಉಮೇಶ್ ಕುಮಾರ್ ಎಸ್.ಎಮ್., ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ಶ್ರೀ ಎ. ಮಾರುತಿರಾಂ, ಹೆಚ್.ಸಿ., ಶ್ರೀ ಜಿ.ಎಸ್, ಓಬಣ್ಣ, ಹೆಚ್.ಸಿ., ಶ್ರೀ ಹರೀಶ್‌ಕುಮಾರ್, ಹೆಚ್.ಸಿ. ಶ್ರೀ ಫಕೃದ್ದೀನ್, ಪಿ.ಸಿ., ಶ್ರೀ ಕೆ.ಬಿ. ಯತಿರಾಜ, ಪಿ.ಸಿ., ಶ್ರೀ ಎಮ್. ಫಯಾಜ್, ಪಿ.ಸಿ. ಇವರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶರಣ ಸಂಸ್ಕøತಿ 2024 : ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ 2024ರ ಅಂಗವಾಗಿ ಶ್ರೀಜಯದೇವ ಕಪ್ ಪಂದ್ಯಾವಳಿಯ ನಿಮಿತ್ತ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ

Exit Poll-2024 : ಹರಿಯಾಣ ಜಮ್ಮು ಮತ್ತು ಕಾಶ್ಮೀರದಲ್ಲಿ ರೋಚಕ ಫಲಿತಾಂಶ : ಇಲ್ಲಿದೆ ಎಕ್ಸಿಟ್ ಪೋಲ್‌ ಮಾಹಿತಿ…!

  ಸುದ್ದಿಒನ್, ಅಕ್ಟೋಬರ್. 05 : ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ (ಅಕ್ಟೋಬರ್ 5) ಮತದಾನ ಪೂರ್ಣಗೊಂಡಿದೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಅಕ್ಟೋಬರ್

ಕೇವಲ ಗಂಟು ಮಾಡಿಕೊಳ್ಳುಲು ಶಾಸಕರಾಗಿದ್ದರೆಯೇ ವಿನಃ ಅಭಿವೃದ್ದಿಗಾಗಿ ಅಲ್ಲ : ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಆರೋಪ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 05 : ಮೊಳಕಾಲ್ಮೂರು ಕ್ಷೇತ್ರದಲ್ಲಿ ‌ಮರಳು ಮಾಫಿಯಾ, ಭೂ ಕಬಳಿಕೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.

error: Content is protected !!