ಜೈಲಿಗೆ ಹೋಗಿ ಬಂದವನು ನೀನು, ದೇಶದ್ರೋಹಿ : ಏನಿದು ಡಿಕೆಶಿ, ಈಶ್ವರಪ್ಪ ಕಿತ್ತಾಟ..?

1 Min Read

 

ಬೆಂಗಳೂರು: ಇಂದು ಸದನದಲ್ಲಿ ಉಭಯ ನಾಯಕರ ಕಿತ್ತಾಟ, ಕಿರುಚಾಟವೇ ಜೋರಾಗಿತ್ತು. ಅದರಲ್ಲೂ ಡಿಕೆಶಿ ಮತ್ತು ಈಶ್ವರಪ್ಪ ಕೆಳಮಟ್ಟದಲ್ಲೇ ಬೈದಾಡಿಕೊಂಡ ಘಟನೆ ನಡೆದಿದೆ.

ದೇಶದ್ರೋಹಿ ವಿಚಾರಕ್ಕೆ ಒಬ್ಬರಿಗೊಬ್ಬರು ನಿಂದಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನ ನೀನು ಜೈಲಿಗೆ ಹೋಗಿ ಬಂದವನು. ನೀನು ದೇಶದ್ರೋಹಿ ಎಂದು ಸಚಿವ ಈಶ್ವರಪ್ಪ ಅಂದೊಡನೆ ಇತ್ತ ಕೆಂಡಾಮಂಡಲಾರಾದ ಕೆಪಿಸಿಸಿ ಅಧ್ಯಕ್ಷ ಡಿ‌ಕೆ ಶಿವಕುಮಾರ್ ನಿಮ್ಮ ದೇಶದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೈಲಿಗೆ ಹೋಗಿ ಬಂದವನು, ಈಗ ಬೇಲ್ ಮೇಲೆ ಹೊರಗೆ ಬಂದಿದ್ದೀಯಾ. ಮತ್ತೆ ಯಾವಾಗ ಜೈಲಿಗೆ ಹೋಗ್ತಿಯೋ ನೋಡಿಕೋ ಎಂದು ಈಶ್ವರಪ್ಪ ಮತ್ತಷ್ಟು ಜಗಳವಾಡಿದ್ದಾರೆ. ಈ ವೇಳೆ ಸ್ಪೀಕರ್ ಕಾಗೇರಿ ಅವರು ಇಬ್ಬರನ್ನು ಸಮಾಧಾನಪಡಿಸಿ, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ಮಾತು ತಾರಕಕ್ಜೇರಿ, ಇಬ್ಬರು ನಾಯಕರು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದಂತು ನೋಡುಗರಿಗೆ ಕೊಂಚ ಅಸಹ್ಯವೆನಿಸದೆ ಇರದು.

Share This Article
Leave a Comment

Leave a Reply

Your email address will not be published. Required fields are marked *