ತುಮಕೂರು: 500 ರೂಪಾಯಿ ಬೆಟ್ಟಿಂಗ್ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊರಟಗಯಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿ ವೇಳೆ 500 ರೂಪಾಯಿಯನ್ನು ಪರಮೇಶ್ವರ್ ಅವರು ಬೆಟ್ಟಿಂಗ್ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆ ನೀಡಿದೆ.
ಜನಪ್ರತಿನಿಧಿಗಳ ಕೋರ್ಟ್ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿತ್ತು. ಈ ಸಂಬಂಧ ಪರಮೇಶ್ವರ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠವು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತೆಗೆದುಕೊಂಡ ತೀರ್ಮಾನದ ಬಗ್ಗೆ ಪ್ರಶ್ನೆ ಮಾಡಿತ್ತು. ಗೃಹಸಚಿವ ಪರಮೇಶ್ವರ್ ಯಾವ ಗ್ಯಾಂಗ್ನ ಸದಸ್ಯರು? ಈ ವಿಚಾರವನ್ನು ತಮಾಷೆಗೆ ಹೇಳಿರುವುದು ಅಲ್ಲವೇ? ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ನೋಟಿಸ್ ನೀಡಬೇಕಿತ್ತು ಅಲ್ವಾ? ಅಂತ ಪ್ರಶ್ನಸಿದರು. ಇದೇ ವೇಳೆ ಪೊಲೀಸರು ಹಾಗೂ ದೂರುದಾರ ನಿಗೆ ನೋಟೀಸ್ ನೀಡಿ, ಹೈಕೋರ್ಟ್ ವಿಚಾರಣೆಯನ್ನ ಮುಂದೂಡಿದೆ.

ಇತ್ತೀಚೆಗೆ ಚಿಕ್ಕೋಡಿ ಹಾಗೂ ವಿಜಯಪುರ ನಡುವೆ ಕಬ್ಬಡಿ ಪಂದ್ಯಾವಳಿ ನಡೆದಿತ್ತು. ಈ ಪಂದ್ಯಾವಳಿಯಲ್ಲಿ ಚಿಕ್ಕೋಡಿ ತಂಡ ಗೆಲ್ಲುತ್ತೆ ಅಂತ ಪರಮೇಶ್ವರ್ ಅವರು 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದರು. ಆದರೆ ವಿಜಯಪುರ ತಂಡ ಗೆದ್ದಿತ್ತು. ಆಗ ಡಿಸಿಗೆ ಪರಮೇಶ್ವರ್ ಅವರು 500 ರೂಪಾಯಿ ನೀಡಿದ್ದರು. ಇದನ್ನ ಗಮನಿಸಿದ್ದಂತ ನಾಗಭೂಷಣ್ ಅವರು ಕೋರ್ಟ್ ಗೆ ಹೋಗಿದ್ದರು. ಪರಮೇಶ್ವರ್ ಅವದ ವಿರುದ್ಧ ದೂರು ದಾಖಲಿಸುವಂತೆ, ಎಫ್ಐಆರ್ ಹಾಕುವಂತೆ ಮನವಿ ಮಾಡಿದ್ದರು. ಕೋರ್ಟ್ ಕೂಡ ದೂರುದಾರನ ಮನವಿ ಸ್ವೀಕಾರ ಮಾಡಿತ್ತು. ಇದೀಗ ಹೈಕೋರ್ಟ್ ನಲ್ಲಿ ಪರಮೇಶ್ವರ್ ವಿರುದ್ಧ ಎಫ್ಐಆರ್ ದಾಖಲಿಸದಂತೆ ತಡೆ ನೀಡಲಾಗಿದೆ.
















