Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಗ್ರಾಮಸ್ಥರಿಗೆ ಕಾಗೆ ಕಾಟ : ಆಂಜನೇಯನ ಶಾಪವೇ ಇದಕ್ಕೆ ಕಾರಣವಾ..?

Facebook
Twitter
Telegram
WhatsApp

ಚಿತ್ರದುರ್ಗ : ಒಂದೇ ಒಂದು ಕಾಗೆಗೆ ಇಡೀ ಗ್ರಾಮದ ಜನ ಹೆದರುತ್ತಾರೆ ಅಂದರೆ ನಂಬ್ತೀರಾ. ನಂಬಲೇಬೇಕು ಅಂತದೊಂದು ಸ್ಥಿತಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಓಬಳಾಪುರದಲ್ಲಿ ನಡೆಯುತ್ತಿದೆ. ಕಾಗೆಯಿಂದಾಗಿ ಗ್ರಾಮದ ಜನ ಧೈರ್ಯವಾಗಿ ಓಡಾಡುವುದನ್ನೇ ನಿಲ್ಲಿಸಿದ್ದಾರೆ.

ಹೌದು, ನಿಮಗೆ ಇದು ಕೇಳೋದಕ್ಕೆ ವಿಚಿತ್ರವೆನಿಸಿದರೂ ಸತ್ಯ. ಅದು ಕಾಗೆಗಳ ಗುಂಪು ಅಲ್ಲ. ಕೇವಲ ಒಂದೇ ಒಂದು ಕಾಗೆ ಇಡೀ ಊರಿಗೆ ಊರಿಗೆ ಭಯ ತಂದೊಡ್ಡಿದೆ. ಜನ ಒಬ್ಬೊಬ್ಬರೇ ಹೊರಗಡೆ ಹೋಗೋದಕ್ಕೆ ಹೆದರುತ್ತಿದ್ದಾರೆ. ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಲು ಭಯ ಪಡುತ್ತಿದ್ದಾರೆ. ಒಂದು ವೇಳೆ ಎಮರ್ಜೆನ್ಸಿ ಅಂತ ಒಬ್ಬೊಬ್ಬರೆ ಓಡಾಡಿದ್ರೆ ಆ ಒಂಟಿ ಕಾಗೆ ಅವರ ಮೇಲೆ ಅಟ್ಯಾಕ್ ಮಾಡೋದು ಗ್ಯಾರಂಟಿ.

ಕೆಲವರ ತಲೆಗೆ ಕುಕ್ಕಿ ಗಾಯವನ್ನು ಮಾಡಿದೆ. ಒಂಟಿ ಕಾಗೆ ಇಷ್ಟೆಲ್ಲ ಅವಾಂತರ ಮಾಡೋದಕ್ಕೆ ಕಾತಣವೆನೆಂದು ಗ್ರಾಮದ ಜನರು ಯಾರನ್ನೋ ಕೇಳಿದಾಗ. ಇದು ಆಂಜನೇಯ ಶಾಪವೆಂದು ಹೇಳಿದ್ದಾರಂತೆ. ಕಳೆದ ಹತ್ತು ವರ್ಷಗಳ ಹಿಂದೆ ಆಂಜನೇಯನ ಪ್ರಾಣ ಪ್ರತಿಷ್ಠಾಪನೆಗೆ ಕೈ ಹಾಕಿದ್ದರಂತೆ. ಆದ್ರೆ ಈಗ ಆಂಜನೇಯನ ದೇವಸ್ಥಾನ ಪಾಳು ಬಿದ್ದಿದೆ. ಇದರಿಂದಲೇ ಊರಿಗೆ ಈ ರೀತಿ ಆಗ್ತಾ ಇರೋದು ಎನ್ನಲಾಗಿದೆಯಂತೆ. ಕಾಗೆಯ ಕಾಟವೂ ಅದಕ್ಕೆ ಶುರುವಾಗಿದೆಯಂತೆ. ಆದ್ರೆ ಇದು ನಿನ್ನೆ ಮೊನ್ನೆಯದ್ದಲ್ಲ. ಸುಮಾರು ಆರು ತಿಂಗಳಿಂದ ಕಾಗೆ ಕಾಟ ಕೊಡ್ತಾ ಇದೆಯಂತೆ ಅದ್ಯಾವಾಗ ಕಾಗೆ ಕಾಟ ತಪ್ಪುತ್ತೋ ಅಂತ ಗ್ರಾಮಸ್ಥರು ಕಾಯ್ತಾ ಇದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!