ಬೆಂಗಳೂರು: ಸದ್ಯ ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಒಂದು ಬಾಗಲಕೋಟೆ ಮತ್ತೊಂದು ದಾವಣಗೆರೆ. ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಅವರ ಕುಟುಂಬದವರು ಟಿಕೆಟ್ ಗಾಗಿ ಲಾಬಿ ಮಾಡ್ತಿದ್ರೆ, ಇದೀಗ ಹೆಚ್.ವೈ.ಮೇಟಿ ಅವರಿಂದ ತೆರವಾದ ಬಾಗಲಕೋಟೆ ಕ್ಷೇತ್ರಕ್ಕೆ ಇದೀಗ ಮೇಟಿ ಕುಟುಂಬಸ್ಥರೇ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಟಿಕೆಟ್ ಗಾಗಿ ಲಾಬಿ ಮಾಡಿದ್ದಾರೆ.
ಅದರಲ್ಲೂ ಹೊರಗಿನವರ ನಡುವೆ ಸ್ಪರ್ಧೆ ಇರಲಿ, ಮೇಟಿ ಅವರ ಮಕ್ಕಳ ನಡುವೆಯೇ ಟಿಕೆಟ್ ಗಾಗಿ ಸ್ಪರ್ಧೆ ನಡೆಯುತ್ತಿದೆ. ಮೇಟಿ ಅವರ ಮಗ ಮಲ್ಲಿಕಾರ್ಜುನ ಹಾಗೂ ಉಮೇಶ್ ನಡುವೆ ತೀವ್ರ ಪೈಪೋಟಿ ಉಂಟಾಗಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಿಗೆ ಕೆಲಸ ಮಾಡುತ್ತೀವಿ ಎಂದು ಸುದ್ದಿಗೋಷ್ಟಿ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು. ಆದರೆ ಮೇಟಿ ಅವರ ಮಕ್ಕಳು ಇದಕ್ಕೆ ಸುತರಾಂ ಒಪ್ಪಿಲ್ಲ.
ಮೇಟಿ ಅವರ ಪುತ್ರಿ ಮಹಾದೇವಿ, ನಾನು ಚುನಾವಣೆ ನಡೆಸಿಯೇ ನಡೆಸುತ್ತೀನಿ ಎಂದು ಅಲ್ಲಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಮೂವರು ಮಕ್ಕಳು ಒಂದು ಕಡೆ ಆದರೆ ಮಹಾದೇವಿಯೇ ಪ್ರತ್ಯೇಕವಾಗಿದ್ದಾರೆ. ಹೀಗಾಗಿ ಸ್ಪರ್ಧೆ ಮಾಡಿನೇ ಮಾಡ್ತೀನಿ ಎಂಬ ಹಠವನ್ನು ಕೂಡ ತೊಟ್ಟಿದ್ದಾರೆ. ಇದೇ ಸಭೆ ವೇಳೆ ಕುಟುಂಬದೊಳಗೆ ನಿಮ್ಮ ನಿಮ್ಮಲ್ಲೇ ಟಿಕೆಟ್ಗಾಗಿ ಕಿತ್ತಾಡಿಕೊಂಡ್ರೆ ಬೇರೆಯವರಿಗೆ ಟಿಕೆಟ್ ಹೋಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಈಗ ಎರಡು ಕ್ಷೇತ್ರದಲ್ಲೂ ಟಿಕೆಟ್ ಯಾರಿಗೆ ನೀಡಬೇಕು ಎಂಬುದೇ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















