ಬೆಂಗಳೂರು: ಇಂದು ಸದನದಲ್ಲಿ ಜೆಡಿಎಸ್ ಶಾಸಕ ನೊಇರಿನ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಷ್ಟು ಪ್ಯೂರ್ ನೀರು ಸಿಕ್ತಿದೆ ಹಾಗೇ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎಂಥಾ ನೀರನ್ನ ಕೊಡ್ತಾ ಇದ್ದಾರೆ ಎಂಬ ಬಗ್ಗರ ಧ್ವನಿ ಎತ್ತಿದ್ದಾರೆ. ಎರಡು ಬಾಟೆಲ್ ನಲ್ಲಿ ನೀರು ತಂದು ಸದನದಲ್ಲಿ ಅದನ್ನ ಪ್ರದರ್ಶನ ಮಾಡಿದ್ದಾರೆ. ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಿ ಬಿಡಲಾಗುತ್ತಿದೆ. ಅದರಲ್ಲಿ ರಾಸಾಯನಿಕ ಮಿಶ್ರಿತ ನೊರೆ ಕಂಡು ಬರುತ್ತಿದೆ ಎಂದಿದ್ದಾರೆ.
ಈ ನೀರನ್ನ ಕೆರೆಗೆ ತುಂಬಿಸ್ತಾ ಇರುವುದರಿಂದ ಜಲಚರಗಳಿಗೆ ಹಾನಿ ಉಂಟಾಗುತ್ತಿದರ. ಕೃಷಿ ಚಟುವಟಿಕೆಗೂ ಈ ನೀರನ್ನೇ ಉಪಯೋಗಿಸುತ್ತಿರುವ ಕಾರಣ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ. ಈ ಬೇಳೆಗಳ ಸೇವನೆಯಿಂದ ಜನರು ಕೂಡ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂದು ಸಮೃದ್ಧಿ ಮಂಜುನಾಥ್ ಆರೋಪ ಮಾಡಿದರು.
ಇದಕ್ಕೆ ಸದನದಲ್ಲಿಯೇ ಸಚಿವ ಕೃಷಗಣ ಭೈರೇಗೌಡ ಅವರು ಕೂಡ ಉತ್ತರಿಸಿದ್ದಾರೆ. ಹದಗೆಟ್ಟ ಪರಿಸ್ಥಿತಿಯಲ್ಲಿ ನೀರು ಪೂರೈಕೆ ಮಾಡಿದ್ದೇವೆ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ. ಆದರೆ ಈ ಹಿಂದೆ ಭದ್ರಾ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದವರು ಪೂರೈಕೆ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದರಿಂದ ಅನುಕೂಲ ಇಲ್ಲ. ಯಾವ ರೈತರಿಗೂ ಯೊಂದರೆ ಆಗದಂತೆ ನೋಡುತ್ತೇವೆ. ವೈಜ್ಞಾನಿಕ ಆಧಾರದಲ್ಲಿ ಸಾಬೀತಾದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದರು. ವೈಜ್ಞಾನಿಕ ವರದಿ ಇಲ್ಲದೆ ಆರೋಪ ಮಾಡುವುದಿ ಸರಿಯಲ್ಲ. ವಿದೇಶದ ತಂಡ ಹಾಗೂ ಕೇಂದ್ರದ ತಂಡ ಕೂಡ ಬಂದು ಕೆರೆಯನ್ನು ನೋಡಿ ಹೊಗಳಿ ಹೋಗಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.







