ಚಿತ್ರದುರ್ಗದ ಹರ್ಷಿಣಿಗೆ ಜ್ಞಾನ ಯೋಗಿ ಶಿವಶರಣೆ ಗಂಗಾಂಬಿಕೆ ಪ್ರಶಸ್ತಿ

0 Min Read

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವ ಕನ್ನಡ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನ-2026ರ ಶಿವಶರಣೆ ಗಂಗಾಬಿಕೆ ಪಶಸ್ತಿಯನ್ನು ಕೆ.ಕೆ.ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಹರ್ಷಿಣಿ ಪಡೆದಿರುತ್ತಾರೆ.

ಮಾರ್ಚ್ 8 ರಂದು ಇಂಡೋಗ್ಲೋಬ್ ಪದವಿ ಪೂರ್ವ ಕಾಲೇಜು, ಹೆಸರಘಟ್ಟ, ಬೆಂಗಳೂರು ಇಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕೆ.ಕೆ.ನ್ಯಾಷನಲ್ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರು ಕ್ರೀಡೆಯಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಅಧ್ಯಕ ಈ.ರವೀಶ್ ಅಕ್ಕರ್ ರವರು ಈ ಪ್ರಶಸ್ತಿಯನ್ನು ಕೊಟ್ಟಿರುತ್ತಾರೆ. ಹರ್ಷಿಣಿ.ಜಿ ಚಿತ್ರದುರ್ಗದ ಶ್ರೀಮತಿ ಕೆ.ಜಿ.ಸವಿತ ಮತ್ತು ಎಂ.ಎಸ್.ಗಿರೀಶ್ ರವರ ಪುತ್ರಿಯಾಗಿದ್ದಾರೆ.

Share This Article