Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೋದಿ ಸಾಲನೇ‌ ಮಾಡಿಲ್ವಾ : ಸಿದ್ದರಾಮಯ್ಯ ಪ್ರಶ್ನೆ

---Advertisement---

ಮೈಸೂರು: ರಾಜ್ಯ ಸರ್ಕಾರ ಕೋಟಿ ಕೋಟಿ ಸಾಲ ಮಾಡಿದೆ ಅಂತ ವಿರೋಧ ಪಕ್ಷದ ನಾಯಕರು ಆರೋಪ ಮಾಡ್ತಿದ್ದಾರೆ. ಈ ಸಂಬಂಧ ಗರಂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು, ಮೋದಿ ಎಷ್ಟು ಸಾಲ ಮಾಡಿದ್ದಾರೆ ಅಂತ ನೋಡಿದ್ದಾರಾ ಅವರು. ಸಾಲ ಮಾಡಲೇಬೇಕಾದ ಅನಿವಾರ್ಯತೆ ಇದೆ. ಸಾಲ ಮಾಡದೆ ಅಭಿವೃದ್ಧಿ ಮಾಡುವುದಕ್ಕೆ ಆಗಲ್ಲ. ಕೆಲ ಮಾನದಂಡಗಳ ಮಿತಿಯಲ್ಲಿ ಮಾಡಿರೋದು. ಸಾಲ 25% ಒಳಗೆ ಇರಬೇಕು ಅನ್ನೋದು ಆ ಆಕ್ಟ್ ಹೇಳುತ್ತೆ.

ನಮ್ಮ ಸಾಲ ಏನಿದೆ ಅದು 25.94% ಇದೆ. 25 ಒಳಗಿದ್ಯಾ. ಅವರು ಬಹುಶಃ ಆಕ್ಟ್ ನ ಓದಿಕೊಳ್ಳುವುದು ಬಹಳ ಒಳ್ಳೆಯದು. ಕೇಂದ್ರದ ಸಾಲ ಎಷ್ಟಿದೆ ಅನ್ನೋದು ಗೊತ್ತಾ ನಿಮಗೆ. ಅಶೋಕನಿಗೆ ಗೊತ್ತಾ..? 218 ಲಕ್ಷ ಕೋಟಿ ಸಾಲ ಇದೆ. ಮೋದಿಯವರು ಬಂದ್ಮೇಲೆ 11 ವರ್ಷಕ್ಕೆ ಎಷ್ಟು ಸಾಲ ಮಾಡಿದ್ದಾರೆ ಅನ್ನೋದು ಗೊತ್ತಾ..? 165 ಲಕ್ಷ ಕೋಟಿ. ಅದು ಎಷ್ಟು ಪರ್ಸಂಟೇಜ್ ಇದೇ ಗೊತ್ತಾ. 55.6%. ನಮ್ಮದು 3% ಒಳಗೆ ಇದೆ. ನಮ್ಮದು ಜಿಡಿಪಿ ಎಷ್ಟು ಗೊತ್ತಾ 33,5,500 ಕೋಟಿ ಅಂದ್ರೆ ನಾವೂ 25% ಪರ್ಸೆಂಟ್ ಒಳಗೆ ಇದೆ. ಅದನ್ನ ತಿಳಿದುಕೊಳ್ಳುವುದಿ ಒಳ್ಳೆಯದು. ಹೆಚ್ಚಾಗಿ ಸಾಲ ಮಾಡಿದ್ದೀವಿ ಎಂಬುದು ಸತ್ಯಕ್ಕೆ ದೂರವಾದಂತ ಮಾತು. ಸಾಲ ಮಾಡಿದ್ದೀವಿ, ಮಾನದಂಡದ ಒಳಗೇನೆ ಸಾಲ ಮಾಡಿದ್ದೀವಿ ಎಂದಿದ್ದಾರೆ.

ಇದೇ ವೇಳೆ ಬಜೆಟ್ ಬಗ್ಗೆ ಮಾತನ್ನಾಡಿ, ನಾನು ಇದಿ 17ನೇ ಬಜೆಟ್ ಮಂಡನೆ ಮಾಡಿರೋದು. ಹೈಕಮಾಂಡ್ ಅವರು ಅವಕಾಶ ಕೊಟ್ಟರೆ ಇನ್ನು ಎರಡು ಮಂಡನೆ ಮಾಡ್ತೀನಿ. ರೆಕಾರ್ಡ್ ಮುರಿಯೋದು ದಾಖಲೆಯಲ್ಲ. ಜನ ಅವಕಾಶಗಳು ಕೊಟ್ಟರೆ ಮಂಡಿಸುತ್ತೇನೆ. ಹೈಕಮಾಂಡ್ ನವರ ಮೇಲೆ ವಿಶ್ವಾಸ ಇಲ್ಲದೆ ಇನ್ನ್ಯಾರ ಮೇಲೆ ಇಡೋದು ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now