ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಪವಿತ್ರಾ ಗೌಡಗೆ ಭಾರೀ ನಿರಾಸೆಯಾಗಿದೆ. ಮಗಳಿಗೆ ಪರೀಕ್ಷೆ ಇರುವ ಕಾರಣ, ಅದರ ನೆಪ ಹೇಳಿ ಕೋರ್ಟ್ ಗೆ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಕೋರ್ಟ್ ಆ ಅರ್ಜಿಯನ್ನ ತಿರಸ್ಕಾರ ಮಾಡಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಜಾಮೀನು ನೀಡಲು ಕೋರ್ಟ್ ತಿರಸ್ಕಾರ ಮಾಡಿದೆ.
ಹಿರಗಡೆ ಅದ್ದೂರಿ ಜೀವನ ನಡೆಸಿದ್ದಂತ ಪವಿತ್ರಾ ಗೌಡ, ಈಗ ಜೈಲಿನಲ್ಲಿ ನಾಲ್ಕು ಗೋಡೆಗಳ ಒಳಗೆ ಜೀವನ ನಡೆಸುವಂತೆ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ಪವಿತ್ರಾ, ಜಾಮೀನಿಗಾಗಿ ಬಹಳಷ್ಟು ಕಸರತ್ತು ನಡೆಸುತ್ತಿದ್ದಾರೆ. ಆದರೂ ಜಾಮೀನು ಮಾತ್ರ ಸಿಗುತ್ತಿಲ್ಲ. ಇತ್ತೀಚೆಗಷ್ಟೇ ಮನೆ ಊಟ ಬೇಕೆಂದು ಕೋರ್ಟ್ ಮುಂದರ ಮನವಿ ಮಾಡಿದ್ದರು. ಆದರೆ ಎಲ್ಲಾ ಕೈದಿಗಳು ಇದೇ ಡಿಮ್ಯಾಂಡ್ ಇಡ್ತಾರೆ ಅಂತ ಪೊಕೀಸರು ಅದಕ್ಕೂ ಕೊಕ್ಕು ತಂದರು. ಇದೀಗ ಜಾಮೀನು ಅರ್ಜಿಯೂ ಕ್ಯಾನ್ಸಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಕೆಲವೊಂದು ಸಾಕ್ಷಿಗಳು ಪೊಲೀಸರ ಮುಂದೆಯೇ ಒಂದು ಹೇಳಿಕೆ ನೀಡಿ, ಕೋರ್ಟ್ ನಲ್ಲಿ ಆ ಹೇಳಿಕೆಗೆ ಹೋಲಿಕೆಯೇ ಅಲ್ಲದ ಹೇಳಿಕೆಗಳನ್ನ ನೀಡ್ತಾ ಇದ್ದಾರೆ. ಇದು ಆರೋಪಿ ಸ್ಥಾನದಲ್ಲಿರುವವರಿಗೆ ಅನುಕೂಲವನ್ನು ಸೃಷ್ಟಿ ಮಾಡಿಕೊಡಲಿದೆ. ಸದ್ಯ ಟ್ರಯಲ್ ನಡೆಯುತ್ತಿರುವ ಕಾರಣ, ಮಧ್ಯಂತರ ಜಾಮೀನು ನೀಡಲು ಅವಕಾಶ ಕಷ್ಟ ಸಾಧ್ಯ ಎನಿಸುತ್ತದೆ. ಟ್ರಯಲ್ ಬಳಿಕ ಆರೋಪಿಗಳ ಭವಿಷ್ಯ ಏನಾಗಲಿದೆ ಎಂಬುದನ್ಮ ನೋಡಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











