Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶಬರಿಮಲೆಗೆ ಹೋಗಿದ್ದ ಪಾರಿವಾಳ ಚಿತ್ರದುರ್ಗಕ್ಕೆ..!

---Advertisement---

ಚಿತ್ರದುರ್ಗ: ಪ್ರಾಣಿ ಪಕ್ಷಿಗಳಿಗೆ ನೆನಪಿನ ಶಕ್ತಿ ಹೆಚ್ಚಾಗಿಯೇ ಇರುತ್ತೆ. ಹೀಗಾಗಿಯೇ ಎಲ್ಲಿಯೇ ಬಿಟ್ಟರು ಆ ಪ್ರಾಣಿ ಪಕ್ಷಿಗಳು ಮಾಲೀಕರನ್ನ ಅರಸಿ ಬಂದೇ ಬರುತ್ತವೆ. ಅಂಥಹದ್ದೇ ಘಟನೆ ಇದೀಗ ಚಿತ್ರದುರ್ಗದಲ್ಲಿ ನಡೆದಿದೆ. ಶಬರಿಮಲೆಗೆ ಹೋಗಿದ್ದ ಪಾರಿವಾಳ ಅರಸಿ ಚಿತ್ರದುರ್ಗಕ್ಕೆ ಬಂದಿದೆ. ಈ ಘಟನೆ ನೋಡಿ ಊರಿನ ಮಂದಿ ಆಶ್ಚರ್ಯಚಕಿತರಾಗಿದ್ದಾರೆ.

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ತಳವಾರಟ್ಟಿಯಲ್ಲಿ ಈ ಘಟನೆ ನಡೆದಿರುವಂತದ್ದು. ಈ ಪಾರಿವಾಳದ ಹೆಸರು ಮದಕರಿ. ತಳವಾರಹಟ್ಟಿಯ ರಾಜು ಎಂಬುವವರು ಸಾಕಿದ್ದ ಪಾರಿವಾಳ ಇದಾಗಿದೆ. ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲಧಾರಿಗೆ ರಾಜು ಅವರು ಈ ಪಾರಿವಾಳವನ್ನ ನೀಡಿದ್ದರು‌. ಬಳಿಕ ಅಲ್ಲಿ ಈ ಪಾರಿವಾಳವನ್ನ ಹಾರಿ ಬಿಡಲು ಸೂಚನೆ ನೀಡಿದ್ದರು. ಅದರಂತೆ ಮಾಲಾಧಾರಿಯೊಬ್ಬರು ಡಿಸೆಂಬರ್ 31 ರಂದು ಪಾರಿವಾಳವನ್ನು ಶಬರಿಮಲೆಯಿಂದ ಹಾರಿ ಬಿಟ್ಟಿದ್ದರು. ಆ ಪಾರಿವಾಳ ಜನವರಿ 21 ರಂದು ಚಿತ್ರದುರ್ಗದ ತಳವಾರಹಟ್ಟಿಗೆ ಬಂದು ತಲುಪಿದೆ. ಸರಿಯಾಗಿ ಒಂದು ತಿಂಗಳ ಕಾಲ ಪಾರಿವಾಳ ಜರ್ನಿಯನ್ನ ಮಾಡಿದೆ.

ಈ ಪಾರಿವಾಳ ಬರೋಬ್ಬರಿ 900 ಕಿಲೋ ಮೀಟರ್ ಕ್ರಮಿಸಿ ಗೂಡು ಸೇರಿಕೊಂಡಿದೆ. ಇದು ಮಾಲೀಕನಿಗೆ ಮಾತ್ರ ಖುಷಿ ಕೊಟ್ಟಿರೋದಷ್ಟೇ ಅಲ್ಲ. ಇಡೀ ಗ್ರಾಮಸ್ಥರಿಗೆ ಖುಷಿ ನೀಡಿದೆ. ಎಲ್ಲಿಯೇ ಹೋದರು ತನ್ನ ಮಾಲೀಕನನ್ನು ಮರೆಯದೆ ಬಂದಿರುವುದು ಆಶ್ಚರ್ಯವನ್ನು ಕೂಡ ಉಂಟು ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...