Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕ್ಯಾಲೆಂಡರ್ ವರ್ಷಕ್ಕೆ ಮಾರುಹೋಗುತ್ತಿರುವ ಭಾರತೀಯರು : ಎತ್ತ ಸಾಗುತ್ತಿದ್ದೇವೆ ನಾವು ? ರುದ್ರಮೂರ್ತಿ. ಎಂ .ಜೆ ಅವರ ವಿಶೇಷ ಲೇಖನ

---Advertisement---

ಸುದ್ದಿಒನ್

ವಿಶೇಷ ಲೇಖನ
ರುದ್ರಮೂರ್ತಿ. ಎಂ .ಜೆ
ಚಿತ್ರದುರ್ಗ
ಮೊ : 94486 64932

ನಾವು ಬಹು ಹಿಂದಿನಿಂದಲೂ ಪ್ರಕೃತಿ ಧರ್ಮವನ್ನು ನಂಬಿ ಋತುಮಾನಕ್ಕೆ ತಕ್ಕಂತೆ ನಮ್ಮ ಆಚರಣೆಗಳನ್ನು ಅನುಸರಿಸಿಕೊಂಡು ಬಂದವರು. ಅದು ನಮ್ಮ ಪೂರ್ವಿಕರ ಕೊಡುಗೆಯೂ ಸಹ. ಭಾರತದ ಸಂಸ್ಕೃತಿಗೆ ಮಾರುಹೋದ ಪಾಶ್ಚಿಮಾತ್ಯರೇ ಇಲ್ಲಿನ ನಡೆ- ನುಡಿ ಆಚರಣೆಯ ಬಗೆಗೆ ಖುಷಿಪಟ್ಟು ಹಾಡಿ ಹೋಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದರೆ ಅನುಸರಿಸಿ ನಡೆಯುತ್ತಿದ್ದಾರೆ.

 

ವಿಷಾದದ ಸಂಗತಿ ಎಂದರೆ ನಾವು ಅವರ ಸಂಸ್ಕೃತಿಯ ಅನುಸರಣೆಯಲ್ಲಿ ನಮ್ಮ ವೈಜ್ಞಾನಿಕ, ವೈಚಾರಿಕ, ಸತ್ಸಂಪ್ರದಾಯಗಳನ್ನು ಎಲ್ಲೋ ಒಂದು ಕಡೆ ಮರೆಮಾಚಿ ನಮ್ಮದಲ್ಲದ ಆಚರಣೆಗಳನ್ನು ಅನುಸರಿಸುತ್ತ , ಬೇಡದಾದ ನಡವಳಿಕೆಯತ್ತ ವಾಲುತ್ತಿದ್ದೇವೆ. ಕ್ಯಾಲೆಂಡರ್ ವರ್ಷವನ್ನು ನಾವು ಅದ್ದೂರಿಯಾಗಿ ಸ್ವಾಗತಿಸುವ, ಆಚರಿಸುವ ಸಂದರ್ಭದಲ್ಲಿದ್ದೇವೆ. ಮೊದಲೇ ಹೇಳಿದಂತೆ ನಮ್ಮದು ಪ್ರಕೃತಿ ಧರ್ಮ. ಅದು ಚೈತ್ರ ಮಾಸದ ಪ್ರಕೃತಿಯೊಂದಿಗಿನ ಸಂಬಂಧದ ದ್ಯೋತಕವಾದ ಯುಗಾದಿ ನಮಗೆ ನೂತನ ವರ್ಷಾರಂಭ. ಅಂದು ನಾವು ಸಂಭ್ರಮಿಸಬೇಕೆಂದು ಅದು ಹೇಳುತ್ತದೆ.

 

ನಮ್ಮ ಪೂರ್ವಿಕರು ಆ ಬಗೆಗೆ ಮಾಹಿತಿ ನೀಡಿದ್ದಾರೆ.‌ ಅದು ಸತ್ಯವೂ ಹೌದು. ಬದುಕಿನಲ್ಲಿ ಬರೀ ಖುಷಿ ಇಲ್ಲ,ಬದಲಿಗೆ ಅಲ್ಲಿ ಕಷ್ಟವೂ ಇದೆ. ಅದಕ್ಕಾಗಿ ಸಿಹಿ ಕಹಿಯ ಹೂರಣದ ಮಿಶ್ರಣ ಎಂದು. ಕೆಲ ಹಬ್ಬಗಳ ಆಚರಣೆಗಳಲ್ಲಿ ಕೇವಲ ಬಾಹ್ಯವಾಗಿ ತಿನಿಸುಗಳನ್ನು ಉಂಡು- ತಿಂದು ಒಂದು ದಿನ ಸನ್ನಡತೆಯವರಾದರೆ ಸಾಕೇ…? ಪ್ರತಿದಿನ ನಮ್ಮ ವ್ಯಕ್ತಿತ್ವ ಸುಧಾರಣೆಯತ್ತ ಗಮನ ಹರಿಸುವ, ಒಳ್ಳೆಯ ವಿಚಾರಗಳ ಅನುಷ್ಠಾನಕ್ಕೆ ಮನಸ್ಸು ಮಾಡಬೇಕಿದೆ. ಇದೊಂದು ಸಾಂಕೇತಿಕವಾದ ವರ್ಷಾರಂಭವಷ್ಟೇ.ಬನ್ನಿ ನಾವು ಪ್ರಕೃತಿ ಧರ್ಮ ಪಾಲನೆ ಮಾಡೋಣ..ಯಾಕೆಂದರೆ ಅಲ್ಲಿ ವಿಕಾರ ಇಲ್ಲ. ವಿಕಾಸ ಪ್ರಧಾನವಾದ ನಡೆಗೆ ಅವಕಾಶವಿದೆ. ಯಾಂತ್ರಿಕ ಆಚರಣೆಗೊಂದಿಷ್ಟು ಕಡಿವಾಣ ಹಾಕಿ ನಾಡು -ನುಡಿಯತ್ತ ಗಮನ ಹರಿಸಿ, ನಮ್ಮ ಸಂಸ್ಕೃತಿನ್ನ ವೈಭವಿಕರಿಸಿ, ಮುಂದಿನ ಪೀಳಿಗೆಗೆ ಸನ್ಮಾರ್ಗದ ಪಥವನ್ನ ಬಿಟ್ಟು ಹೋಗುವ ಸಂಕಲ್ಪ ಮಾಡಿ ನಡೆಯೋಣ…

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now