ಹರಿದಾಸ ಹಬ್ಬ ಬೆಳ್ಳಿ ಹಬ್ಬದ ಕಾರ್ಯಕ್ರಮ : ಆಮಂತ್ರಣ ಪತ್ರಿಕೆ ಬಿಡುಗಡೆ

0 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 30 : ನಗರದ ವಾಸವಿ ಶಾಲೆಯ ಆವರಣದಲ್ಲಿ ಜನವರಿ 04 ರಿಂದ 11 ರವರೆಗೆ ನಡೆಯಲಿರುವ ಹರಿದಾಸ ಹಬ್ಬ ಬೆಳ್ಳಿ ಹಬ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರಮ ಪೂಜ್ಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು ಬೆಂಗಳೂರಿನ ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ಬಿಡುಗಡೆಗೊಳಿಸದರು. ಇದೇ ಸಂಧರ್ಭದಲ್ಲಿ ಶ್ರೀಗಳವರನ್ನು ಹರಿದಾಸ ಹಬ್ಬದ ಉದ್ಘಾಟನೆಗೆ ಅಹ್ವಾನಿಸಲಾಯಿತು.

ಈ ಸಂಧರ್ಭದಲ್ಲಿ ಅಧ್ಯಕ್ಷರು ಟಿ ಕೆ ನಾಗರಾಜ ರಾವ್, ಉಪಾಧ್ಯಕ್ಷರುಗಳಾದ ಕೆ. ಗುರುರಾಜ್, ವಾಸುದೇವಮೂರ್ತಿ, ಕಾರ್ಯದರ್ಶಿ ಹುಲಿರಾಜ್ ಜೋಯಿಸ್, ನಿರ್ದೇಶಕ ಶ್ಯಾಮ ಸುಂದರ್ ಮತ್ತು ಖಜಾಂಚಿ ರವಿಕುಮಾರ್ ಉಪಸ್ಥಿತರಿದ್ದರು.

Share This Article
Enable Notifications OK No thanks