ಬೆಂಗಳೂರು: ಕುರ್ಚಿ ಕದನದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ರು. ಈ ಮೀಟಿಂಗ್ ಕಡೆ ಎಲ್ಲರ ಚಿತ್ತ ಇತ್ತು. ಕುತೂಹಲವೂ ಇತ್ತು. ಏನಾದರೂ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲದಿಂದಾನೇ ಎಲ್ಲರೂ ಕಾಯ್ತಾ ಇದ್ರು. ಇದೀಗ ಬ್ರೇಕ್ ಫಾಸ್ಟ್ ಮೀಟಿಂಗ್ ಮುಕ್ತಾಯವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
https://x.com/siddaramaiah/status/1994633660289724858?t=W1C1JIv6yY01aEKHozAFmQ&s=19
ಈ ಮೀಟಿಂಗ್ ನಲ್ಲಿ ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರೋಣಾ ಎಂಬ ನಿರ್ಧಾರಕ್ಕೆ ಇಬ್ಬರು ಬಂದಿದ್ದಾರೆ. ಇನ್ನು ಟ್ವೀಟ್ ನಲ್ಲಿ, ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಜೊತೆಗೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಸಾರಿದ್ದಾರೆ.
ಅಧಿಕಾರ ಹಂಚಿಕೆ, ಕುರ್ಚಿ ಬಿಟ್ಟು ಕೊಡೋದು ಇದೆಲ್ಲವನ್ನು ಹೊರತು ಪಡಿಸಿ ನೋಡಿದಾಗಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಒಂದು ಬಾಂಧವ್ಯ ಕಾಣಿಸುತ್ತದೆ. ಕೆಲವೊಮ್ಮೆ ಮನಸ್ತಾಪಗಳು ಬಂದರು ಒಬ್ಬರಿಗೊಬ್ಬರು ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಮುಖ್ಯಮಂತ್ರಿಗಳು ಎಂಬ ಮಾತನ್ನೇ ಡಿಕೆ ಶಿವಕುಮಾರ್ ಹೇಳಿರುವ ಸಾಕಷ್ಟು ಉದಾಹರಣೆಗಳು ಇದಾವೆ. ಇದೀಗ ಸಭೆಯ ಬಳಿಕವೂ ಒಗ್ಗಟ್ಟಿನ ಮಂತ್ರವನ್ನು ಸಾರಿದ್ದಾರೆ. ಕುರ್ಚಿ ಕದನಕ್ಕೆ ರಾಜ್ಯದ ನಾಯಕರೇನೋ ಒಂದು ತೀರ್ಮಾನಕ್ಕೆ ಬಂದಾಗಿದೆ. ಇನ್ನು ಹೈಕಮಾಂಡ್ ನಾಯಕರು ಕೂತು ಚರ್ಚೆ ಮಾಡಬೇಕಾಗಿದೆ. ದೆಹಲಿಗೆ ಹೋಗುವ ಮೊದಲು ಇಬ್ಬರು ಕೂತು ಬಗೆಹರಿಸಿಕೊಳ್ಳಿ ಎಂಬ ಮಾತನ್ನ ಹೈಕಮಾಂಡ್ ನಾಯಕರೇ ತಿಳಿಸಿದ್ದರು.






