Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಂಜಾಬ್ ನಲ್ಲಿ ದಲಿತ ಮತಗಳನ್ನೇ ಟಾರ್ಗೆಟ್ ಮಾಡುತ್ತಾ ಕಾಂಗ್ರೆಸ್..?

Facebook
Twitter
Telegram
WhatsApp

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಈ ಬಾರಿಯೂ ಅಧಿಕಾರ ಹಿಡಿಯಬೇಕೆಂದು ಪಣತೊಟ್ಟಿದೆ. ಹೀಗಾಗಿ ದಲಿತ ಮತಗಳನ್ನ ಸೆಳೆಯಲು ಫ್ಲ್ಯಾನ್ ಮಾಡಿಕೊಂಡಿದೆ. ಈ ಹಿನ್ನೆಲೆ ಪಂಜಾಬ್ ಸಿಎಂ ಚರಣ್ ಸಿಂಗ್ ಚೆನ್ನಿ ಅವರು ಎರಡು ಸ್ಥಾನಗಳಿಗೆ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದಾರೆ.

ಈಗಾಗಲೇ 70 ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಯೋಜನೆ ರೂಪಿಸಲಾಗಿದೆ. ಸಭೆಯಲ್ಲಿ ಸಿಎಂ ಚರಣ್ ಸಿಂಗ್ ಚನ್ನಿ ಸ್ಪರ್ಧೆಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಈ ಬಾರಿ ದಲಿತರು ಹೆಚ್ಚಾಗಿರುವ ಕ್ಷೇತ್ರಕ್ಕೆ ಚನ್ನಿಯನ್ನ ಸ್ಪರ್ಧೆಗಿಳಿಸುವ ಯೋಜನೆ ನಡೆದಿದೆ. ದೋಬಾ ಪ್ರದೇಶದಲ್ಲಿ ಬರುವ ಆದಂಪುರ ಪ್ರದೇಶದಿಂದ ಕಣಕ್ಕಿಳಿಸಲು ಚಿಂತಿಸಲಾಗಿದೆ. ಈ ಬಾರಿ ಗೆಲುವಿಗಾಗಿ ಸಾಕಷ್ಟು ಶ್ರಮ ಹಾಕುತ್ತಿದೆ ಎನ್ನಲಾಗಿದೆ.

ಫೆಬ್ರವರಿ 10 ರಿಂದ ಪಂಚರಾಜ್ಯಗಳ ಚುನಾವಣೆ ನಡೆಯಲಿದೆ. ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಕೊರೊನಾ ಹೆಚ್ಚಳದ ಭಯದಿಂದ ಯಾವುದೇ ರೀತಿಯ ಅದ್ದೂರಿ ಪ್ರಚಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಡೋರ್ ಟು ಡೋರ್ ಪ್ರಚಾರಕ್ಕಷ್ಟೇ ಅನುಮತಿ ನೀಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಶತ್ರುಗಳ ಕಾಟ ಅಧಿಕ, ಈ ರಾಶಿಯವರಿಗೆ ಮದುವೆ ಶುಭ ಸೂಚನೆ

ಈ ರಾಶಿಯವರಿಗೆ ಶತ್ರುಗಳ ಕಾಟ ಅಧಿಕ, ಈ ರಾಶಿಯವರಿಗೆ ಮದುವೆ ಶುಭ ಸೂಚನೆ, ಈ ರಾಶಿಯ ದಂಪತಿಗಳಿಗೆ ಸಂತಾನ ಪ್ರಾಪ್ತಿ, ಭಾನುವಾರ- ರಾಶಿ ಭವಿಷ್ಯ ಅಕ್ಟೋಬರ್-20,2024 ಸೂರ್ಯೋದಯ: 06:14, ಸೂರ್ಯಾಸ್ತ : 05:47 ಶಾಲಿವಾಹನ

Bath During Fever: ಜ್ವರ ಬಂದಾಗ ಸ್ನಾನ ಮಾಡಬಹುದಾ ?

ಸುದ್ದಿಒನ್ : ಬದಲಾಗುತ್ತಿರುವ ಹವಾಮಾನದಿಂದಾಗಿ ಕಾಲೋಚಿತ ರೋಗಗಳು ನಿರಂತರವಾಗಿ ಹೆಚ್ಚುತ್ತಿದೆ. ಹಾಗಾಗಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಅಲ್ಲದೆ ಕೆಲವು ಆರೋಗ್ಯಕರ ಕೆಲಸಗಳನ್ನು ತಕ್ಷಣವೇ ಮಾಡುವುದು ಒಳ್ಳೆಯದು. ಇದು ರೋಗಗಳ ಅಪಾಯವನ್ನು

3 ಕ್ಷೇತ್ರಗಳ ಬೈ ಎಲೆಕ್ಷನ್.. ಶಿಗ್ಗಾವಿ, ಸಂಡೂರಿಗೆ ಬಿಜೆಪಿ ಟಿಕೆಟ್ ಘೋಷಣೆ..!

ಬೆಂಗಳೂರು, ಅಕ್ಟೋಬರ್. 19 : ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಇದು ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಕಣವಾಗಿದೆ. ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ

error: Content is protected !!