ಏಕಾಏಕಿ 50‌ ಜನ ಬಂದರು.. : ನಟ ಚಂದನ್ ಹಲ್ಲೆ ಬಗ್ಗೆ ಕೊಟ್ಟ ಪ್ರತಿಕ್ರಿಯೆ ಏನು..?

1 Min Read

 

ಬೆಂಗಳೂರು: ತೆಲುಗು ಧಾರಾವಾಹಿ ಶೂಟಿಂಗ್ ಸಮಯದಲ್ಲಿ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದ ವಿಡಿಯೋ ವೈರಲ್ ಆಗಿದೆ. ಅದಕ್ಕೆ ನಿನ್ನೆ ಸುದ್ದಿಗೋಷ್ಟಿ ಕರೆದು ನಟ ಚಂದನ್ ಕುಮಾರ್ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಜೊತೆಗೆ ನಟಿ ಮತ್ತು ಚಂದನ್ ಹೆಂಡತಿ ಕವಿತಾ ಗೌಡ ಕೂಡ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಚಂದನ್ ಕುಮಾರ್, ಅಲ್ಲಿ 50ಕ್ಕೂ ಹೆಚ್ಚು ಜನ ಒಟ್ಟಿಗೆ ಬಂದು ನನ್ನನ್ನು ಅವಾಚ್ಯ ಶಬ್ಧಗಳಿಂದ ಮಾತನಾಡಿದರು. ನನ್ನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಬಿಟ್ಟು ಅವರೇ ನನಗೆ ಅವಮಾನ ಮಾಡಿದ್ದಾರೆ. ಏಕಾಏಕಿ ಐವತ್ತು ಜನ ಸೇರಿಕೊಂಡು ನನ್ನ ಜೊತೆ ಈ ರೀತಿ ಜೋರು ಮಾಡಿದ್ದಾರೆ.

ಅಲ್ಲಿ ನನಗೆ ಹೊಡೆಯೋದಕ್ಕೆ ಬಂದಾಗಲೂ ಯಾರೂ ಕೂಡ ತಡೆಯಲು ಪ್ರಯತ್ನಿಸಲೇ ಇಲ್ಲ. ಅವಾಚ್ಯ ಶಬ್ದಗಳಿಂದ ಮಾತನಾಡಿದರು. ಕೆಟ್ಟದಾಗಿ ವರ್ತಿಸಿದ್ದಲ್ಲದೆ, ನನ್ನನ್ನು ಹೊಡೆಯೋದಕ್ಕೆ ಬಂದ್ರು. ಎಲ್ಲರೂ ಒಟ್ಟಿಗೆ ಬಂದ್ರು ಎಂದು ಚಂದನ್ ಕುಮಾರ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ತೆಲುಗಿನ ಶ್ರೀಮತಿ‌ ಶ್ರೀನಿವಾಸ್ ಧಾರಾವಾಹಿ ಶೂಟಿಂಗ್ ಟೈಮ್ ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *