ಮಗನನ್ನು ಕಳೆದುಕೊಂಡು 5 ತಿಂಗಳು.. ಈಗ ಇನ್ನೊಬ್ಬ ಕಾರ್ಯಕರ್ತನ ಹತ್ಯೆ : ಹರ್ಷನ ತಾಯಿ ಬೇಸರ

1 Min Read

ಶಿವಮೊಗ್ಗ: ಮೂವರು ದುಷ್ಕರ್ಮಿಗಳು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನನ್ನು ಹತ್ಯೆ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಶಿವಮೊಗ್ಗದಲ್ಲಿಯೂ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿತ್ತು. ಇದೀಗ ಹರ್ಷನ ತಾಯಿ ಪ್ರವೀಣ್ ಸಾವಿಗೆ ಮರುಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹರ್ಷನ ತಾಯಿ ಪದ್ಮಾ, ಮಗನನ್ನು ಕಳೆದುಕೊಂಡು ಐದು ತಿಂಗಳಾಗಿದೆ. ಈಗ ಇನ್ನೊಬ್ಬ ಕಾರ್ಯಕರ್ತನ ಕೊಲೆಯಾಗಿದೆ. ಹೀಗೆ ಕೊಲೆಗಳು ನಡೆಯುತ್ತಿದ್ದರೆ ಹೊಣೆ ಯಾರು..? ಹರ್ಷನ ಕೊಲೆ ಬಳಿಕ ಪರಿಸ್ಥಿತಿ ಏನು ಬದಲಾಗಿಲ್ಲ. ಅಂತ್ಯಕ್ರಿಯೆಗೆ ಹೋದವರ ಮೇಲೆ ಲಾಠೊಚಾರ್ಜ್ ಆಗಿದೆ. ಅನೇಕರಿಗೆ ಗಾಯವಾಗಿದೆ.

ಹಾಗಾದ್ರೆ ಸಾವಿಗೆ ನ್ಯಾಯ ಕೇಳಲು ಹೋಗಿದ್ದೇ ತಪ್ಪಾ..? ಪ್ರವೀಣ್ ತಂದೆ-ತಾಯಿಗೆ ಎಷ್ಟು ನೋವಾಗಿದೆ. ಕೂಡಲೇ ತನಿಖೆ ನಡೆಸಿ ಆರೋಪಿಗಳ ಬಂಧಿಸಬೇಕು. ಮತ್ತೆ ಈ ರೀತಿಯ ಕೃತ್ಯ ಮಾಡುವವರಿಗೆ ಭಯ ಹುಟ್ಟುವಂತೆ ಮಾಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೂ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ. ಹರ್ಷನ ಕುಟುಂಬಕ್ಕೆ ಸಹಾಯ ಮಾಡಿದಂತೆ ಪ್ರವೀಣ್ ಕುಟುಂಬಕ್ಕೂ ಸಹಾಯ ಮಾಡಬೇಕೆಂದು ಹರ್ಷನ ತಾಯಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *