26 ಜನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ : ರೆಡ್ಡಿ‌ ಮನೆ ಮುಂದೆ ಪತ್ತೆಯಾಯ್ತು ಬುಲೆಟ್..!

1 Min Read

ಬಳ್ಳಾರಿ: ರಾಯಲಸೀಮೆಯಲ್ಲಿ ಹೊತ್ತಿಕೊಂಡ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಜನ ಅರೆಸ್ಟ್ ಆಗಿದ್ದಾರೆ. ಎಲ್ಲರನ್ನು ಪರಪ್ಪನ ಅಗ್ರಹಾರದ ಅತಿಥಿಗಳನ್ನಾಗಿಸಿದ್ದಾರೆ.ಬ್ರೂಸ್ ಪೇಟೆ ಪೊಲೀಸರು ಈ ಸಂಬಂಧ ತನಿಖೆಯನ್ನ ಮುಂದುವರೆಸಿದ್ದಾರೆ. ಇಂದು ಕಾಂಗ್ರೆಸ್ ನ 11 ಆರೋಪಿಗಳು ಬಿಜೆಪಿಯ 15 ಜನ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.

ನ್ಯಾಯಾಲಯವೂ ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ 26 ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜನವರಿ 19ರವರೆಗೂ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಆರೋಪಿಗಳು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಇದರ ನಡುವೆ ಶಾಸಕ ಜನಾರ್ದನ ರೆಡ್ಡಿ ಮನೆಯಲ್ಲಿ ದೊಣ್ಣೆಗಳ ರಾಶಿ ಪತ್ತೆಯಾಗಿದೆ. ಗಲಾಟೆಯಲ್ಲಿ ರೆಡ್ಡಿ ಬೆಂಬಲಿಗರು ದೊಣ್ಣೆಯಿಂದ ದಾಳಿ ಮಾಡಿದ ಆರೋಪ ಕೇಳಿ ಬಂದಿದೆ.

ಈ ಸಂಬಂಧ ತನಿಖೆಯೂ ಮುಂದುವರೆದಿದೆ‌. ಫೈರಿಂಗ್ ನಡೆದು ನಾಲ್ಕೈದು ದಿನಗಳ ಬಳಿಕ ಬಳ್ಳಾರಿಯ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಎಂಟ್ರಿ ಕೊಟ್ಟಿದೆ. ಹುಬ್ಬಳ್ಳಿಯ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬುಲೆಟ್ ಗಾಗಿ NLJD ಮತ್ತು DSMD ಯಂತ್ರಗಳ ಮೂಲಕ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಮನೆ ಮುಂಭಾಗದಲ್ಲಿ ಗಲಾಟೆಯ ಸ್ಥಳದಲ್ಲಿ 9MM ಬುಲೆಟ್ ಪತ್ತೆಯಾಗಿದೆ. ಇತ್ತ SOCO, FSL ತಂಡದಿಂದ ಸಾಕ್ಷ್ಯಗಳ ಶೋಧ ಕಾರ್ಯ ಕೂಡ ನಡೆಯುತ್ತಿದೆ. ಬುಲೆಟ್ ಸಿಕ್ಕಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಯಾರ ಗನ್ ನಿಂದ ಬುಲೆಟ್ ಹಾರಿದೆ ಎಂಬುದನ್ನು ಈ ಮೂಲಕ ಪತ್ತೆ ಹಚ್ಚಬಹುದಾಗಿದೆ.

Share This Article