ಹೆಣ್ಣು ಸಿಕ್ತಿಲ್ಲ ಅಂತ ಶಿರಸಿಯ ಯುವಕ‌ ಆತ್ಮಹತ್ಯೆಗೆ ಶರಣು..!

suddionenews
1 Min Read

 

ಶಿರಸಿ: ಇತ್ತಿಚೆಗೆ ಮದುವೆಗೆ ಹೆಣ್ಣು ಸಿಕ್ತಿಲ್ಲ ಅನ್ನೋದು ಎಲ್ಲರಿಗು ಗೊತ್ತಿರುವ ವಿಚಾರ. ಹಳ್ಳಿ ಕಡೆಗಳಲ್ಲಿ ಇರುವ ಗಂಡು ಮಕ್ಕಳಿಗೆ ಹುಡುಗಿಯರನ್ನು ಕೊಡುವುದು ಇನ್ನು ಕಷ್ಟವಾಗಿದೆ. ಇದೇ ವಿಚಾರಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ನಾಗರಾಜ್ ಗಣಪತಿ ಗಾಂವ್ಕರ ಎಂಬಾತ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ವಯಸ್ಸು ಈಗ 35 ಆಗಿತ್ತು. ಕಾಯಕದಲ್ಲಿ ಕೃಷಿಯನ್ನೇ ನಂಬಿಕೊಂಡು ಕೂತಿದ್ದರು. ಊರಲ್ಲಿಯೇ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರು. 35 ವರ್ಷವಾದರೂ ಇನ್ನು ಮದುವೆಯಾಗಿರಲಿಲ್ಲ. ಆಗಬೇಕೆಂದುಕೊಂಡರು ಹುಡುಗಿ ಸಿಕ್ಕಿರಲಿಲ್ಲ.

ಇದರಿಂದ ಮನನೊಂದ ನಾಗರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *