ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸುರ್ಜೆವಾಲ್ ಗೆ ಸಿಎಂ ಬೊಮ್ಮಾಯಿ ತಿರುಗೇಟು..!

suddionenews
1 Min Read

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸುರ್ಜೆವಾಲ್ ಗೆ ಸಿಎಂ ಬೊಮ್ಮಾಯಿ ತಿರುಗೇಟು..!

ಹುಬ್ಬಳ್ಳಿ: ಶಿಗ್ಗಾಂವಿಯಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಶಿವಾಜಿ ಮಹಾರಾಜರ ಬಗ್ಗೆ ಗುಣಗಾನ ಮಾಡಿದ್ದಾರೆ. ಮರಾಠಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧ. ಶಿವಾಜಿ ಮಹಾನ್ ಸಾಧಕರಾಗಿದ್ರು, ಸ್ಚಪ್ರೇರಣೆ ಹೊಂದಿದ್ರು ಎಂದು ಶಿವಾಜಿ ಬಗ್ಗೆ ಗುಣಗಾನ ಮಾಡಿದ ಸಿಎಂ ಬೊಮ್ಮಾಯಿ.

ಇದೆ ವೇಳೆ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿರುವ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯವರಿಗೆ ಹೊಸ ನರಕ ತೋರಿಸಬೇಕು ಎಂಬ ಸುರ್ಜೆವಾಲ್ ಹೇಳಿಕೆಗೆ, ಈಗಾಗಲೇ ಜನ ಕಾಂಗ್ರೆಸ್ ನವರಿಗೆ ನರಕ ತೋರಿಸಿದ್ದಾರೆ ಎಂದಿದ್ದಾರೆ.

ಇನ್ನು ಬಜೆಟ್ ವಿಚಾರಕ್ಕೆ ಕಿವಿಗೆ ಹೂವಿಟ್ಟುಕೊಂಡು ವಿರೋಧಿಸಿದರ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನವರು ಇಷ್ಟು ದಿನ ಹೂವನ್ನೆ ಇಟ್ಟರು. ಈಗ ಜನರೇ ಕಾಂಗ್ರೆಸ್ ನವರ ಕಿವಿಗೆ ಹೂ ಇಟ್ಟಿದ್ದಾರೆ. ಚುನಾವಣೆ ಮುಗಿದ್ರು ಹೂ ಇಟ್ಟುಕೊಂಡೆ ಓಡಾಡುತ್ತಾರೆ. ಜನರಿಗೂ ಹೂ ಇಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *