Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೂಜಾ ಗಾಂಧಿ ಚುನಾವಣೆಯಲ್ಲಿ ಸೋತಾಗ ರಮ್ಯಾ ಹೇಳಿದ್ದೇನು..? ರಮೇಶ್‌ ಅರವಿಂದ್‌ ಗೆ ಪತ್ರ ಬರೆದ ನಟಿ

Facebook
Twitter
Telegram
WhatsApp

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಈಗಾಗಲೇ ಮೊದಲ ಗೆಸ್ಟ್‌ ಯಾರು ಎಂಬುದನ್ನು ಪ್ರೋಮೋ ಮೂಲಕ ತಿಳಿಸಲಾಗಿದೆ. ನಟಿ ರಮ್ಯಾ ಸಾಧಕರ ಖುರ್ಚಿಯಲ್ಲಿ ಕೂತಿದ್ದಾರೆ. ಅವರ ಪ್ರೋಮೋ ನೋಡಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ನಟಿ ರಮ್ಯಾ ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಹೋದಾಗಲೂ ಅಭಿಮಾನಿಗಳು ಕಾಯುತ್ತಿದ್ದರು. ಮತ್ತೆ ಬನ್ನಿ ಎಂದು ಹೇಳಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದಾರೆ. ರಮ್ಯಾ ಅವರಿಗೆ ಅಷ್ಟೇ ಪ್ರೀತಿ ಸಿಗುತ್ತಾ ಇದೆ. ಇದೀಗ ವೀಕೆಂಡ್‌ ವಿತ್‌ ರಮೇಶ್‌ ಪ್ರೋಮೋ ನೋಡಿ ಮಳೆ ಹುಡುಗಿ ಪೂಜಾಗಾಂಧಿ ಪತ್ರ ಬರೆದಿದ್ದಾರೆ.

“ರಮೇಶ್‌ ಸರ್‌, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿನ ಜುಗಲ್‌ ಬಂದಿ ನೋಡುವುದಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನು ಕೂಡ ಕಾತುರದಿಂದ ಕಾಯುತ್ತಾ ಇದ್ದೀನಿ. ರಮ್ಯಾ ಅವರು ಅದ್ಭುತವಾದ ವ್ಯಕ್ತಿ. ಆಕೆ ಸಖತ್‌ ಬೋಲ್ಡ್.

ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ನುಣುಚಿಕೊಳ್ಳುವ ಸ್ವಭಾವ ಅವರದ್ದಲ್ಲ. ನಂಗೆ ವೈಯಕ್ತಿಕವಾಗಿ ಆಕೆ ಯಾಕೆ ಇಷ್ಟ ಆಗುತ್ತಾರೆ ಅಂದರ ಚಿತ್ರರಂಗದ ಇತರ ನಟಿಯರ ಬಗ್ಗೆಯೂ ಅವರು ನಿಲುವು ತೆಗೆದುಕೊಳ್ಳುವ ಗುಣ ಅವರಲ್ಲಿದೆ. ಆಕೆಯಲ್ಲಿನ ಆ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ.

ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ಆಕೆ ಪೂಜಾ ಗಾಂಧಿ ಒಳ್ಳೆಯ ಪ್ರಯತ್ನ ಎಂದು ಹೇಳಿದ್ದರು. ಆ ಮಾತು ನನಗೆ ಈಗಲೂ ಚೆನ್ನಾಗಿ ನೆನಪಿದೆ. ರಮ್ಯಾ ನಿಮ್ಮ ಪ್ರೊಡಕ್ಷನ್‌ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಲಾರಾಂ ಶಬ್ದದಿಂದ ಏಳುವ ಅಭ್ಯಾಸ ನಿಮಗಿದೆಯಾ ? ಕೂಡಲೇ ಬದಲಾಯಿಸಿಕೊಳ್ಳಿ : ಯಾಕೆ ಗೊತ್ತಾ ?

ಸುದ್ದಿಒನ್ | ಮೊದಲೆಲ್ಲಾ ಸೂರ್ಯೋದಯಕ್ಕೂ ಮುನ್ನವೇ ಕೋಳಿ ಕೂಗಿದರೇ ಸಾಕು ಏಳುತ್ತಿದ್ದರು. ಆದರೆ ಈಗ ಕಾಲ ಮತ್ತು ಪದ್ಧತಿ ಬದಲಾಗಿದೆ. ಬೆಳಿಗ್ಗೆ ಅಲಾರಾಂ ಬಾರಿಸಿದರೆ ಮಾತ್ರ ನಿದ್ರೆಯಿಂದ ಏಳುವ ಕಾಲ ಬಂದಿದೆ. ಈ ಪದ್ಧತಿ

ಚಿತ್ರದುರ್ಗದಲ್ಲಿ ಅಕ್ಟೋಬರ್ 25 ಮತ್ತು 26 ರಂದು ಎಸ್‌ಬಿಐನಿಂದ ಬೃಹತ್ ಸಾಲ ಮೇಳ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ನಗರದ ಎಸ್‌ಬಿಐನಿಂದ ಬೃಹತ್ ಪ್ರಮಾಣದ ಮನೆ ಮತ್ತು ಕಾರು ಖರೀದಿಗಾಗಿ ಅಕ್ಟೋಬರ್ 25 ಮತ್ತು 26 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಗರದ

ಈ ರಾಶಿಯವರಿಗೆ ಸಂತಾನ ಫಲ ಪ್ರಾಪ್ತಿ, ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರಲಿದೆ

ಈ ರಾಶಿಯವರಿಗೆ ಸಂತಾನ ಫಲ ಪ್ರಾಪ್ತಿ, ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರಲಿದೆ, ಈ ರಾಶಿಯವರು ಇಷ್ಟಪಟ್ಟವರ ಜೊತೆ ಮದುವೆ ಯೋಗ, ಬುಧವಾರ ರಾಶಿ ಭವಿಷ್ಯ -ಅಕ್ಟೋಬರ್-23,2024 ಸೂರ್ಯೋದಯ: 06:15, ಸೂರ್ಯಾಸ್ತ :

error: Content is protected !!