Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾವೂ ಅವರಿಗೆ ರಕ್ಷಣೆ ಕೊಡಲು ಸಿದ್ದರಿದ್ದೇವೆ : ಮಾಜಿ ಸಿಎಂಗಳಿಗೆ ಬೆದರಿಕೆ ಪತ್ರದ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ

Facebook
Twitter
Telegram
WhatsApp

 

ಬೆಂಗಳೂರು: ಮಳೆ ಬಂದ್ರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಹೋಗದ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಮಳೆ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರು ಹೋಗೋದು ಅವರ ಕರ್ತವ್ಯ. ಎಲ್ಲರು ಕೂಡ ಹೋಗ್ತಿದ್ದಾರೆ, ಮತ್ತೆ ಹೋಗಬೇಕು. ಜನರ ಪರಿಸ್ಥಿತಿ ಯಲ್ಲಿ ನಾವು ಹೋಗಿಲ್ಲ ಅಂದರೆ ಸಮಸ್ಯೆ ಆಗುತ್ತದೆ.

ನಾನು ಕೂಡ ನಿನ್ನೆ ನನ್ನ ಕ್ಷೇತ್ರದ ಆಗುಂಬೆ ಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಭೂಕುಸಿತ ದಿಂದ ಉಡುಪಿ, ಶಿವಮೊಗ್ಗ ಹೆದ್ದಾರಿ ಕಟ್ ಆಗಿದೆ. ಆ ಹೆದ್ದಾರಿ ಮರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ಅನಾಹುತ ಗಳು ಹಲವು ಕಡೆಗಳಲ್ಲಿ ಆಗಿವೆ. ಚಿಕ್ಕಮಗಳೂರಲ್ಲಿ ಸದ್ಯ ಬೇರೆ ಉಸ್ತುವಾರಿ ಸಚಿವರು ಇಲ್ಲ. ಆಯಾ ಆಯಾ ಕ್ಷೇತ್ರದ ಶಾಸಕರೇ ಹೋಗ್ತಿದ್ದಾರೆ. ಕೊಡಗಿನ ಇಬ್ಬರು ಶಾಸಕರು ಜನರ ಜೊತೆ ಇದ್ದಾರೆ.

ಉಸ್ತುವಾರಿ ಸಚಿವರು ಸ್ವಲ್ಪ ಪಠ್ಯ ಪುಸ್ತಕ ವಿತರಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತು ನಾಳೆ ಅವರು ಕೊಡಗಿಗೆ ಹೋಗ್ರಾರೆ. ಶಾಸಕರು ಉಸ್ತುವಾರಿ ಸಚಿವರ ಜೊತೆ ಸಂಪರ್ಕದಲ್ಲಿದ್ದಾರೆ. ಬೊಮ್ಮಾಯಿ ಸರ್ಕಾರ ಕೂಡ ಸಾಕಷ್ಟು ಹಣಕಾಸನ್ನು ಒದಗಿಸಿದೆ. ಎಲ್ಲ ತಹಶಿಲ್ದಾರರ ಬಳಿ ಇಟ್ಟಿದ್ದಾರೆ. ತಹಶಿಲ್ದಾರರು ಮನೆ ಕಳೆದುಕೊಂಡ ವರಿಗೆ ಪರಿಹಾರ ಕೊಡ್ತಿದ್ದಾರೆ. ಯುದ್ದೋಪಾದಿಯಲ್ಲಿ ಸರ್ಕಾರ ಅಧಿಕಾರಿಗಳು, ಸಚಿವರು ಶಾಸಕರು ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರು ಇರಬಹುದು, ಬಿಜೆಪಿ ಶಾಸಕರು ಇರಬಹುದು ಅದನ್ನು ಮಾಡ್ತಿದ್ದಾರೆ ಎಂದಿದ್ದಾರೆ.

ಚಾಮರಾಜಪೇಟೆ ಬಂದ್ ಗೆ ಕರೆ ವಿಚಾರವಾಗಿ ಮಾತನಾಡಿದ್ದು, ಚಾಮರಾಜಪೇಟೆ ಬಂದ್ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ‌. ಕಾನೂನು ಸುವ್ಯವಸ್ಥೆ ಹದಗೆಡದ ರೀತಿ ಕ್ರಮ ವಹಿಸಲಾಗಿದೆ. ಕಮಿಷನರ್ ನೇತೃತ್ವದ ತಂಡ ಅದನ್ನು ನಿಭಾಯಿಸುತ್ತಾರೆ.

ಮಾಜಿ ಸಿಎಂ ಗಳಿಗೆ ಬೆದರಿಕೆ ಪತ್ರ ವಿಚಾರ‌ವಾಗಿ ಮಾತನಾಡಿ, ಪತ್ರದ ಬಗ್ಗೆ ಬೇಕಿದ್ರೆ ಅವರು ದೂರು ಕೊಡಲಿ. ನಾವು ಅವರಿಗೆ ರಕ್ಷಣೆ ಕೊಡಲು ಸಿದ್ದರಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!