ನಳಿನ್ ಕುಮಾರ್ ಕಟೀಲ್ ವಿಶೇಷ ಯಾಗ : ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆ

suddionenews
1 Min Read

 

 

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿರೀಕ್ಷೆಗೂ ಮೀರಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಬಿಜೆಪಿ ನಾಯಕರು ಸೋಲಿನ ವಿಮರ್ಶೆ ಮಾಡಿಕೊಂಡಿದ್ದಾರೆ. ಆದರೆ ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ನಳೀನ್ ಕುಮಾರ್ ಕಟೀಲು ದೇವಿಯ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಪುತ್ತೂರು ತಾಲೂಕಿನ ಸವಣೂರು ಬಳಿಯ ಕುಂಜಾಡಿ ಎಂಬಲ್ಲಿ ತಮ್ಮ ಹೊಸ ಮನೆಯಲ್ಲಿ ನಳೀನ್ ಕುಮಾರ್ ಕಟೀಲು ಅವರು ವಿಶೇಷ ಪೂಜೆ ಪುನಸ್ಕಾರ ಮಾಡಿದ್ದಾರೆ. ತಮ್ಮ ಕುಟುಂಬದ ತರವಾಡು ಮನೆಯಲ್ಲಿ ವಿಶೇಷಯಾಗ ಮಾಡಿದ್ದಾರೆ. ಸುಮಾರು ಎಂಟಿ ದಿನಗಳ ಕಾಲ ಈ ವಿಶೇಷ ಪೂಜೆ ಮಾಡುತ್ತಿದ್ದಾರೆ. ಹೀಗಾಗಿ ಈ ಪೂಜೆಯ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಾ ಇದೆ.

ವಿದ್ವಾನ್ ಬಾಲಕೃಷ್ಣ ಆಚಾರ್ಯ ಅವರ ನೇತೃತ್ವದಲ್ಲಿ ಈ ವಿಶೇಷ ಯಾಗ ನಡೆಯುತ್ತಿದೆ. ಈ ಹಿಂದೆ 2008ರಲ್ಲಿ ನಳೀನ್ ಕುನಾರ್ ಕಟೀಲು ಅವರು ವಿಶೇಷಯಾಗ ಮಾಡಿದ್ದರು ಎನ್ನಲಾಗ್ತಾ ಇತ್ತು. ಆ ವೇಳೆ ರಾಜಯೋಗ ಕೂಡಿ ಬಂದಿತ್ತು. ಆ ರಾಜಯೋಗವೇ ಇಲ್ಲಿಯ ತನಕ ಒಳ್ಳೆಯ ಹುದ್ದೆಯನ್ನು ಉಳಿಸಿಕೊಂಡು ಬಂದಿದ್ದರು ಎಂದು ಆಪ್ತರು ತಿಳಿಸಿದ್ದಾರೆ. ಹೀಗಾಗಿ ಮತ್ತೆ ವಿಶೇಷ ದುರ್ಗಾಸಪ್ತಶತಿ ಯಾಗ ಮಾಡ್ತಾ ಇದಾರೆ ಎನ್ನಲಾಗ್ತಾ ಇದೆ.

Share This Article
Leave a Comment

Leave a Reply

Your email address will not be published. Required fields are marked *