ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದಿದ್ದ ಚಿಕ್ಕಮಗಳೂರು ಯಾತ್ರಿಕ ಸಾವು..!

suddionenews
1 Min Read

 

ಚಿಕ್ಕಮಗಳೂರು: ಕೆಲವೊಬ್ಬರ ಹಣೆಬರಹವೇ ಹಾಗೇ ದೊಡ್ಡ ಆಘಾತದಿಂದ ಬಚಾವ್ ಆಗಿ, ಇನ್ನೆಲ್ಲೋ ಸಣ್ಣ ಆಘಾತದಿಂದ ಸಾವನ್ನಪ್ಪುವ ಘಟನೆಗಳು ಕೇಳುತ್ತೇವೆ. ಅಂತದ್ದೇ ಘಟನೆ ಇದೀಗ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಇತ್ತಿಚೆಗೆ ಒಡಿಶಾದಲ್ಲಿ ದೊಡ್ಡ ರೈಲು ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹಲವರಿಗೆ ಗಂಭೀರ ಗಾಯವಾಗಿದೆ. ಇಂಥ ದುರ್ಘಟನೆಯಲ್ಲಿಯೇ ಪ್ರಾಣ ಉಳಿಸಿಕೊಂಡಿದ್ದ ಚಿಕ್ಕಮಗಳೂರಿನ ವ್ಯಕ್ತಿ, ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. 61 ವರ್ಷದ ಧರ್ಮಪಾಲಯ್ಯ ಮೃತ ದುರ್ದೈವಿ.

ಚಿಕ್ಕಮಗಳೂರಿನಿಂದ ಯಾತ್ರೆ ಹೋಗಿದ್ದ 110 ಮಂದಿ ಅದೇ ಟ್ರೈನ್ ನಲ್ಲಿದ್ದರು. ಅದೃಷ್ಟವಶಾತ್ ಎಲ್ಲರು ಬದುಕುಳಿದಿದ್ದರು.‌ ಅದರಲ್ಲಿ ಧರ್ಮಪಲಾಯ್ಯ ಅವರು ಕೂಡ ಒಬ್ಬರು. ಆದರೆ ಅಲ್ಲಿಂದ ವಾಪಾಸ್ ಹಿಂತಿರುಗುವಾಗ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರು ಜೀವ ಉಳಿಸಲು ಆಗಿಲ್ಲ. ಶವಕ್ಕಾಗಿ ಮಿರ್ಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *