in

ನಂಜನಗೂಡು ಕಾಂಗ್ರೆಸ್ ಟಿಕೆಟ್ ಬಹುತೇಕ ದರ್ಶನ್ ಅವರಿಗೆ ಫಿಕ್ಸ್ : ಮಹದೇವಪ್ಪ ಅವರ ಪರ್ಯಾಯ ಕ್ಷೇತ್ರ ಯಾವುದು..?

suddione whatsapp group join

 

 

ಚಾಮರಾಜನಗರ: ತೀವ್ರ ರಕ್ತಸ್ರಾವದಿಂದ ಮಾಜಿ ಸಂಸದ ಆರ್ ಧ್ರುವನಾರಾಯಣ್ ನಿಧನರಾಗಿದ್ದಾರೆ. ಅವರ ಹುಟ್ಟೂರಿನಲ್ಲಿಯೇ ಅಂತ್ಯಕ್ರಿಯೆ ನಡೆದಿದೆ. ಇದೇ ವೇಳೆ ಕಾರ್ಯಕರ್ತರೆಲ್ಲಾ ನಂಜನಗೂಡು ಭಾಗಕ್ಕೆ ದರ್ಶನ್ ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಧ್ರುನಾರಾಯಣ್ ಅವರ ಹನ್ನೊಂದನೇ ದಿನದ ಕಾರ್ಯಕ್ಕೆ ಟಿಕೆಟ್ ಅಧಿಕೃತವಾಗಿ ಘೋಷಣೆಯಾಗಬಹುದು.

ಧ್ರುವನಾರಾಯಣ್ ಅವರು ಬದುಕಿದ್ದಾಗ ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಾಗೆ ಹೆಚ್ ಸಿ ಮಹದೇವಪ್ಒ ಕೂಡ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಧ್ರುವ ನಾರಟಯಣ್ ಅವರು ಬದುಕಿದ್ದರೆ ಟಿ ನರಸೀಪುರದ ಟಿಕೆಟ್ ಅವರ ಪಾಲಿಗೆ ದಕ್ಕುತ್ತಿತ್ತು. ಆದ್ರೆ ಯಾರೂ ಊಹೆ ಮಾಡದಂತೆ ಹಠಾತ್ ನಿಧನ ಹೊಂದಿದ್ದಾರೆ.

ಈಗ ಕಾರ್ಯಕರ್ತರು ಕೇಳುವಂತೆ ದರ್ಶನ್ ಅವರಿಗೇನೆ ನಂಜನಗೂಡು ಟಿಕೆಟ್ ನೀಡಿದರೆ ಸಿಂಪತಿ ಕೂಡ ವರ್ಕೌಟ್ ಆಗುತ್ತೆ. ಜೊತೆಗೆ ದರ್ಶನ್ ಅವರು ಕೂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಆತ್ಮೀಯವಾಗಿದ್ದಾರೆ. ಹೀಗಾಗಿ ಹೆಚ್ ಸಿ ಮಹದೇವಪ್ಪ ಅವರಿಗೆ ಬೇರೆ ಕ್ಷೇತ್ರ ನಿಗಧಿ ಮಾಡಿ, ದರ್ಶನ್ ಅವರಿಗೆ ನಂಜನಗೂಡಿ ಕ್ಷೇತ್ರ ನೀಡುವುದು ಪಕ್ಕಾ ಎನ್ನಲಾಗಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಸೆಲ್ಫಿ ಕ್ಲಿಕ್ಕಿಸಿಕೊಂಡ ಪರೀಕ್ಷಾ ಮೇಲ್ವಿಚಾರಕಿ : ನೋಟೀಸ್ ಕೊಡಲು ಮುಂದಾದ ಇಲಾಖೆ..!

ಮಂಡ್ಯದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿಚಾರವನ್ನೇ ಪ್ರಸ್ತಾಪಿಸಿದೇ ಇರಲು ಕಾರಣವೇನು ಗೊತ್ತಾ..?