ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿರಲಿಲ್ಲ : ಕಂಬಳ ಗಲಾಟೆಗೆ ಸಾನ್ಯಾ ಸ್ಪಷ್ಟನೆ..!

ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೆ ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಾನ್ಯಾ ಅಯ್ಯರ್, ಇತ್ತಿಚೆಗೆ ಪುತ್ತೂರಿಗೆ ಭೇಟಿ ನೀಡಿದ್ದರು. ಅದು ಕಂಬಳಕ್ಕೆ ಸಾನ್ಯಾ ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು. ಅಲ್ಲಿ ಸಾನ್ಯಾ ಅಯ್ಯರ್ ಜೊತೆಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ, ಸಾನ್ಯಾ ಅವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಸುದ್ದಿಯೆಲ್ಲಾ ಹರಡಿತ್ತು. ಇದೀಗ ಆ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.

ನಾನು ಕಂಬಳಕ್ಕೆ ಸ್ನೇಹಿತೆಯರ ಜೊತೆಗೆ ಹೋಗಿದ್ದೆ. ಆಗ ಅಲ್ಲಿ ಯಾರೋ ನಶೆಯಲ್ಲಿದ್ದ ಹುಡುಗ ನನ್ನ ಸ್ನೇಹಿತೆಯರ ಮೇಲೆ ಬಿದ್ದ. ನಾವೂ ಜೋರಾಗಿ ಕಿರುಚಿದೆವು. ಅಲ್ಲಿದ್ದವರೆಲ್ಲಾ ಓಡಿ ಬಂದರು. ಆದರೆ ಬಿದ್ದ ಹುಡುಗ ಯಾರು..? ಎಲ್ಲಿ ಹೋದ..? ಏನು ಗೊತ್ತಿಲ್ಲ. ಈಗ ಸುದ್ದಿಯಾಗಿರುವಂತೆ ಅವನು ನನಗೆ ಕಪಾಳಕ್ಕೆ ಹೊಡೆದ, ನಾನು ಅವನ ಕಪಾಳಕ್ಕೆ ಹೊಡೆದ ಎಂಬ ಯಾವ ಸನ್ನಿವೇಶವೂ ನಡೆದಿಲ್ಲ ಎಂದಿದ್ದಾರೆ.

ಇನ್ನು ಮದ್ಯಪಾನ ಮಾಡಿ ಹೋಗಿದ್ದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ನಾನು ಬಾಂಬೆಯಲ್ಲಜ ನಡೆಯುವ ಶೂಟಿಂಗ್ ಒಂದರಲ್ಲಿ ಭಾಗಿಯಾಗಬೇಕು. ಅದಕ್ಕೆ ಜೀರೋ ಶುಗರ್ ಡಯೆಟ್ ಮಾಡುತ್ತಾ ಇದ್ದೀನಿ. ನಾನು ಯಾವುದೇ ಕಾರಣಕ್ಕೂ ಮದ್ಯ ಸೇವನೆ ಮಾಡಿಲ್ಲ. ಧೂಮಪಾನ, ಮದ್ಯಪಾನ ಏನನ್ನು ನಾನು ಮಾಡುವುದಿಲ್ಲ. ನಾನು ಮಾಲೆ ಧರಿಸಿದ್ದೇನೆ. ಅದೆಲ್ಲ ಮಾಡಲು ಸಾಧ್ಯವಾ..? ಇನ್ನು ಅಲ್ಲಿ ಇದ್ದದ್ದೆಲ್ಲ ದೇವಸ್ಥಾನಗಳು. ಮದ್ಯಪಾನ ಮಾಡಿ ಅಲ್ಲಿಗೆ ಹೋಗುತ್ತೇವಾ..? ಕಂಬಳ ನೋಡುವುದಕ್ಕೆ ಹೋಗಿದ್ದು ಎಂಜಾಯ್ ಮಾಡುವುದಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

suddionenews

Recent Posts

ಉದ್ಯೋಗ ವಾರ್ತೆ : ಚಿತ್ರದುರ್ಗದಲ್ಲಿ ಮಾರ್ಚ್ 01 ರಂದು ಬೃಹತ್ ಉದ್ಯೋಗ ಮೇಳ

ಚಿತ್ರದುರ್ಗ. ಫೆ.24:  ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…

2 hours ago

ಮಧ್ಯ ಕರ್ನಾಟಕದಲ್ಲಿಯೇ ಪ್ರಪ್ರಥಮ ENT ಲೇಸರ್ ಶಸ್ತ್ರಚಿಕಿತ್ಸಾ ಯಂತ್ರ ಲೋಕಾರ್ಪಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ

ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…

3 hours ago

ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನ ಸೇರಿಸಲು ಒತ್ತಾಯ ; ಕಾರಣ ಏನು ಗೊತ್ತಾ..?

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…

4 hours ago