ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿದೆ. ಆದರೆ ನಿರೀಕ್ಷೆ ಮಟ್ಟದ ಕಾಂಪಿಟೇಷನ್ ಏನು ಕಾಣಿಸುತ್ತಿಲ್ಲ. ಒಂದು ಪ್ರತಿಭೆಯ ಅನಾವರಣವಿಲ್ಲ, ಕಲ್ಚರಲ್ ಆಕ್ಟಿವಿಟೀಸ್ ಇಲ್ಲ. ಬಿಗ್ ಬಾಸ್ ಹೇಳುವ ತನಕ ತಾವಾಗಿ ಏನನ್ನು ಮಾಡುವುದಿಲ್ಲ. ಮಾತಿಗೆ ಮುಂಚೆ ಜೋರು ಮಾಡುವುದನ್ನು ಬಿಟ್ಟು, ಜಗಳ ಮಾಡುವುದನ್ನು ಬಿಟ್ಟು. ಸೇಫರ್ ಝೋನ್ ನಲ್ಲಿ ನಿಂತು ಆಟವಾಡುತ್ತಿರುವಂತೆ ಇದೆ.
ಜಗಳ ಮಾಡಿದರೇನೆ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಆಗುತ್ತೇನೋ ಅಂತ ಕೆಲವರು ಅಂದುಕೊಂಡಂತೆ ಇದ್ದರೆ, ಇನ್ನು ಕೆಲವರು ಯಾವ ಕಡೆಗೂ ಮಾತನಾಡಬಾರದಪ್ಪ ಅಂತ ಸೈಲೆಂಟ್ ಆಗಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಈ ಮೌನವೇ ಕಿಚ್ಚನಿಗೆ ಕೋಪ ತರಿಸಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಹೆಣ್ಣು ಮಕ್ಕಳನ್ನು ಎಚ್ಚರಿಸಲಾಗಿದೆ.
‘ಇಷ್ಟು ಸೀಸನ್ ನಲ್ಲಿ ಶೃತಿ ಅವರನ್ನು ಬಿಟ್ಟರೆ ಬೇರೆ ಯಾರು ಬಿಗ್ ಬಾಸ್ ಗೆಲ್ಲಲಿಲ್ಲ. ಉಳಿದ ಎಲ್ಲಾ ಪುರುಷರೇ ವಿನ್ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ಯಾಕೆ ಮಹಿಳೆಯರು ವಿನ್ ಆಗ್ತಿಲ್ಲ ಅಂತ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಲ ಕ್ಯಾಪ್ಟನ್ ಆಯ್ಕೆಯಲ್ಲೂ ವಿನಯ್ ಮತ್ತು ಕಾರ್ತೀಕ್ ಆದ್ರೂ. ಯಾವೊಬ್ಬ ಮಹಿಳೆಯರು ಮುಂದೆ ಬರಲಿಲ್ಲ. ನಾಮಿನೇಟ್ ಮಾಡೋದಕ್ಕೆ ಟೈಮ್ ತಗೋಳ್ತೀರಾ. ಕ್ಯಾಪ್ಟನ್ ಆಯ್ಕೆ ಸಮಯವೇ ತಗೋಳಲ್ಲ. ನಾವೂ ಹಿಂಗೆ ಆಡೋದು ಅನ್ನುವುದಾದರೇ ದಯವಿಟ್ಟು ಮೇನ್ ಡೋರ್ ಓಪನ್ ಆಗುತ್ತೆ. ಅಲ್ಲಿರಬೇಡಿ, ಸೀದಾ ಬಂದುಬಿಡಿ ಎಂದು ಕಿಚ್ಚ ಸುದೀಪ್ ಬೇಸರದಲ್ಲಿಯೇ ಹೇಳಿದ್ದಾರೆ.
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…