ಕವಿತೆ : ಸಂಸ್ಕಾರದ ಸಹಬಾಳ್ವೆ ; ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ)

 

ಹಳೆ ನೆನಪಿನ ಬುನಾದಿಯ ಮೇಲೆ
ಬರುವವು ಹೊಸದಿನಗಳ ಆಲೆ
ಹೊಸತು ಬಯಸಿ ಬದುಕು ಸಾಗಿ
ರಸವದು ಹಳೆ-ಹೊಸಕ್ಷಣಗಳ ಮಿಲನವಾಗಿ

ಸಿಹಿ ಕಹಿಗಳು ಎರಡೂ ಬೇಕು
ಸಂಸ್ಕಾರದ ಸಹಬಾಳ್ವೆ ಸಾಕು
ಚಂದವಿದು ಅಂದವಿದು
ನವಚಿಗುರು ಅರಳಿ ಮರಳಿ

ಹಿಂದೆ ಸರಿದು ಹೋದ ಸಮಯ
ಬರುವ ದಿನದ ಸೊಗಸು ಕಲೆಯ
ಸುಖದಿ ಸವಿದು ಸಾಗಬೇಕಿದೆ
ದೇಶಸೇವೆಗಾಗಿ ನಾವು ಗೇಯ್ಯಬೇಕಿದೆ

ಬಂಧು ಮಿತ್ರರೆಲ್ಲ ಸೇರಿ
ಸ್ನೇಹಸಂಗದಿಂದ ಕೂಡಿ
ಯುಗಾದಿಯಂಥ ಹಬ್ಬ ಮಾಡಿ
ಬೇವುಬೆಲ್ಲ ಸವಿದು ನೋಡಿ

ನವ್ಯ ಕಾವ್ಯ ಕಟ್ಟಿ ಹಾಡಿ
ಉಯ್ಯಾಲೆಯಲ್ಲಿ ತೂಗಿ ಆಡಿ
ಮನಮನೆಯು ಹರ್ಷಗೊಳ್ಳಲಿ
ಭರತ ಖಂಡ ಭವ್ಯವಾದ ಬೆಳಗು ಕಾಣಲಿ

 

ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ)
ಉಪನ್ಯಾಸಕರು ಹಾಗೂ ಸಾಹಿತಿಗಳು
ಹಿರೇಕುಂಬಳಗುಂಟೆ
ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆ
583218
8867435662

suddionenews

Recent Posts

ಉದ್ಯೋಗ ವಾರ್ತೆ : ಚಿತ್ರದುರ್ಗದಲ್ಲಿ ಮಾರ್ಚ್ 01 ರಂದು ಬೃಹತ್ ಉದ್ಯೋಗ ಮೇಳ

ಚಿತ್ರದುರ್ಗ. ಫೆ.24:  ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…

3 hours ago

ಮಧ್ಯ ಕರ್ನಾಟಕದಲ್ಲಿಯೇ ಪ್ರಪ್ರಥಮ ENT ಲೇಸರ್ ಶಸ್ತ್ರಚಿಕಿತ್ಸಾ ಯಂತ್ರ ಲೋಕಾರ್ಪಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ

ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…

4 hours ago

ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನ ಸೇರಿಸಲು ಒತ್ತಾಯ ; ಕಾರಣ ಏನು ಗೊತ್ತಾ..?

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…

4 hours ago