Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೇರಳದಲ್ಲಿ ಪೊಲೀಸರಿಗೆ ಭದ್ರತೆ ನೀಡುತ್ತಿವೆ ಹಾವುಗಳು..!

Facebook
Twitter
Telegram
WhatsApp

ಹಾವು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ. ತೀರಾ ಭಯಗೊಂಡವರು ಅದನ್ನು ಸಾಯಿಸಿಯೇ ಬಿಡುತ್ತಾರೆ. ಇನ್ನು ಕೆಲವರು ಅದನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ ಹಾವುಗಳೇ ಮನುಷ್ಯರನ್ನು ರಕ್ಷಣೆ ಮಾಡುವುದನ್ನು ಕೇಳಿದ್ದೀರಾ. ಸಾಧ್ಯವೇ ಇಲ್ಲ ಅಲ್ವಾ. ಆದರೆ ಕೇರಳದಲ್ಲು ಹಾವುಗಳಿಂದ ಪೊಲೀಸರಿಗೆ ರಕ್ಷಣೆ ಸಿಕ್ಕಿದೆ.

ಕೇರಳದ ಇಡುಕಿಯಲ್ಲಿರುವ ಕುಂಬಮೆಟ್ಟು ಪೊಲೀಸ್ ಠಾಣೆ ಬಳಿ ಕೋತಿಗಳ ಕಾಟ ಹೆಚ್ಚಾಗಿತ್ತು. ಏನೇ ಮಾಡಿದರೂ ಕೋತಿಗಳ ಉಪಟಳವನ್ನು ನಿಲ್ಲಿಸಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಹಾವುಗಳನ್ನು ಪೊಲೀಸ್ ಠಾಣೆಯ ಗೋಡೆ, ಮರ ಗಿಡ ಮೇಲೆಲ್ಲಾ ಬಿಟ್ಟಿರುವ ಪರಿಣಾಮ ಕೋತಿಗಳು ಬರುತ್ತಿಲ್ಲ. ಆದರೆ ನಿಜವಾದ ಹಾವುಗಳಲ್ಲ ಬದಲಿಗೆ, ಪ್ಲಾಸ್ಟಿಕ್ ಹಾವು.

ಈ ಐಡಿಯಾ ಕೊಟ್ಟಿದ್ದು, ಅದೇ ಊರಿನ ಒಬ್ಬ ರೈತ. ಈ ಬಗ್ಗೆ ಮಾತನಾಡಿದ ಆ ರೈತ, ನಮ್ಮ ಜಮೀನಿನಲ್ಲೂ ಇದೇ ರೀತಿಯ ಕೋತಿಗಳ ಹಾವಳಿ ಇತ್ತು. ನಾನು ಹಾವನ್ನು ತಂದು ಹಾಕಿದ್ದೆ. ಆಗ ಅವುಗಳ ಕಾಟ ಕಡಿಮೆಯಾಗಿದೆ. ಅದಕ್ಕೆ ಆ ಐಡಿಯಾ ಹೇಳಿಕೊಟ್ಟೆ ಎಂದು ಹೇಳಿದ್ದಾರೆ.

ಇನ್ಸ್ಪೆಕ್ಟರ್ ಪಿ ಕೆ ಲಾಲಾಬಾಯಿ ಮಾತನಾಡಿ, ಹಲವು ವರ್ಷಗಲಿಂದಲೂ ಕೋತಿಗಳ ಕಾಟ ಇತ್ತು. ಆದ್ರೆ ರಬ್ಬರ್ ಹಾವುಗಳನ್ನು ಬಳಸಿದ ಮೇಲೆ ಈಗ ಕೋತಿಗಳ ಕಾಟದಿಂದ ಮುಕ್ತಿ ಪಡೆದಿದ್ದೇದೆ. ಇನ್ನಷ್ಟು ರಬ್ಬರ್ ಹಾವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!