Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ರಾನ್ ಪೊಲೀಸರ ಗುಂಡೇಟಿಗೆ ಕಪ್ಪು ಮನುಷ್ಯನ ಸಾವು : ವಿಡಿಯೋ ವೈರಲ್

Facebook
Twitter
Telegram
WhatsApp

ಜೂನ್ 27 ರಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಕಪ್ಪು ಬಣ್ಣದ ಮನುಷ್ಯನ ಮೇಲೆ ಗುಂಡು ಹಾರಿಸಿರುವ ವಿಡಿಯೋವನ್ನು ಅಕ್ರಾನ್ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ನೋಡಿದವರು ಹೃದಯ ವಿದ್ರಾವಕ ಘಟನೆಯೆಂದೆ ಹೇಳುತ್ತಿದ್ದಾರೆ. ವಾಕರ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದೆ.

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಪೊಲೀಸರು, ಅಕ್ರಾನ್ ಪೊಲೀಸರು ಕಾಲ್ನಡಿಗೆಯಲ್ಲಿ ಅವನನ್ನು ಬೆನ್ನಟ್ಟಿ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಅವನು ಪೊಲೀಸರಿಗಿಂತ ಮೊದಲೇ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ನಂಬಿದ್ದರು ಮತ್ತು ಅವನು ಮತ್ತೆ ಗುಂಡು ಹಾರಿಸಲು ತಯಾರಿ ನಡೆಸುತ್ತಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ ಸ್ಥಳದಲ್ಲಿ ಎಂಟು ಅಧಿಕಾರಿಗಳು ಇದ್ದು, ಆತನ ಮೇಲೆ ಎಷ್ಟು ಗುಂಡುಗಳನ್ನು ಹಾರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಾಕರ್ ದೇಹದ ಮೆ 60 ಕ್ಕೂ ಹೆಚ್ಚು ಗಾಯಗಳಾಗಿರುವುದು ಕಂಡು ಬಂದಿದೆ. ವಾಕರ್ ಅವರ ಕುಟುಂಬದ ವಕೀಲರು ಇಒ ಬಗ್ಗೆ ಪ್ರತಿಕ್ರಿಯೆ ನೀಡಿದ್ರು, ಆತ ನೆಲದ ಮೇಲೆ ಬಿದ್ದ ನಂತರವೂ ಅಧಿಕಾರಿಗಳು ಗುಂಡು ಹಾರಿಸುತ್ತಲೇ ಇದ್ದರು ಎಂದು ಹೇಳಿದ್ದಾರೆ.

ಅನಿರ್ದಿಷ್ಟ ಟ್ರಾಫಿಕ್ ಮತ್ತು ನಿಯಮಗಳ ಉಲ್ಲಂಘನೆಗಾಗಿ ಅಧಿಕಾರಿಗಳು 12:30 ರ ಸುಮಾರಿಗೆ ವಾಕರ್ ಅವರ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಆ ವೇಳೆ ಆತನ ಕಾರಿನಿಂದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ, ಶಾಟ್‌ನ ಶಬ್ದ ಕೇಳಿಸಿತಂತೆ. ಸಾರಿಗೆ ಇಲಾಖೆಯ ಕ್ಯಾಮೆರಾವು ಅದನ್ನು ಸೆರೆಹಿಡಿದಿದೆ ಎನ್ನಲಾಗಿದೆ. ವಾಹನದಿಂದ ಫ್ಲ್ಯಾಷ್ ಬರುತ್ತಿದೆ ಎಂದು ಅಕ್ರಾನ್ ಪೊಲೀಸ್ ಮುಖ್ಯಸ್ಥ ಸ್ಟೀವ್ ಮೈಲೆಟ್ ಹೇಳಿದ್ದಾರೆ.

ಸರಿಸುಮಾರು ಆರು ನಿಮಿಷಗಳ ನಂತರ ಏನಾಯಿತು ಎಂಬುದನ್ನು ಪೋಲೀಸ್ ಜೊತೆ ಇರುವ ಕ್ಯಾಮರಾದಲ್ಲಿನ ವೀಡಿಯೊಗಳು ತೋರಿಸುತ್ತಿವೆ. ಬಂದೂಕುಗಳನ್ನು ಹಿಡಿದು ಅಧಿಕಾರಿಗಳು ಕಾಲ್ನಡಿಗೆಯಲ್ಲಿಯೇ ನಿಧಾನಿಸುತ್ತಿದ್ದ ವಾಕರ್ ಕಾರನ್ನು ಸಮೀಪಿಸುತ್ತಾರೆ. ಸ್ಕೀ ಮಾಸ್ಕ್ ಧರಿಸಿದ ವ್ಯಕ್ತಿಯು ಕಾರಿನಿಂದ ಜಂಪ್ ಆಗಿ ಪಾರ್ಕಿಂಗ್ ಕಡೆಗೆ ಓಡುತ್ತಾನೆ. 6 ಅಥವಾ 7 ಸೆಕೆಂಡುಗಳ ಕಾಲ ನಡೆಯುವ ಸ್ಫೋಟದಲ್ಲಿ, ಹಲವು ದಿಕ್ಕುಗಳಿಂದ ಅಧಿಕಾರಿಗಳು ಗುಂಡು ಹಾರಿಸುವ ಮೊದಲು ಪೊಲೀಸರು ಸುಮಾರು 10 ಸೆಕೆಂಡುಗಳ ಕಾಲ ಅವನನ್ನು ಬೆನ್ನಟ್ಟುತ್ತಾರೆ. ಕನಿಷ್ಠ ಒಬ್ಬ ಅಧಿಕಾರಿಯು ಮೊದಲು ಸ್ಟನ್ ಗನ್ ಬಳಸಲು ಪ್ರಯತ್ನಿಸಿದರು, ಆದರೆ ಅದು ಯಶಸ್ವಿಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ, ಕಡಲೆ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ…!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)    ಇಂದಿನ             

ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ : ಎರಡನೇ ಪತ್ನಿಗೆ 100 ಕೋಟಿ ಆಸ್ತಿ

ಬೆಂಗಳೂರು :ಮಾಜಿ ಡಾನ್ ಮುತ್ತಪ್ಪ ರೈ ಸಾವನ್ನಪ್ಪಿದ ಬಳಿಕ ಅವರ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಸಾವಿರಾರು ಕೋಟಿ ಆಸ್ತಿಯನ್ನು ಮುತ್ತಪ್ಪ ರೈ ಸಾಯುವುದಕ್ಕೂ ಮುನ್ನ ಮನೆಕೆಲಸದವರಿಗೂ ಸೇರಿ ಬರೆದಿದ್ದರು. 2019ರಲ್ಲಿ

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

error: Content is protected !!