Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನ್ಯಾಯಾಲಯಗಳು ನ್ಯಾಯದ ದೇವಾಲಯಗಳು, ಆದರೆ ನ್ಯಾಯಾಧೀಶರು ದೇವರಲ್ಲ : ಕೇರಳ ಹೈಕೋರ್ಟ್

Facebook
Twitter
Telegram
WhatsApp

 

ಸುದ್ದಿಒನ್ : ಪೀಠದ ಮೇಲೆ ಕುಳಿತಿರುವ ನ್ಯಾಯಾಧೀಶರು ದೇವರಲ್ಲ, ವಕೀಲರು ಮತ್ತು ಕಕ್ಷಿದಾರರು ಅವರ ಮುಂದೆ ಕೈಮುಗಿದು ನಮಸ್ಕರಿಸಬೇಕಾಗಿಲ್ಲ ಎಂದು ಅಕ್ಟೋಬರ್ 13 ರಂದು ಕೇರಳ ಹೈಕೋರ್ಟ್ ಈ ಹೇಳಿಕೆ ನೀಡಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಕುನ್ವಿಕೃಷ್ಣನ್ ಅವರು ಈ ಆದೇಶ ನೀಡಿದ್ದಾರೆ. ಅಳಪ್ಪುಳದ ನಿವಾಸಿ ರಮ್ಲಾ ಕಬೀರ್ ಎಂಬ ಮಹಿಳೆ ತನ್ನ ಮನೆಯ ಸಮೀಪವಿರುವ ಪ್ರಾರ್ಥನಾ ಮಂದಿರದ ಮೈಕ್‌ನಿಂದ ತನಗೆ ತೊಂದರೆಯಾಗುತ್ತಿದೆ ಎಂದು 2019 ರಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ಎಸ್‌ಐ ತನ್ನ ಮನವಿಯನ್ನು ನಿರ್ಲಕ್ಷಿಸಿದ್ದರಿಂದ ನೇರವಾಗಿ ಜಿಲ್ಲಾ ಎಸ್‌ಪಿ ಅವರನ್ನು ಭೇಟಿಯಾಗಿ ಎಸ್‌ಐ ತಮ್ಮ ದೂರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಳು.

ಎಸ್ಪಿಗೆ ದೂರು ನೀಡಿದ ಬಳಿಕ ಆಕೆಯ ಮೇಲಿನ ದ್ವೇಷದಿಂದ ಎಸ್‌ಐ ದೂರವಾಣಿ ಮೂಲಕ ನಿಂದಿಸಿ ಆಕೆಯ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಳು.

ತನ್ನ ವಿರುದ್ಧ ದಾಖಲಾದ ಸುಳ್ಳು ಪ್ರಕರಣವನ್ನು ಪರಿಶೀಲಿಸುವಂತೆ ಮಹಿಳೆ ತನ್ನ ಕೈಗಳನ್ನು ಜೋಡಿಸಿ ಕಣ್ಣೀರಿಡುತ್ತಾ ಮನವಿ ಮಾಡಿದಳು. ಈ ವೇಳೆ ನ್ಯಾಯಾಧೀಶರು ಮಾತನಾಡುತ್ತಾ, ನ್ಯಾಯಾಧೀಶರು ದೇವರಲ್ಲ, ವಕೀಲರು ಮತ್ತು ಕಕ್ಷಿದಾರರು ಅವರ ಮುಂದೆ ಕೈಮುಗಿದು ತಲೆಬಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯಗಳು ನ್ಯಾಯದ ದೇವಾಲಯಗಳು, ಆದರೆ ನ್ಯಾಯಾಧೀಶರು ದೇವರಲ್ಲ. ಯಾವುದೇ ವಕೀಲರು ಅಥವಾ ದಾವೆದಾರರು ತಮ್ಮ ವಾದವನ್ನು ನ್ಯಾಯಾಲಯದ ಮುಂದೆ ಕೈಕಟ್ಟಿಕೊಂಡು ವಾದಿಸಬೇಕಾಗಿಲ್ಲ ಏಕೆಂದರೆ ನ್ಯಾಯಾಲಯದ ಮುಂದೆ ಪ್ರಕರಣವನ್ನು ವಾದಿಸುವುದು ಅವರ ಸಾಂವಿಧಾನಿಕ ಹಕ್ಕು. ನ್ಯಾಯಾಲಯಗಳು ನ್ಯಾಯದ ದೇವಾಲಯಗಳು. ಆದರೆ, ಇಲ್ಲಿ ಕುಳಿತುಕೊಳ್ಳುವ ನ್ಯಾಯಾಧೀಶರು ದೇವರಲ್ಲ. ಅವರು ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಆದರೆ ವಕೀಲರು ಮತ್ತು ಕಕ್ಷಿದಾರರು ಮನವಿ ಮಾಡುವಾಗ ನ್ಯಾಯಾಲಯದ ನಿಯಮಗಳನ್ನು ಅನುಸರಿಸಬೇಕು ಎಂದು ಪ್ರಕರಣದ ನ್ಯಾಯಮೂರ್ತಿ ಕುನ್ವಿಕೃಷ್ಣನ್ ಹೇಳಿದ್ದಾರೆ. ಬಳಿಕ ಮಹಿಳೆ ಮೇಲಿನ ಸುಳ್ಳು ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಾಧೀಶರು, ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದು ವಿಶ್ವ ಹೃದಯ ದಿನ : ಇಂದಿನ ಯುವಕರು ಏಕೆ ಹೃದಯಾಘಾತದಿಂದ ಬಳಲುತ್ತಿದ್ದಾರೆ ?

    ಸುದ್ದಿಒನ್ : ಜಾರ್ಖಂಡ್ ಅಬಕಾರಿ ಇಲಾಖೆಯು ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಪರೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಇದರಲ್ಲಿ ಭಾಗವಹಿಸಿದ್ದ ಹಲವು ಯುವಕರು ಓಟದ ಸ್ಪರ್ಧೆಯಲ್ಲಿ ಸಾವನ್ನಪ್ಪಿದ್ದಾರೆ. ಓಡುವಾಗ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು

ಚಿತ್ರದುರ್ಗ | ಚಲಪತಿ ನಿಧನ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 :ನಗರದ ತುರುವನೂರು ರಸ್ತೆ ನಿವಾಸಿ, ಶಿಕ್ಷಣ ಇಲಾಖೆ ನಿವೃತ್ತ ನೌಕರ ಚಲಪತಿ (66) ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ವಿಜಯಕರ್ನಾಟಕ ಚಿತ್ರದುರ್ಗ ಜಿಲ್ಲಾ ಪ್ರಸರಾಂಗ

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು: ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ಸೆ 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ

error: Content is protected !!