Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಾರ್ದಿಕ್ ಪಾಂಡ್ಯಾ & ನತಾಶ ಡಿವೋರ್ಸ್ ಆಗ್ತಿಲ್ಲ : ಇಷ್ಟು ದಿನ ಗಾಸಿಪ್ ಆಗೋದಕ್ಕೆ ಬಿಟ್ಟಿದ್ದೇಕೆ ಈ ಜೋಡಿ..?

Facebook
Twitter
Telegram
WhatsApp

ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯಾ ಹಾಗೂ ನತಾಶದೆ ಸುದ್ದಿ. ಇಬ್ಬರು ಬೇರೆ ಬೇರೆ ಆಗ್ತಾರಂತೆ, ಡಿವೋರ್ಸ್ ಗ್ಯಾರಂಟಿ ಅಂತೆ ಅಂತ. ಅದಕ್ಕೆ ತಕ್ಕ ಹಾಗೆ ನತಾಶ ಹಾಗೂ ಹಾರ್ದಿಕ್ ಪಾಂಡ್ಯಾ ಸೋಷಿಯಲ್ ಮೀಡಿಯಾದ ಬೆಳವಣಿಗೆ ಸಹ ಇತ್ತು. ಹೆಸರು ತೆಗೆದು ಹಾಕಿದ್ದಲ್ಲದೆ ಅದಕ್ಕೆ ತದ್ವಿರುದ್ಧವಾದ ಫೋಟೋಗಳನ್ನೇ ಹಾಕುತ್ತಿದ್ದರು. ಪಾಪರಾಜಿಗಳು ಸಿಕ್ಕಾಗ, ಪ್ರಶ್ನೆ ಮಾಡಿದಾಗ ಮೌನವಾಗಿ ಹೋಗುತ್ತಿದ್ದರು. ಈ ಎಲ್ಲಾ ವಿದ್ಯಾಮಾನಗಳು ದಾಂಪತ್ಯ ಜೀವನದ ಅಂತ್ಯವನ್ನೇ ಸೂಚಿಸುತ್ತಿದ್ದವು. ಇದರ ನಡುವೆ ಹಾರ್ದಿಕ್ ಪಾಂಡ್ಯ ಜೀವನಾಂಶದ ತನಕವೂ ಸುದ್ದಿಯಾಗಿತ್ತು. ಇದೀಗ ಅದಕ್ಕೆಲ್ಲ ತದ್ವಿರುದ್ಧವಾಗಿದೆ. ಇಬ್ಬರು ದೂರವಾಗುತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.

ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಜೊತೆಗೆ ಕ್ಲೋಸ್ ಆಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯಾ ಹಾಗೂ ನತಾಶ 2020ರಲ್ಲಿ ರಿಜಿಸ್ಟರ್ ರೀತಿಯಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನವೇ ನತಾಶ ಗರ್ಭಿಣಿಯಾಗಿದ್ದರು. ದಂಪತಿಗೆ ಒಬ್ಬ ಗಂಡು ಮಗನಿದ್ದಾನೆ. ಡಿವೋರ್ಸ್ ಸುದ್ದಿ ಹಬ್ಬುವುದಕ್ಕೆ ಪಿಆರ್ ಕಾರಣ ಎನ್ನಲಾಗಿದೆ. ಇದೊಂದು ಪಬ್ಲಿಕ್ ಸ್ಟಂಟ್ ಎಂದು ಹೇಳಲಾಗುತ್ತಿದ್ದು, ನತಾಶ ಕೂಡ ಅದೇ ಕಾರಣಕ್ಕಾಗಿ ಮದುವೆಯ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರಂತೆ. ಈಗ ಎಲ್ಲಾ ಹಳೆಯ ಫೋಟೋಗಳನ್ನು ಮತ್ತೆ ಅಪ್ಲೋಡ್ ಕೊಟ್ಟಿದ್ದಾರೆ. ಈ ಮೂಲಕ ಇಬ್ಬರು ದೂರವಾಗ್ತಿಲ್ಲ ಎಂಬುದಂತು ಖಚಿತವಾಗಿದೆ. ಫ್ಯಾನ್ಸ್ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ದಾಂಪತ್ಯ ಹಾಲು ಜೇನು ಸೇರಿದ ಹಾಗೆ

ಈ ರಾಶಿಯವರ ದಾಂಪತ್ಯ ಹಾಲು ಜೇನು ಸೇರಿದ ಹಾಗೆ, ಶನಿವಾರ- ರಾಶಿ ಭವಿಷ್ಯ ಅಕ್ಟೋಬರ್-5,2024 ಸೂರ್ಯೋದಯ: 06:10, ಸೂರ್ಯಾಸ್ತ : 05:58 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ

ಚಿತ್ರದುರ್ಗ | ಪುಷ್ಪಾವತಿ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದ ಬಸವೇಶ್ವರ ನಗರ ನಿವಾಸಿ ಪುಷ್ಪಾವತಿ (69 ವರ್ಷ) ಇಂದು ಸಂಜೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ

ದರ್ಶನ್ ಜಾಮೀನಿಗಾಗಿ ವಕೀಲರು ಮಂಡಿಸಿದ ವಾದವೇನು..? ಇಲ್ಲಿದೆ ಪಾಯಿಂಟ್ ಪಾಯಿಂಟ್ ಹೈಲೇಟ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿ ಬಹಳ ದಿನಗಳೇ ಕಳೆದಿವೆ. ಆದರೆ ಚಾರ್ಜ್ ಶೀಟ್ ಸಂಪೂರ್ಣವಾಗಿ ಸ್ಟಡಿ ಮಾಡುವ ಕಾರಣಕ್ಕೆ ಆಗಾಗ ದರ್ಶನ್

error: Content is protected !!