ಯುವ ಜನಾಂಗಕ್ಕೆ ಸಂಘ, ಸಂಘಟನೆ ಎಂದರೆ ಗೊತ್ತಿಲ್ಲ : ಖಂಡೋಜಿರಾವ್

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ.24 :

ಅಂಚೆ ಇಲಾಖೆಯಲ್ಲಿ ಹೂಸದಾಗಿ ಕೆಲಸಕ್ಕೆ ಸೇರಿರುವ ಯುವ ಜನಾಂಗಕ್ಕೆ ಸಂಘ ಎಂದರೆ ಏನು ಸಂಘಟನೆ ಎಂದರೆ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲ. ನಮ್ಮ ಸಂಘದಲ್ಲಿನ ಹಿರಿಯರು ಸಂಘದ ಮತ್ತು ಸಂಘದ ಚಟುವಟಿಕೆಯ ಬಗ್ಗೆ ತಿಳಿಸಿ ಕೊಡುವುದರ ಮೂಲಕ ಅವರನ್ನು ಸಂಘಟನೆಗೆ ಬರಮಾಡಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಅಂಚೆ ನೌಕರರ ಸಂಘದ ಕರ್ನಾಟಕ ವಲಯದ3ನೇ ವರ್ಗದ ವಲಯ ಕಾರ್ಯದರ್ಶಿಗಳಾದ ಖಂಡೋಜಿರಾವ್ ಕರೆ ನೀಡಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘ ಮೂರನೇ ವರ್ಗ, ಪೋಸ್ಟ್‍ಮೆನ್ & ಎಂಟಿಎಸ್ ಮತ್ತು ಗ್ರಾಮೀಣ ಅಂಚೆ ನೌಕರರ ಸಂಘದ ಚಿತ್ರದುರ್ಗ ವಿಭಾಗದವತಿಯಿಂದ ಭಾನುವಾರ ನಗರದ ತರಾಸು ರಂಗಮಂದಿರದಲ್ಲಿ ನಡೆದ 35ನೇ ಜಂಟಿ ದೈವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಸರ್ಕಾರದವತಿಯಿಂದ ಏನಾದರೂ ಸೌಲಭ್ಯ ಪಡೆಯಬೇಕಾದರೆ ಸಂಘ ಅಗತ್ಯವಾಗಿತ್ತು. ಇದರ ಮೂಲಕವೇ ಸರ್ಕಾರಕ್ಕೆ ಆಗ್ರಹವನ್ನು ಮಾಡಲಾಗುತ್ತಿತ್ತು, ಇದ್ದಲ್ಲದೆ ನಮ್ಮ ನೌಕರರ ವಿರುದ್ದ ಸರ್ಕಾರ ಏನಾದರೂ ಆದೇಶವನ್ನು ಹೂರಡಿಸಿದರೆ ಅದರ ವಿರುದ್ದವೂ ಸಹಾ ಸಂಘದ ಮೂಲಕ ಹೋರಾಟವನ್ನು ಮಾಡುವುದರ ಮೂಲಕ ಅ ಆದೇಶವನ್ನು ಹಿಂಪಡೆ ಯುವವರೆಗೂ ಹೋರಾಟವನ್ನು ಮಾಡಲಾಗುತ್ತಿತ್ತು ಆ ದಿನಮಾನದಲ್ಲಿ ಸಂಘ, ಸಂಘಟನೆ ಎಂದರೆ ಸರ್ಕಾರವಾಗಲಿ, ಆಡಳಿತ ಮಂಡಳಿಯಾಗಲಿ ಗೌರವವನ್ನು ನೀಡುವುದರ ಮೂಲಕ ನಮ್ಮ ಮನವಿಗೆ ಸ್ಪಂದಿಸುತ್ತಿತ್ತು ಎಂದರು.

ನಮ್ಮ ಕಾಲದಲ್ಲಿ ಸಂಘಟನೆಯನ್ನು ಮಾಡುವುದಕ್ಕಾಗಿ ರಾಜ್ಯವ್ಯಾಪ್ತಿ ಪ್ರವಾಸವನ್ನು ಮಾಡುವುದರ ಮೂಲಕ ಸಂಘಟನೆಯನ್ನು ಮಾಡಲಾಗುತ್ತಿತ್ತು ಇದ್ದಲ್ಲದೆ ಜಿಲ್ಲಾವಾರು ಸಮ್ಮೇಳನವನ್ನು ಮಾಡುವುದರ ಮೂಲಕ ಸಂಘಟನೆಯನ್ನು ಮಾಡಲಾಗುತ್ತಿತ್ತು. ಈ ರೀತಿಯಾದ ಸಮ್ಮೇಳನವನ್ನು ಮಾಡಿದಾಗ ಸಾವಿರಾರು ಸಂಖ್ಯೆಯಲ್ಲಿ ಸಿಬ್ಬಂದ್ದಿಗಳು ಭಾಗವಹಿಸುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಇಲಾಖೆಗೆ ಹೊಸದಾಗಿ ಕೆಲಸಕ್ಕೆ ಸೇರಿರುವ ಯುವ ಜನತೆಗೆ ಸಂಘ, ಸಂಘಟನೆ ಎಂದರೆ ಏನು ಎಂಬುದರ ಬಗ್ಗೆ ತಿಳಿದಿಲ್ಲ, ಸಂಘ ಎಂದರೆ ಏನು ಎಂದು ಪ್ರಶ್ನೆ ಮಾಡಿ ಅದರಿಂದ ಏನು ಉಪಯೋಗ ಎನ್ನುತ್ತಿದ್ದಾರೆ. ಆದರೆ ಕೆಲಸದಲ್ಲಿ ಏನಾದರೂ ತೊಂದರೆಯಾದಾಗ ಸಂಘದ ಮೂಲಕ ಹೋದರೆ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ಸಾಧ್ಯವಾಗುತ್ತದೆ ಎಂಬ ಅರಿವು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಸೇವಕರಾದ ಶ್ರೀಮತಿ ವೀಣಾ ಮಾತನಾಡಿ, ಚಿತ್ರದುರ್ಗದಲ್ಲಿ ಓಳ್ಳೆಯ ಸಂಘಟನೆ ಇದೆ. ಇದರಿಂದ ನಿಮ್ಮ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ, ನಿಮ್ಮ ಸಂಘದಲ್ಲಿನ ಸದಸ್ಯರಿಗೆ ಉತ್ತಮವಾದ ಸೌಲಭ್ಯವನ್ನು ನೀಡಿ, ಮಕ್ಕಳ ಶಿಕ್ಷಣಕ್ಕೆ ಸಹಾಯವನ್ನು ಮಾಡಿ, ವ್ಯವಹಾರವನ್ನು ಮಾಡುವವರಿಗೆ ಸಾಲದ ರೂಪದಲ್ಲಿ ಸಹಾಯವನ್ನು ಮಾಡುವುದರ ಮೂಲಕ ಅವರ ಆರ್ಥಿಕ ಪ್ರಗತಿಗೆ ಕಾರಣರಾಗಿ ಎಂದು ಕರೆ ನೀಡಿದರು.

ಅಂಚೆ ಅಧೀಕ್ಷಕರಾದ ಕೆ.ಆರ್. ಉಷಾ ದೈವಾರ್ಷಿಕ ಸಮ್ಮೇಳನವನ್ನು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಅಂಚೆ ನೌಕರರ ಸಂಘ, 3ನೇ ವರ್ಗ, ಅಧ್ಯಕ್ಷರಾದ ಟಿ.ಎಸ್.ಶಿವಮೂರ್ತಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. 4ನೇ ವರ್ಗದ ಅಧ್ಯಕ್ಷರಾದ ಸತೀಶ್  ಸಹಾಯಕ ಜನರಲ್ ಸೆಕ್ರೆಟರಿ ಹೆಚ್, ಚಿತ್ರಶೇಖರ್, ಅಧ್ಯಕ್ಷರಾದ ಕೆ.ಟಿ. ತಿಮ್ಮಾರೆಡ್ಡಿ (ಕರೀಕೆರೆ) ರಾಷ್ಟ್ರೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ಎಂ.ಪಿ. ಚಿತ್ರಸೇನ, 4ನೇ ವರ್ಗದ ಕರ್ನಾಟಕ ವಲಯದ ಸಂಘಟನಾ ಕಾರ್ಯದರ್ಶಿ, ಮೈಲನಹಳ್ಳಿ ನಾಗರಾಜ್.ಎಂ.ಐ. ವಿಭಾಗೀಯ ಕಾರ್ಯದರ್ಶಿ ಎನ್.ಎ.ಶ್ರೀನಿವಾಸ್, ಸಹ ಕಾರ್ಯದರ್ಶಿ ಮಾರುತಿ ಆರ್, ಖಂಜಾಚಿ ರಾಜೇಶ್ವರಿ ಟಿ., ರಾಷ್ಟ್ರೀಯ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಪ್ರೇಮ ಕುಮಾರ್ ಚಾರಿ, ಸಹ ಕಾರ್ಯದರ್ಶಿ ಶಶಿಕಾಂತ ಯಾದವ್, ಖಂಜಾಚಿ ಶ್ರೀನಿವಾಸ್ ಮೂರ್ತಿ, ಗ್ರಾಮೀಣ ಅಂಚೇ ನೌಕರರ ಸಂಘದ ಅಧ್ಯಕ್ಷರಾದ ಅಜಯ್ ಕುಮಾರ್, ಕಾರ್ಯದರ್ಶಿ ಪಾಂಡುರಂಗರೆಡ್ಡಿ, ಸಹ ಕಾರ್ಯದರ್ಶಿ ನಂದಿನಿ, ಖಂಜಾಚಿ ರಾಜು ಭಾಗವಹಿಸಿದ್ದರು.

ಈ ಸಮ್ಮೇಳನದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ 2023-24 ನೇ ಇಸವಿಯಲ್ಲಿ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.

 

suddionenews

Recent Posts

ಯುರಿನ್ ಇನ್ಫೆಕ್ಷನ್ ಆಗಿದ್ಯಾ..? ಈ ಮನೆ ಮದ್ದನ್ನ ಟ್ರೈ ಮಾಡಿ

ಸಾಮಾನ್ಯವಾಗಿ ಸಾಕಷ್ಟು ಜನರಿಗೆ ಯುರಿನ್ ಇನ್ಫೆಕ್ಷನ್ ಸಮಸ್ಯೆ ಕಾಡುತ್ತದೆ. ಪಬ್ಲಿಕ್ ಟಾಯ್ಲೆಟ್ ಬಳಸಿದಾಗ ಅಥವಾ ಸ್ವಚ್ಚತೆ ಇಲ್ಲದ ವಾಶ್ ರೂಮ್…

3 hours ago

ಈ ರಾಶಿಯ ಇಂಜಿನಿಯರ್ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಯೋಗ

ಈ ರಾಶಿಯ ಇಂಜಿನಿಯರ್ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಯೋಗ, ಗುರುವಾರದ ರಾಶಿ ಭವಿಷ್ಯ 27 ಮಾರ್ಚ್ 2025…

5 hours ago

ನಾಳೆಯಿಂದ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊಳಲ್ಕೆರೆ ಸಜ್ಜು

ಸುದ್ದಿಒನ್, ಹೊಳಲ್ಕೆರೆ, ಮಾರ್ಚ್. 26 : ಗಣಪತಿಯ ಧಾರ್ಮಿಕ ಸ್ಥಳವಾದ ಹೊಳಲ್ಕೆರೆಯಲ್ಲಿ ನಾಳೆಯಿಂದ ( ಗುರುವಾರ) ಎರಡು ದಿನಗಳ ಕಾಲ…

12 hours ago

ನಾಳೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ

    ಚಿತ್ರದುರ್ಗ. ಮಾರ್ಚ್26 :  ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ…

13 hours ago

ನಾಗರಾಜ್ ಅವರಿಗೆ ಸಮಾಜ ಸೇವಾ ರತ್ನ ಮತ್ತು ಬಡವರ ಆಶಾಕಿರಣ ಪ್ರಶಸ್ತಿ ಪ್ರದಾನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

13 hours ago

6 ವರ್ಷಗಳ ಕಾಲ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ..!

  ಸುದ್ದಿಒನ್, ಬೆಂಗಳೂರು, ಮಾರ್ಚ್. 26 :  ಬಿಜೆಪಿಯ ಶಿಸ್ತು ಸಮಿತಿ ಸಾಕಷ್ಟು ಬಾರೀ ಎಚ್ಚರಿಕೆಯನ್ನು ನೀಡಿದರು ಸಹ ಎಚ್ಚೆತ್ತುಕೊಳ್ಳದೆ…

15 hours ago