Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿರ್ದೇಶಕನನ್ನೇ ಬಲಿಪಡೆಯಿತಾ ‘ಅಶೋಕ ಬ್ಲೇಡ್’ ಸಿನಿಮಾ..?

Facebook
Twitter
Telegram
WhatsApp

ಇಂದು ಬೆಳಗ್ಗೆ ಕರಿಮಣಿ ಧಾರಾವಾಹಿಯ ನಿರ್ದೇಶಕ ವಿನೋದ್ ದೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶೋಕ ಬ್ಲೇಡ್ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದರು. ಕೋಟಿ ಕೋಟಿ ಸಾಲದಿಂದಾಗಿ ಸಾವನ್ನಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಲೇಖಕಿ ಕುಸುಮಾ ಅವರು ಹೀಗೊಂದು ಲೇಖನ ಬರೆದಿದ್ದಾರೆ.

 

‘ನಿರ್ದೇಶಕನನ್ನೆ ಬಲಿಪಡೆಯಿತು ಸಿನೆಮಾ. ಕನಸೇ ಕೊಂದಿತು!!’

ವಿನೋದ್ ದೋಂಡಾಳೆ ಎಂಬ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ; ಅವರದೇ ಸಿನೆಮಾ. ‘ಅಶೋಕ ಬ್ಲೇಡ್’ ಅಂತ ಹೆಸರಿಟ್ಟಿದ್ದರು. ಅದು ಬದುಕನ್ನು ಕುಯ್ದು ಕೊಂದಿತು. ಪಿ ಶೇಷಾದ್ರಿ ಅವರ ಜೊತೆ 8 ವರ್ಷ ಸಿನೆಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ದಾರಾವಾಹಿಗೆ ಟಿ ಎನ್ ಸೀತಾರಾಮ್ ಸರ್ ಜೊತೆಯಾದವರು ವಿನೋದ್. ಅಲ್ಲಿಂದ ನರಹರಿರಾವ್, ದೀಪಕ್ ಮತ್ತು ವಿನೋದ್ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. ಒಬ್ಬ ಕೆಮರಾಮನ್, ಒಬ್ಬ ನಿರ್ದೇಶಕ ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್ . ಈ ಕಾಂಬಿನೇಶನ್ ವರ್ಕಾಗುವಾಗ ದೀಪಕ್ ಇಲ್ಲವಾದರು. ವಿನೋದ್ ಮತ್ತು ನರಹರಿ ಮುಂದುವರೆದರು. ಯಶಸ್ವೀ ಧಾರಾವಾಹಿಗಳನ್ನು ನೀಡಿದರು. ಟಿಸಿಲೊಡೆದು, ಛಲ ಬಿಡದೆ ಅವರು ಮುಂದುವರೆಯುವಾಗ ಎಲ್ಲರಿಗೂ ಖುಷಿಯಾಗಿತ್ತು. ಯಾವುದೋ ಧಾರಾವಾಹಿ ಮಾಡುವ ಬಗ್ಗೆ ಕೆಲವ ತಿಂಗಳ ಹಿಂದೆ ಮಾತಾಡಿದಾಗ, ಈ ಸಿನೆಮಾ ಮುಗಿಯಲಿ ಅಂದಿದ್ದರು. ಧಾರಾವಾಹಿಯ ಮೂಲಕ ಸ್ವಂತ ಸಿನೆಮಾ ಮಾಡುವಷ್ಟು ಬೆಳೆದರಲ್ಲಾ ಅಂತ ಬಹಳ ಖುಷಿಯಾಗಿತ್ತು. ಬಹುಶಃ ಧಾರಾವಾಹಿಯೇ ಮಾಡಿಕೊಂಡಿದ್ದರೆ ಎಲ್ಲವೂ ಚೆನ್ನಾಗೇ ಇರುತ್ತಿತ್ತೇನೋ. ಆದರೆ…ಸಿನೆಮಾ ಕನಸು ಅಂತೊಂದಿದೆಯಲ್ಲಾ…ಅದು ಎಲ್ಲರ ಪಾಲಿಗೂ ನನಸಾಗುವ ಸವಿಗನಸೇ ಅಲ್ಲ, ದುಃಸ್ವಪ್ನವೂ ಆಗಬಹುದು. ಅದಕ್ಕೆ ವಿನೋದ್ ಸರ್‌ ಸಾವು ಉದಾಹರಣೆಯಾಗಬಾರದಿತ್ತು.

ನೀನಾಸಂ ಸತೀಶ್ ನಾಯಕರಾಗಿ, ಮುಕ್ಕಾಲು ಮುಗಿದಿದ್ದ ಸಿನೆಮಾ ಇನ್ನೂ ಕೊಡು, ಮತ್ತೂ ಕೊಡು ಅಂತ ಕೋಟಿಗಳನ್ನು ಕೇಳುತ್ತಲೇ ಇತ್ತು. ‘ಅಶೋಕ ಬ್ಲೇಡ್’ ಸಾಲಗಾರರ ರೂಪದಲ್ಲಿ ದಿನವೂ ಎದೆ ಇರಿಯುತ್ತಿತ್ತು. ಇಂದು ಎಲ್ಲವೂ ಮುಗಿಯಿತು!
ಸಿನೆಮಾ ಕನಸು ಹೊತ್ತವರು ಕಲಿಯಬೇಕಾದ ಒಂದಷ್ಟು ಪಾಠಗಳಿವೆ

1. ಯಾವ್ದೋ ಟಿವಿ ಸಂದರ್ಶನದಲ್ಲಿ ಕೂತು ನಾನು ಮೊದಲ ಸಿನೆಮಾ ಮಾಡಿ ಎರಡು ಮನೆ‌ಮಾರಿದೆ. ಎರಡನೆ ಸಿನೆಮಾ ಭರ್ಜರಿ ಹಿಟ್ ಅಂತ ಹೇಳುವವನ ನಸೀಬು ನಮ್ಮದೂ ಆಗುತ್ತದೆ ಅಂತ ಯಾವ ಪ್ರೊಡ್ಯೂಸರೂ ಅಂದುಕೊಳ್ಳಬಾರದು. ನೂರಾರು ಕೋಟಿ ಇದ್ದವರು ಹತ್ತಾರು ಕೋಟಿಗಳ ಸಿನೆಮಾ ಮಾಡಬಹುದು. ಕಷ್ಟಪಟ್ಟು ಕೂಡಿಟ್ಟ ಹಣದೊಂದಿಗೆ ಸಿನೆಮಾ ಎಂಬ ಜೂಜಾಡಬಾರದು.ಮನೆ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿ ಜೀವ ಬಿಡುವ ಸ್ಥಿತಿ ಬಂದರೂ ಬರಬಹುದು.

2. ನನ್ನ ಪರಿಚಯದಲ್ಲೆ ಕನಿಷ್ಟ 50 ಜನ ಕನಸುಗಣ್ಣಿನ ಪ್ರತಿಭಾವಂತ ನಿರ್ದೇಶಕರಿದ್ದಾರೆ. ಮನೆಯಿಂದ ಹೊರಗಿದ್ದಾರೆ. ಮದುವೆಯಿಲ್ಲ. ತಂದೆತಾಯಿಯೋ ಅಣ್ಣನೋ ತಂಗಿಯೋ ಪ್ರೇಮಿಯೋ ಇಂದಲ್ಲ ನಾಳೆ ದೊಡ್ಡ ಡೈರೆಕ್ಟರಾಗಬಹುದೆಂದು ದೂರದ ಆಸೆ ಇಟ್ಟುಕೊಂಡು ಅವರ ಖರ್ಚಿಗೆ ಕಾಸು ಕೊಡುತ್ತಾರೆ. ಇವರೂ ಸಿಕ್ಕ ಸಿನೆಮಾಗಳಿಗೆ ಅಸಿಸ್ಟಂಟ್, ಅಸೋಸಿಯೇಟ್ ಆಗುತ್ತಾ ಸಣ್ಣ ಪುಟ್ಟ ಖರ್ಚು ದೂಡುತ್ತಾ, ತನ್ನ ಕನಸಿನ ಸಿನೆಮಾ ಕತೆ ಇಟ್ಟುಕೊಂಡು ಪ್ರೊಡ್ಯೂಸರ್ಗಾಗಿ ಹೀರೋ ಡೇಟಿಗಾಗಿ ಹುಡುಕುತ್ತಾ ವರ್ಷಗಳನ್ನು ದೂಡುತ್ತಿದ್ದಾರೆ. ಕನಸು ತಪ್ಪಲ್ಲ, ಸಣ್ಣಪುಟ್ಟ ಕಷ್ಟಗಳೂ ಇದ್ದದ್ದೇ. ಆದರೆ…ಕುಟುಂಬ ನಿರ್ಲಕ್ಷಿಸುತ್ತಾ, ಇವತ್ತಿಗಾಯ್ತು, ನಾಳೆಗೇನು? ಅನ್ನುವ ಸ್ಥಿತಿಯಲ್ಲಿ ಯಾರೋ ಒಬ್ಬ ನಿರ್ದೇಶಕನಿಗೆ ಒಂದು ಸಿನೆಮಾದಿಂದ ಸಿಕ್ಕ ಯಶಸ್ಸಿನ ಲಾಟರಿ ನಮಗೂ ಹೊಡೆಯುತ್ತದೆ ಎಂಬ ಭ್ರಮೆ ದಯವಿಟ್ಟು ಬೇಡ.

3. ಇನ್ನು ನಟರಾಗುವ ಕನಸು ಹೊತ್ತವರು. Once again ಯಾರೋ ನಟ ನಾನು ಆವತ್ತು ಗತಿ ಇಲ್ಲದೇ ಬಸ್ಟಾಂಡಿನಲ್ಲಿ ಮಲಗಿ ಕಟೌಟಿನ ಕನಸು ಕಾಣುತ್ತಿದ್ದೆ ಅಂತ ಹೇಳಿದ್ದನ್ನೆ ತಲೆಯಲ್ಲಿಟ್ಟುಕೊಳ್ಳಬೇಡಿ. ಸಿನೆಮಾಗಾಗಿ ಊರಿಂದ ಬಂದು ಹಾಗೆ ಎಲ್ಲೋ ಹೇಗೋ ಕಾಲಕಳೆದು, ಏನೂ‌ಮಾಡಲಾರದೇ ಸೋತವರ ಲೆಕ್ಕ ಗೊತ್ತೇ? ಒಬ್ಬನ ಯಶಸ್ಸಿನ ಕತೆಮಾತ್ರ ಕೇಳುತ್ತೇವೆ ನಾವು. ಅವನೂ ಸೋತಿದ್ದರೆ ಬಸ್ಟಾಂಡಿನಲ್ಲಿ ಮಲಗೆದ್ದವರ ಹೆಸರಿರದ ಪಟ್ಟಿಯಲ್ಲಿ ಅವನೂ ಹೆಸರಿರದ ವ್ಯಕ್ತಿಯಾಗಿರುತ್ತಿದ್ದ. ಗೆದ್ದವರ ಭಾಷಣಗಳಿಂದ ಸ್ಪೂರ್ತಿ ಪಡೆಯುವುದು ತಪ್ಪಲ್ಲ. ಆದರೆ ಮಿತಿ‌, ಎಚ್ಚರಗಳನು ಮೀರಿ, ವೈಯಕ್ತಿಕ ಬದುಕಿನ ಕನಿಷ್ಟ ಕರ್ತವ್ಯಗಳನ್ನು ನಿರ್ಲಕ್ಷಿಸಿ ಅವನಂತಾ ಕಷ್ಟ ಇಂದು ನನಗೂ ಬಂದಿದೆ, ನಾಳೆ ಅವನಂತದೇ ಗೆಲುವು ನನ್ನದೂ ಆಗುತ್ತದೆ ಎಂಬ ಭ್ರಮೆಯ ಬೆನ್ನು ಹತ್ತಬೇಡಿ. ಇಷ್ಟಕ್ಕೂ ಗೆಲುವೆಂಬುದು ಬದುಕು ನಮಗೆ ಕೊಡುವ ಅವಕಾಶಗಳ ಮೊತ್ತವಷ್ಟೆ.

ಬದುಕಿಗಿಂತ ದೊಡ್ಡದೇನ್ರೀ ಸಿನೆಮಾ? ಈಗ ಹೋದ ಜೀವವನ್ನು ಯಾವ ಸಿನೆಮಾ ತಂದುಕೊಡುತ್ತದೆ? ಮೂರು ಚಿಕ್ಕ ಮಕ್ಕಳು ಏನು ಮಾಡಬೇಕು? ಜೋಡಿ ವ್ಯವಹಾರದಲ್ಲಿ ಉಳಿದ ಮತ್ತೊಬ್ಬ ಏನು‌ಮಾಡಬೇಕು? ಸಿನೆಮಾ ಎಂಬ‌ ಮಾಯೆ ಮತ್ತೊಂದು ಜೀವವನ್ನು ಮುಗಿಸಿತು. ಜಗತ್ತಿನಲ್ಲಿ ಕೋಟಿಗಳಿಗೆ ಟೋಪಿ ಹಾಕಿ ಭಂಡತನದಿಂದ ಬದುಕುವ ಜನರೆಷ್ಟಿಲ್ಲ? ಕಂಡವರ ಹಣ ತಿಂದು ನಿದ್ದೆ ಹೇಗೆ ಮಾಡುತ್ತಾರೆ? ಅಂತ ನಾವಂದುಕೊಳ್ಳುವಾಗ ಅವರು ಭರ್ಜರಿ ಗೊರಕೆ ಹೊಡೆದಿರುತ್ತಾರೆ. ಆದರೆ ಪಾಪ ವಿನೋದ್ ಸರ್ ಹಾಗಲ್ಲ. ಮನಸ್ಸು ಮಾಡಿದ್ದರೆ ಎಲ್ಲಾದರೂ ಎರಡು ವರ್ಷ ಮರೆಯಾಗಬಹುದಿತ್ತು. ‘ಹೌದು, ಕೊಟ್ಟಿದೀರ. ಈಗಿಲ್ಲ ಏನ್ಮಾಡ್ಲಿ?’ ಅಂತ ಭಂಡರಾಗಬಹುದಿತ್ತು. ಮನುಷ್ಯನ ವ್ಯಕ್ತಿತ್ವದ ಸೂಕ್ಷ್ಮ ತೆಯೂ ಯಾವ ಅಶೋಕ ಬ್ಲೇಡಿಗೂ ಕಮ್ಮಿ ಇಲ್ಲ. ಸದ್ದಿಲ್ಲದೇ , ಒಳಗೇ ಮುಗಿಸಿಹಾಕುತ್ತದೆ.

ಕಡು ಕಷ್ಟದಿಂದ ಬಂದು, ಯಶಸ್ವೀ ನಿರ್ದೇಶಕರಾಗಿದ್ದ ವಿನೋದ್ ಸರ್ ಕನಸು ಮತ್ತು ಎಲ್ಲ ಬಾದೆಗಳೆರಡಕ್ಕೂ ಸಾವಿನೊಂದಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ನಿಮ್ಮ ಸಿನೆಮಾ ಕನಸು ಕನಸಾಗೇ ಉಳಿದದ್ದಕ್ಕೆ, ಈ ದುರಂತ ಅಂತ್ಯಕ್ಕೆ ವಿಷಾದವಿದೆ.
ನಿಮ್ಮ ಸಾವು ಎಲ್ಲ ಸಿನೆಮಾ ಕನಸುಗಾರರಿಗೆ “ಸಿನೆಮಾಗಿಂದ ಬದುಕು ದೊಡ್ಡದು” ಎಂಬ ಪಾಠವಾಗಬೇಕಷ್ಟೆ.
ಅಥವಾ ಹೆಚ್ಚು ಸೂಕ್ಷ್ಮವಾಗಬಾರದು ಕೊಂಚ ಭಂಡತನವಿರಬೇಕೆಂಬ ಪಾಠವೋ? ನಮ್ಮ ಕನಸುಗಳು ಯಾವಾಗಲೂ ಇಲ್ಲಿಂದೆಲ್ಲಿಗೋ ಒಯ್ಯುವ ಏಣಿಯೇ ಆಗಬೇಕಿಲ್ಲ. ನಮ್ಮ ಕನಸುಗಳೇ ನಮ್ಮನ್ನು ಇರಿದು ಕೊಲ್ಲಲೂಬಹುದೆಂಬ ಪಾಠವೋ?
ವಿನೋದ್ ಸರ್…
ಏನೂ ತೋಚದಾಗಿದೆ ಎಂದು ಪೋಸ್ಟ್ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಎಂಬಿ ಪಾಟೀಲ್ : ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ..!

  ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ

Mobile phone : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇಲ್ಲಿದೆ ಸ್ಪಷ್ಟತೆ..!

  ಸುದ್ದಿಒನ್ : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇದೀಗ ಈ ಪ್ರಶ್ನೆಗೆ WHO ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಮೊಬೈಲ್ ಫೋನ್ ಬಳಕೆಯಿಂದ

error: Content is protected !!