Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ಧಾರ್ಥ್ ಟ್ವೀಟ್ ಗೆ ವಿರೋಧ : ಸೈನಾ ಬಳಿ ಕ್ಷಮೆ ಕೇಳಿದ ನಟ..!

Facebook
Twitter
Telegram
WhatsApp

 

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇತ್ತೀಚೆಗೆ ಒಂದು ಪೋಸ್ಟ್ ಹಾಕಿದ್ದರು. ಅದು ಪಂಜಾಬ್ ನಲ್ಲಿ ಪ್ರಧಾನಿ ಮೋದಿಗೆ ಉಂಟಾದ ಭದ್ರತೆಯ ಕೊರತೆ ಬಗ್ಗೆ. ಯಾವುದೇ ರಾಷ್ಟ್ರದಲ್ಲಿಯೇ ಆಗಲಿ ಪ್ರಧಾನಿಗೆ ಭದ್ರತೆ ಸಿಗದೇ ಹೋದಲ್ಲಿ ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜಾಗರೂಕತೆಯನ್ನ ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದರು.

ಇದನ್ನ ವಿರೋಧಿಸುವ ಭರದಲ್ಲಿ ತಮಿಳು ನಟ ಸಿದ್ಧಾರ್ಥ್, ಮುಜುಗರಕ್ಕೀಡು ಮಾಡುವಂತ ಪ್ರತಿಕ್ರಿಯೆ ನೀಡಿದ್ದರು. ಆ ಪದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ದೇಶವನ್ನ ಪ್ರತಿನಿಧಿಸುವ ಆಟಗಾರ್ತಿ ಬಗ್ಗೆ ಈ ರೀತಿ ಕಮೆಂಟ್ ಯಾರು ಒಪ್ಪಲಿಲ್ಲ. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ನಟ ಸಿದ್ದಾರ್ಥ್ ಕ್ಷಮೆಯಾಚಿಸಿದ್ದಾರೆ.

ಡಿಯರ್ ಸೈನಾ.. ಕೆಲ ದಿನಗಳ ಹಿಂದೆ ನಿಮ್ಮ ಟ್ವೀಟ್ ಗೆ ಕೆಟ್ಟ ಪ್ರತಿಕ್ರಿಯೆ ನೀಡಿದ್ದೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಹಾಗೂ ನಾನು ಬಳಸಿದ ಕೆಟ್ಟ ಪದಗಳನ್ನ ನಾನು ಕೂಡ ಸಮರ್ಥಿಸಿಕೊಳ್ಳಲ್ಲ. ಒಂದು ಜೋಕ್ ಅನ್ನ ವಿವರಿಸಬೇಕಾದ ಸಂದರ್ಭ ಬರುತ್ತೆ ಅಂದ್ರೆ ಅದು ಒಳ್ಳೆಯ ಸಂದರ್ಭವಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನೀವೂ ನನ್ನ ಕ್ಷಮೆಯನ್ನು ಸ್ವೀಕರಿಸುತ್ತೀರಿ ಎಂದು ಭಾವಿಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚನ್ನಪಟ್ಟಣಕ್ಕೆ ಸಿಪಿ ಯೋಗೀಶ್ವರ್ ಸ್ಪರ್ಧೆ ಬಹುತೇಕ ಖಚಿತ : ಸಂಜೆ ಒಳಗೆ ಘೋಷಣೆ..!

ಬೆಂಗಳೂರು: ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಮೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಅಂದಿನಿಂದನೂ ಆ ಕ್ಷೇತ್ರದಿಂದ ತಾನೇ ಸ್ಪರ್ಧಿಸುವುದಾಗಿ ಸಿಪಿ ಯೋಗೀಶ್ವರ್ ಹೇಳುತ್ತಿದ್ದರು. ಉಪಚುನಾವಣೆಯ ದಿನಾಂಕ ಘೋಷಣೆಯಾದ ಮೇಲೂ ನಾನೇ ಅಭ್ಯರ್ಥಿ ಎನ್ನುತ್ತಿದ್ದರು.

ಸುದೀಪ್ ತಾಯಿ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಾಘವೇಂದ್ರ ರಾಜ್‍ಕುಮಾರ್

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಇಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದಾರೆ. ಜೆಪಿ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಹಲವು ಗಣ್ಯರು ಸುದೀಪ್ ನಿವಾಸಕ್ಕೆ ಬಂದು ಅವರ ತಾಯಿಯ ಅಂತಿಮ

ಸುದೀಪ್ ತಾಯಿ ಚಿಕಿತ್ಸೆ ಫಲಕಾರಿಯಾಗದೆ ನಿಧನ : ಸರೋಜಾ ಅವ್ರಿಗೆ ಏನಾಗಿತ್ತು..?

ಕಿಚ್ಚ ಸುದೀಪ್ ಅವರ ಮನೆಯಲ್ಲಿ ಮೌನ ಆವರಿಸಿದೆ.. ಮನಸ್ಸಿನ ತುಂಬಾ ತಡೆಯಲಾರದ ದುಃಖವಿದೆ.. ಕಣ್ಣಲ್ಲಿ ನೀರು ತುಂಬಿದೆ.. ಅಷ್ಟು ಪ್ರೀತಿ ಮಾಡುವ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸುದೀಪ್ ಅವರಿಗೆ ಮಾತೃ ವಿಯೋಗ ಕಾಡಿದೆ‌.

error: Content is protected !!