SC/ST ಹಣ ದುರುಪಯೋಗ; ಲಿಂಗಾಯತ, ದಲಿತ, ಬ್ರಾಹ್ಮಣ ಹುಲಿಗಳಿವೆಯಾ ಎಂದು ಯತ್ನಾಳ್ ಕಿಡಿ..!

ಬೆಂಗಳೂರು; ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಹುಲಿ ಹಾಗೂ ಎಸ್ಸಿ, ಎಸ್ಟಿ ವಿಚಾರ ಚರ್ಚೆಗೆ ಬಂದಿದೆ. ವಿಪಕ್ಷ ನಾಯಕರು ಎಸ್ಸಿ, ಎಸ್ಟಿ ಹಣ ಬೇರೆಯದ್ದಕ್ಕೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಸದನದಲ್ಲಿಯೇ ಚರ್ಚೆ ಶುರು ಮಾಡಿದರು. ಆರ್.ಅಶೋಕ್ ಅವರು ಕಾಡಿನಲ್ಲ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ಸಿ, ಎಸ್ಟಿ ಹಣವನ್ನ ಬಳಸುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ.ಖಾದರ್, ಅಲ್ಲಿಯೂ ಎಸ್ಸಿ, ಎಸ್ಟಿ ಸಮುದಾಯದವರು ಇದ್ದಾರೆ. ಫಾರೆಸ್ಟ್ ಏರಿಯಾದಲ್ಲಿ ಇದಾರೆ ಅಲ್ವಾ. ಅವರಿಗೆ ಆ ಹಣ ಕೊಟ್ಟಿದ್ದಾರೆಂದು ಆರ್.ಅಶೋಕ್ ಪ್ರಶ್ನೆಗೆ ಉತ್ತರ ನೀಡಿದರು. ಆದರೆ ಸ್ಪೀಕರ್ ಮಾತನ್ನು ವಿಪಕ್ಷ ನಾಯಕರು ಒಪ್ಪಲಿಲ್ಲ. ವಯನಾಡಿನವರಿಗೆ ಆ ಹಣವನ್ನ ಕೊಟ್ಟಿದ್ದು ಎಂದೇ ವಾಗ್ದಾಳಿ ನಡೆಸಿದರು. ಇದೇ ವೇಳೆ ಮಧ್ಯ ಪ್ರವೇಶ‌ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಜೋರು ಮಾಡಿದರು. ಕಾಡಿನಲ್ಲೇನಾದ್ರೂ ಲಿಂಗಾಯತ, ಬ್ರಾಹ್ಮಣ, ದಲಿತ ಹುಲಿಗಳು ಇವೆಯಾ..? ಎಂದು ಹೇಳುತ್ತಾ ಸ್ಪೀಕರ್ ಕಾಲೆಳೆದರು.

ಬಳಿಕ ಸ್ಪೀಕರ್ ಯು.ಟಿ ಖಾದರ್ ಅವರು ಸರಿ ಆ ಮಾತನ್ನ ನಾನು ಹಿಂದೆ ತೆಗೆದುಕೊಂಡಿದ್ದೇನೆ. ಚರ್ಚೆ ಬೇಡ. ನೀವೂ ಮಾತಾಡಿ ಎಂದರೂ ಕೇಳದ ಯತ್ನಾಳ್ ಹುಲಿ ರಕ್ಷಣೆಗಾಗಿ ಕೊಟ್ಟ ಹಣದ ಬಗ್ಗೆ ಅದೇ ಮಲವಾದ ಮಾಡುತ್ತಿದ್ದರು. ಆಗ ಯು.ಟಿ.ಖಾದರ್ ಆಯ್ತು ಅದನ್ನ ಬಿಟ್ಟು ಬಿಡಿ. ನೀವೋದಾಗ ನಿಮಗೆ ಬೇರೆ ಕೊಡೋಣಾ. ಅದನ್ಯಾಕೆ ಚರ್ಚೆ ಮಾಡೋಣಾ. ನನ್ನ ಆಲೋಚನೆಯಲ್ಲಿ ಹೇಳಿದೆ. ಅದನ್ನ ಮುಗಿಸ್ತಾ ಇದ್ದೀನಿ. ಯತ್ನಾಳ್ ಅವರೇ ಕುಳಿತುಕೊಳ್ಳಿ ಎಂದು ಖಾದರ್ ಹೇಳಿದರು. ಈ ಚರ್ಚೆ ಮಾತ್ರ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು.

suddionenews

Recent Posts

ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಯಾಗಲಿ ; ಶಾಸಕ ಯತ್ನಾಳ್

ಬೆಂಗಳೂರು; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಫ್ಯಾಮಿಲಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸುತ್ತಲೆ ಇರುತ್ತಾರೆ. ಇದೀಗ…

56 minutes ago

ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಂಗಳೂರು, ಮಾ. 14: ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಇನ್ನೂ…

3 hours ago

ಸುದ್ದಿಒನ್ MOTIVATION : ಭಗವದ್ಗೀತೆಯ ಈ ಮೂರು ವಿಷಯಗಳು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಉಪಯುಕ್ತ….!

  ಭಗವದ್ಗೀತೆಯಿಂದ ಕಲಿಯಬೇಕಾದ ವಿಷಯಗಳು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಬಯಸುತ್ತಾನೆ. ಅದಕ್ಕಾಗಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾನೆ ಮತ್ತು ಶ್ರಮಿಸುತ್ತಾನೆ.…

7 hours ago

ಈ ರಾಶಿಯವರಿಗೆ ಕೆಲಸದಲ್ಲಿ ಅಭದ್ರತೆ, ಸಂಗಾತಿಯಿಂದ ಮೋಸ ಸಂಭವ

ಈ ರಾಶಿಯವರಿಗೆ ಹಣಕಾಸಿನ ತೀವ್ರ ಅಡಚಣೆ, ಈ ರಾಶಿಯವರಿಗೆ ಕೆಲಸದಲ್ಲಿ ಅಭದ್ರತೆ, ಸಂಗಾತಿಯಿಂದ ಮೋಸ ಸಂಭವ, ಶುಕ್ರವಾರದ ರಾಶಿ ಭವಿಷ್ಯ…

10 hours ago

ಹಿರಿಯೂರು : ಕಾರು – ಲಾರಿ ಡಿಕ್ಕಿ : ಓರ್ವ ಸಾವು

ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…

17 hours ago

ದುಡಿಯುವ ಕೈಗಳಿಗೆ ಕೆಲಸ ಕೊಡಿ: ಕೂಲಿ ಕಾರ್ಮಿಕರ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

18 hours ago