ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಈಗ ರಿಯಲ್ ಆಟ ಶುರುವಾಗಿದೆ. ಬಿಗ್ ಬಾಸ್ ಪ್ರತಿದಿನ ಹೊಸ ಹೊಸ ಟಾಸ್ಕ್ ಗಳನ್ನ ನೀಡುತ್ತಿದೆ. ಆ ಟಾಸ್ಕ್ ಗಳನ್ನು ಆಡುವುದರ ಜೊತೆಗೆ, ಮನೆಯಲ್ಲಿ ಜಗಳ ಹೆಚ್ಚಾಗುತ್ತಿದೆ. ಆರಂಭದಲ್ಲಿ ಪ್ರತಾಪ್ ಟಾರ್ಗೆಟ್ ಆಗಿದ್ದರು. ಹೀಗಾಗಿ ಕುಂತ್ರು, ನಿಂತ್ರು ಅವರದ್ದೇ ಟಾಪಿಕ್ ಆಗಿತ್ತು. ಈಗ ಮಾತಿಗೆ ಮುಂಚೆ ಜಗಳ ಆಗ್ತಾ ಇರುವುದು, ವಿನಯ್ ಹಾಗೂ ಸಂಗೀತಾ ನಡುವೆ. ಆದರೆ ಜಗಳದ ನಡುವೆ ಸಿಕ್ಕಿರುವುದು ಕಾರ್ತೀಕ್.
ಹೌದು ಬಿಗ್ ಬಾಸ್ ಮನೆಯಲ್ಲಿ ಕಾರ್ತೀಕ್ ಮತ್ತು ಸಂಗೀತಾ ನಡುವೆ ಎಷ್ಟು ಒಳ್ಳೆಯ ಬಾಂಧವ್ಯ ಬೆರೆತಿದೆಯೋ, ಸಂಗೀತಾ, ವಿನಯ್ ನಡುವೆ ಅಷ್ಟೇ ಜಗಳ ಮುಂದುವರೆದಿದೆ. ಜೊತೆಗೆ ಕಾರ್ತೀಕ್ ಹಾಗೂ ವಿನಯ್ ನಡುವೆಯೂ ಒಳ್ಳೆ ಒಡನಾಟವಿದೆ. ಈಗ ಕಾರ್ತಿಕ್ ಗೆ ಯಾರ ಪರ ಮಾತನಾಡಬೇಕು ಎಂಬುದೇ ದೊಡ್ಡ ಗೊಂದಲದ ಗೂಡಾಗಿದೆ.
ಕಾರ್ತಿಕ್ ಬಳಿ ಬಂದ ವಿನಯ್, ಎಲ್ಲರೂ ಒಂದು ಕಡೆ ಇದ್ದರೆ ನೀನು ಮಾತ್ರ ಇನ್ನೊಂದು ಕಡೆ ಇದ್ದೀಯಾ. ಏನೋ ಮಾಡಿದ್ದೀನಿ ನಾನು ನಿನಗೆ. ನನ್ನ ಹತ್ತಿರ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದೇ ಕೇಳಿದ್ದಾರೆ. ಅತ್ತ ಸಂಗೀತಾ ಕೂಡ ಕಾರ್ತೀಕ್ ಬಳಿ ಬಂದು, ನೀನು ಇಲ್ಲದೆ ಇದ್ದರು ನಾನು ನನ್ನ ಪರವಾಗಿ ನಿಂತುಕೊಳ್ಳುತ್ತೇನೆ. ನನ್ನ ಆಟ ನಾನೇ ಆಡುತ್ತೇನೆ ಎಂದಿದ್ದಾರೆ. ಇದು ಕಾರ್ತಿಕ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗೆಳೆಯನ ಜೊತೆಗೆ ನಿಲ್ಲುವುದಾ, ಸಂಗೀತಾ ಪರ ವಹಿಸುವುದಾ ತಿಳಿಯದೆ ಕಂಗಲಾಗಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…