2020ರಲ್ಲಿ ಸತ್ತವರ ಶವಗಳನ್ನೇ ಮರೆತಿದ್ದ ಸಿಬ್ಬಂದಿ : ಗಬ್ಬು ವಾಸನೆ ಬಳಿಕ ಹೊರೆ ತೆಗೆದ ಇಎಸ್ಐ ಸಿಬ್ಬಂದಿ..!

ಬೆಂಗಳೂರು: ಮೊದಲ ಅಲೆಯಲ್ಲಿ ಕೊರೊನಾ ಎಂಬ ವೈರಸ್ ಮನುಷ್ಯರನ್ನ ಅದೆಷ್ಟು ಕ್ರೂರತೆಗೆ ನೂಕಿತ್ತು ಎಂದರೆ ತಮ್ಮವರೇ ಸತ್ತರು ಅವರ ಮುಖವನ್ನು ನೋಡದೆ, ಶವಗಳನ್ನು ಮುಟ್ಟದೆ ಇರುವಷ್ಟು ಮನುಷ್ಯತ್ವವನ್ನೇ ಮರೆತಿದ್ದರು.

ಕೊರೊನಾ ಬಂದವರನ್ನ ಮಾತಾಡಿಸಿದ್ರೆ ಇನ್ನೆಲ್ಲಿ ಕೊರೊನಾ ವೈರಸ್ ತಗುಲುತ್ತೋ ಅನ್ನೋ ರೀತಿ ವರ್ತಿಸ್ತಾ ಇದ್ರು. ಆ ಸಮಯದಲ್ಲಿ ಸಾವನ್ನಪ್ಪಿದವ ಶವಸಂಸ್ಕಾರವನ್ನ ಆದಷ್ಟು ಸರ್ಕಾರದಿಂದಲೇ ಮಾಡಲಾಗುತ್ತಿತ್ತು. ಕುಟುಂಬಸ್ಥರು ಮಾಡಿದ್ರು ಕೂಡ ಅದಕ್ಕೆ ಆದಂತ ಸಾಕಷ್ಟು ನಿಯಮಗಳನ್ನ ಸೂಚಿಸಲಾಗಿತ್ತು. ಆದ್ರೆ ಸಿಲಿಕಾನ್ ಸಿಟಿಯಲ್ಲಿ ಕುಟುಂಬಸ್ಥರು ಶವವನ್ನೆ ತೆಗೆದುಕೊಂಡು ಹೋಗದೆ, ಆ ಶವಗಳು ವರ್ಷದ ಮೇಲೆ ಕಣ್ಣಿಗೆ ಬಿದ್ದಿರುವ ಘಟನೆ ನಡೆದಿದೆ.

ನಗರದ ಇಎಸ್ಐ ಆಸ್ಪತ್ರೆಯಲ್ಲಿ ಇಂಥದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಚಾರಾಜಪೇಟೆಯ ದುರ್ಗಾ ಮತ್ತು ಕೆ ಪಿ ಅಗ್ರಾಹಾರದ ಮುನಿರಾಜು ಎಂಬುವವರು 2020ರಲ್ಲಿಯೇ ಸೋಂಕಿಗೆ ಒಳಗಾಗಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ರು. ಬಳಿಕ ಕುಟುಂಬಸ್ಥರು ಮೃತ ದೇಹಗಳನ್ನ ತೆಗೆದುಕೊಂಡು ಹೋಗಲು ಬಂದೇ ಇರಲಿಲ್ಲ.

ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ ಎರಡು ಶವಗಳನ್ನ ಶವಗಾರದಲ್ಲೇ ಇಟ್ಟು ಮರೆತು ಬಿಟ್ಟಿದ್ದರು. ಇದೀಗ 15 ತಿಂಗಳ ಬಳಿಕ ಆ ಶವಗಳನ್ನ ಹೊರತೆಗೆದಿದ್ದಾರೆ. ಅದು ಶವಗಳು ವಾಸನೆ ಬರಲು ಶುರುವಾದ ಮೇಲೆ ಸಿಬ್ಬಂದಿಗೆ ಶವಗಳ ನೆನಪಾಗಿದೆ. ಈಗ ತೆಗೆದು ಮರಣೋತ್ತರ‌ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನೆ ಮಾಡಿದ್ದಾರೆ.

suddionenews

Recent Posts

ರತನ್ ಟಾಟಾ ಉಯಿಲ್ ನಲ್ಲಿ ಮೋಹಿನಿಗೆ 500 ಕೋಟಿ : ಹುಡುಕಾಟ ಶುರು..!

ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…

9 minutes ago

ಬಗರ್‍ಹುಕುಂ ಅರ್ಜಿಗಳನ್ನು ಮರು ಪರಿಶೀಲಿಸಿ : ಕುಮಾರ್ ಸಮತಳ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…

15 minutes ago

ಹೈಕೋರ್ಟ್ ತೀರ್ಪು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಭ್ರಮಾಚರಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

19 minutes ago

ದಾವಣಗೆರೆ ವಿಶ್ವವಿದ್ಯಾನಿಲಯ : ಹೊಳಲ್ಕೆರೆ ವಿದ್ಯಾರ್ಥಿನಿ ಗಂಗಮ್ಮ ಪ್ರಥಮ ರ‌್ಯಾಂಕ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

22 minutes ago

ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ : ಸಚಿವ ಮಧು ಬಂಗಾರಪ್ಪ

ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…

29 minutes ago

15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ : ಸಚಿವ ಮಧು ಬಂಗಾರಪ್ಪ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…

42 minutes ago