ಪಾಕ್ ಆಟಗಾರನನ್ನ ಬದುಕಿಸಿದ ಭಾರತೀಯ ವೈದ್ಯ : ಖುಷಿಯಲ್ಲಿ ತನ್ನ ಜೆರ್ಸಿ ಗಿಫ್ಟ್ ಕೊಟ್ಟ ರಿಜ್ವಾನ್…!

ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಇನ್ನೇನು ನಡೆಯಬೇಕು ಎನ್ನುವಾಗ್ಲೇ ಪಾಕಿಸ್ತಾನದ ಆರಂಭಿಕ ಹಾಗೂ ಸ್ಪೋಟಕ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆ ಪಾಕ್ ತಂಡದವರನ್ನ ಆತಂಕಕ್ಕೆ ದೂಡಿತ್ತು. ಆ ಬಳಿಕ ರಿಜ್ವಾನ್ ಅವರನ್ನ ಚಿಕಿತ್ಸೆಗೆಂದು ಮುಂಬೈ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ರಿಜ್ವಾನ್ ಅವರಿಗೆ ತೀವ್ರತರನಾದ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಬದುಕಿಸಿದ್ದು, ಭಾರತೀಯ ವೈದ್ಯ ಶಹೀರ್ ಅನ್ನೋದು ಮತ್ತೊಂದು ವಿಚಾರ. ದುಬೈನ ಮೆಡೋರ್ ಆಸ್ಪತ್ರೆಗೆ ದಾಖಲಿಸಿದ ಬಳಿಕ, ಅಲ್ಲಿನ ವೈದ್ಯ ಶಹೀರ್ ಸನಲ್ಬದಿನ್ ರಿಜ್ವಾನ್ ಗೆ ಚಿಕಿತ್ಸೆ ನೀಡಿದ್ದರು. ಐಸಿಯು ನಲ್ಲೇ 36 ಗಂಟೆಗಳ ಕಾಲ ಚಿಕಿತ್ಸೆ ಪಡೆದು ರಿಜ್ವಾನ್ ಚೇತರಿಸಿಕೊಂಡಿದ್ದಾರೆ. ಐಸಿಯುನಲ್ಲಿದ್ದಾಗಲೂ ನಾನು ಪಂದ್ಯವಾಡಬೇಕು ಎಂದು ರಿಜ್ವಾನ್ ಹೇಳುತ್ತಿದ್ದರಂತೆ.

ಈ ಬಗ್ಗೆ ವೈದ್ಯ ಶಹೀರ್ ಮಾಹಿತಿ ಹಂಚಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿದ್ದರು, ನಾನು ಸೆಮಿಫೈನಲ್ ನಲ್ಲಿ ಆಡಲೇಬೇಕು ಎಂಬ ಹುಮ್ಮಸ್ಸು ತೋರಿಸುತ್ತಿದ್ದರು. ಆ ಹುಮ್ಮಸ್ಸಿನಿಂದ ಅವರು ಬೇಗ ಗುಣಮುಖರಾಗಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೇ ಖುಷಿಯಲ್ಲಿ ರಿಜ್ವಾದ್ ಗಿಫ್ಟ್ ವೊಂದನ್ನ ನೀಡಿದ್ದಾರೆ. 16ನೇ ನಂಬರ್ ಜೆರ್ಸಿಯನ್ನ ವೈದ್ಯನಿಗೆ ನೀಡಿದ್ದಾರೆ.

suddionenews

Recent Posts

ಯಾರಾಗ್ತಾರೆ ದಿಲ್ಲಿ ದೊರೆ : ನಾಳೆ ಕುತೂಹಲಕ್ಕೆ ತೆರೆ !

    ಸುದ್ದಿಒನ್ ನಾಳೆ ದೆಹಲಿಯ ದೊರೆ ಯಾರಾಗುತ್ತಾರೆ ? ಎಎಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತಾ...? ಅಥವಾ ಭಾರತೀಯ…

30 minutes ago

25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿ : ಸಚಿವ ಎಸ್.ಮಧು ಬಂಗಾರಪ್ಪ

  ದಾವಣಗೆರೆ: ಫೆ.7 : ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ,…

36 minutes ago

ತುಮಕೂರಿನಲ್ಲಿ 7 ವರ್ಷದ ಮಗುವನ್ನು ಬಲಿ ಪಡೆದ ಡೆಂಗ್ಯು..!

ತುಮಕೂರು: ಈಗಷ್ಟೇ ಚಳಿಗಾಲ ಕಳೆದು ಬೇಸಿಗೆ ಶುರುವಾಗಿದೆ. ರೋಗ ರುಜಿನಗಳು ಆರಂಭವಾಗುತ್ತಿವೆ. ವೈರಲ್ ಫೀವರ್ ಜೊತೆಗೆ ಡೇಂಘಿ ಜ್ಚರ ಕೂಡ…

59 minutes ago

ಫೆಬ್ರವರಿ 09 ಮತ್ತು 10ರಂದು ಶಾಂತಿಸಾಗರ ನೀರು ಸರಬರಾಜು ತಾತ್ಕಾಲಿಕ ಸ್ಥಗಿತ

  ಚಿತ್ರದುರ್ಗ. ಫೆ.07: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಶಾಂತಿಸಾಗರ ನೀರು ಸರಬರಾಜು ಯೋಜನೆಯ ಶಾಂತಿಸಾಗರ ಜಾಕ್‍ವೆಲ್ ವಿದ್ಯುತ್ ಸ್ಥಾವರದಲ್ಲಿ…

1 hour ago

ರಾಜ್ಯ ಬಜೆಟ್ ಗೆ ಸಿದ್ದತೆ : ಮದುವೆ ಮನೆಯಿಂದ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಡಿಕೆಶಿ

ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನತ್ತ ಜನರ ಚಿತ್ತ ನೆಟ್ಟಿದೆ. ರಾಜ್ಯ ಬಜೆಟ್ ನಲ್ಲಿ ಇನ್ನಷ್ಟು…

1 hour ago

ರತನ್ ಟಾಟಾ ಉಯಿಲ್ ನಲ್ಲಿ ಮೋಹಿನಿಗೆ 500 ಕೋಟಿ : ಹುಡುಕಾಟ ಶುರು..!

ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…

2 hours ago