Categories: Home

ಮಹಾದಾಯಿ ನ್ಯಾಯಾಧೀಕರಣ ಅವಧಿ 6 ತಿಂಗಳ ವಿಸ್ತರಣೆ : ಆಕ್ರೋಶಗೊಂಡ ಹೋರಾಟಗಾರರು

ಬೆಂಗಳೂರು; ಮಹಾದಾಯಿ ವಿವಾದ ಇಂದು ಮುಗಿಯುತ್ತೆ ನಾಳೆ ಮುಗಿಯುತ್ತೆ ಎಂದುಕೊಳ್ಳುವಾಗಲೇ ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣ ಮತ್ತೆ ಆರು ತಿಂಗಳ ಕಾಲ ವಿಸ್ತರಣೆಯಾಗಿದೆ. ಪದೇ ಪದೇ ಅವಧಿಯನ್ನು ವಿಸ್ತರಿಸುತ್ತಿರೋದು ಸಹಜವಾಗಿಯೇ ಹೋರಾಟಗಾರರನ್ನು ಕೆರಳಿಸಿದೆ. ಮಹಾದಾಯಿ ನೀರಿನ ಪಾಲಿನ ಕರ್ನಾಟಕಕ್ಕೂ ಸೇರಿದ್ದು ಅನ್ನೋ ವಾದ ಭುಗಿಲೆದ್ದಾಗ ಮೊದಲು ಅಡ್ಡಿ ಮಾಡಿದ್ದೇ ಗೋವಾ. ಗೋವಾದ ಬೆನ್ನಿಗೆ ನಿಂತು ಮಹಾರಾಷ್ಟ್ರ ಕ್ಯಾತೆ ತೆಗೆದಿತ್ತು. ಹೀಗಾಗಿ ಮಹದಾಯಿ ವಿವಾದ ಜಟಿಲವಾಗುತ್ತಲೇ ಹೋಯ್ತು.

ಇದರ ಇತ್ಯರ್ಥಕ್ಕಾಗಿ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯ ರಚನೆ ಮಾಡಿತ್ತು. ಈ ನ್ಯಾಯ ಮಂಡಳಿ ಅವಧಿ ಇದೇ ಫೆಬ್ರವರಿ 16ಕ್ಕರ ಅಂತ್ಯಗೊಂಡಿತ್ತು. ಜೊತೆಗೆ ಇಷ್ಟರಲ್ಲಿಯೇ ಅಂತಿಮ ತೀರ್ಪಿನ ವರದಿಯೂ ಬರಬೇಕಿತ್ತು. ಹೋರಾಟಗಾರರು ಕೂಡ ಕಾಯುತ್ತಿದ್ದರು. ತೀರ್ಪು ಮಾತ್ರ ಬರಲಿಲ್ಲ. ಆದರೆ ಅವಧಿ ಮತ್ತೆ ವಿಸ್ತರಣೆಯಾಗಿದೆ. ಸಚಿವಾಲಯವೂ ಆರು ತಿಂಗಳಿಗೆ ವಿಸ್ತರಣೆ ಮಾಡಿದೆ.

ಆಗಸ್ಟ್ 14ರ 2018ರಲ್ಲಿ ಕೇಂದ್ರ ಸರ್ಕಾರದ ಇದೇ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೂ ಅವಧಿ ಮತ್ತೆ ವಿಸ್ತರಣೆಯಾಗಿದೆ. ಹೀಗಾಗಿ ಮಲಪ್ರಭಾ ನದಿಯಲ್ಲಿ ನಮ್ಮ ನೀರನ್ನು ನಾವೂ ಕಾಪಾಡಿಕೊಳ್ಳುತ್ತೇವೆ. ಆಗ ಮತದಾರರಿಗೆ ಜನಪ್ರತಿನಿಧಿಗಳು ಎಲ್ಲಿಂದ ನೀರು ಕೊಡುತ್ತಾರೆ ಎಂಬುದನ್ನು ನೋಡೋಣಾ. ಈಗ ಮಲಪ್ರಭಾದಿಂದ ನಾಲ್ಕು ಜಿಲ್ಲೆಗಳಿಗೆ ಬರುತ್ತಿರೋ ನೀರಿನಲ್ಲಿ ಬಹುತೇಕ ರೈತರ ಹೆಸರಿನಲ್ಲಿ ‌ಹಂಚಿಕೆಯಾಗಿದ್ದೇ ಇದೆ. ಹೀಗಾಗಿ ಈ ನೀರು ಕೊಡಬೇಡಿ ಅಂತಾ ಹೋರಾಟ ಮಾಡಿದರೆ ಏನಾದೀತು ಊಹಿಸಿ ಅಂತ ಮಹದಾಯಿ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.

suddionenews

Recent Posts

ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಾರಾ..?

ಹುಬ್ಬಳ್ಳಿ; ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬಿಜೆಪಿ ಪಕ್ಷದಲ್ಲಿಯೇ ಇದ್ರು ಕೂಡ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ…

16 minutes ago

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

  ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 15 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಮಾರ್ಚ್. 15 ) ಹತ್ತಿ ಮಾರುಕಟ್ಟೆ…

2 hours ago

ಚಿತ್ರದುರ್ಗ ಪಿಎಸ್ಐ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ ಆರೋಪ

  ಚಿತ್ರದುರ್ಗ; ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ…

3 hours ago

ರುದ್ರಪ್ಪ ಲಮಾಣಿ ದಿಢೀರನೇ ಬೆಂಗಳೂರಿಗೆ ಶಿಫ್ಟ್

  ಬೆಂಗಳೂರು; ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಈಗಾಗಲೇ…

3 hours ago

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ

ಈ ರಾಶಿಯವರು ವ್ಯಾಪಾರ ವೈಹಿವಾಟಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ, ಈ ರಾಶಿಯವರು ಸೋಲಿಲ್ಲದ ಸರದಾರನಾಗಿ ಮುಟ್ಟಿದ್ದೆಲ್ಲ ಚಿನ್ನ. ಶನಿವಾರದ ರಾಶಿ ಭವಿಷ್ಯ…

10 hours ago

ಹಿರಿಯೂರು ಬಳಿ ಉಪ ಸಭಾಪತಿಗೆ ಬೈಕ್ ಡಿಕ್ಕಿ : ಪ್ರಾಣಾಪಾಯದಿಂದ ಪಾರು

ಸುದ್ದಿಒನ್, ಹಿರಿಯೂರು, ಮಾರ್ಚ್. 14 : ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿಯವರು…

19 hours ago