ಬೆಂಗಳೂರು; ಮಹಾದಾಯಿ ವಿವಾದ ಇಂದು ಮುಗಿಯುತ್ತೆ ನಾಳೆ ಮುಗಿಯುತ್ತೆ ಎಂದುಕೊಳ್ಳುವಾಗಲೇ ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣ ಮತ್ತೆ ಆರು ತಿಂಗಳ ಕಾಲ ವಿಸ್ತರಣೆಯಾಗಿದೆ. ಪದೇ ಪದೇ ಅವಧಿಯನ್ನು ವಿಸ್ತರಿಸುತ್ತಿರೋದು ಸಹಜವಾಗಿಯೇ ಹೋರಾಟಗಾರರನ್ನು ಕೆರಳಿಸಿದೆ. ಮಹಾದಾಯಿ ನೀರಿನ ಪಾಲಿನ ಕರ್ನಾಟಕಕ್ಕೂ ಸೇರಿದ್ದು ಅನ್ನೋ ವಾದ ಭುಗಿಲೆದ್ದಾಗ ಮೊದಲು ಅಡ್ಡಿ ಮಾಡಿದ್ದೇ ಗೋವಾ. ಗೋವಾದ ಬೆನ್ನಿಗೆ ನಿಂತು ಮಹಾರಾಷ್ಟ್ರ ಕ್ಯಾತೆ ತೆಗೆದಿತ್ತು. ಹೀಗಾಗಿ ಮಹದಾಯಿ ವಿವಾದ ಜಟಿಲವಾಗುತ್ತಲೇ ಹೋಯ್ತು.
ಇದರ ಇತ್ಯರ್ಥಕ್ಕಾಗಿ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯ ರಚನೆ ಮಾಡಿತ್ತು. ಈ ನ್ಯಾಯ ಮಂಡಳಿ ಅವಧಿ ಇದೇ ಫೆಬ್ರವರಿ 16ಕ್ಕರ ಅಂತ್ಯಗೊಂಡಿತ್ತು. ಜೊತೆಗೆ ಇಷ್ಟರಲ್ಲಿಯೇ ಅಂತಿಮ ತೀರ್ಪಿನ ವರದಿಯೂ ಬರಬೇಕಿತ್ತು. ಹೋರಾಟಗಾರರು ಕೂಡ ಕಾಯುತ್ತಿದ್ದರು. ತೀರ್ಪು ಮಾತ್ರ ಬರಲಿಲ್ಲ. ಆದರೆ ಅವಧಿ ಮತ್ತೆ ವಿಸ್ತರಣೆಯಾಗಿದೆ. ಸಚಿವಾಲಯವೂ ಆರು ತಿಂಗಳಿಗೆ ವಿಸ್ತರಣೆ ಮಾಡಿದೆ.
ಆಗಸ್ಟ್ 14ರ 2018ರಲ್ಲಿ ಕೇಂದ್ರ ಸರ್ಕಾರದ ಇದೇ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೂ ಅವಧಿ ಮತ್ತೆ ವಿಸ್ತರಣೆಯಾಗಿದೆ. ಹೀಗಾಗಿ ಮಲಪ್ರಭಾ ನದಿಯಲ್ಲಿ ನಮ್ಮ ನೀರನ್ನು ನಾವೂ ಕಾಪಾಡಿಕೊಳ್ಳುತ್ತೇವೆ. ಆಗ ಮತದಾರರಿಗೆ ಜನಪ್ರತಿನಿಧಿಗಳು ಎಲ್ಲಿಂದ ನೀರು ಕೊಡುತ್ತಾರೆ ಎಂಬುದನ್ನು ನೋಡೋಣಾ. ಈಗ ಮಲಪ್ರಭಾದಿಂದ ನಾಲ್ಕು ಜಿಲ್ಲೆಗಳಿಗೆ ಬರುತ್ತಿರೋ ನೀರಿನಲ್ಲಿ ಬಹುತೇಕ ರೈತರ ಹೆಸರಿನಲ್ಲಿ ಹಂಚಿಕೆಯಾಗಿದ್ದೇ ಇದೆ. ಹೀಗಾಗಿ ಈ ನೀರು ಕೊಡಬೇಡಿ ಅಂತಾ ಹೋರಾಟ ಮಾಡಿದರೆ ಏನಾದೀತು ಊಹಿಸಿ ಅಂತ ಮಹದಾಯಿ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.
ಹುಬ್ಬಳ್ಳಿ; ಜೈನ ಸಮುದಾಯದವರು ಸರ್ಕಾರಕ್ಕೆ ಒಂದಷ್ಟು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಅದರಲ್ಲೂ ಜೈನ ನಿಗಮ ಸ್ಥಾಪನೆ ಮಾಡುವ ಬಗ್ಗೆ ಹೆಚ್ಚು ಒತ್ತು…
ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 50ನೇ ಹುಟ್ಟುಹಬ್ಬ. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೆಲ್ಲಾ ಸಮಾಧಿ ಬಳಿ ಹೋಗಿ…
ಚಿತ್ರದುರ್ಗ. ಮಾರ್ಚ್17: ಲಸಿಕೆಗಳು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸುತ್ತವೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು. ನಗರದ…
ಚಿತ್ರದುರ್ಗ.ಮಾರ್ಚ್.17:ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…