ನಂದು ಆದ್ಮೇಲೆ ಆಕೃತಿ ಜೊತೆಗೂ ಲವ್ ಬ್ರೇಕಪ್ : ಬಿಗ್ ಬಾಸ್ ಸ್ಪರ್ಧಿ ಜಶ್ವಂತ್ ಲವ್ ಕಹಾನಿ..!

ಕಳೆದ ಬಾರಿ ಬಿಗ್ ಬಾಸ್ ಒಟಿಟಿ ಮೂಲಕ ನಂದು ಹಾಗೂ ಜಶ್ವಂತ್ ಎಲ್ಲರಿಗೂ ಪರಿಚಿತರಾಗಿದ್ದರು. ಇಬ್ಬರು ರಿಯಕ್ ಆಗಿನೆ ಪ್ರೇಮ ಪಕ್ಷಿಗಳಾಗಿದ್ದರು. ಬಿಗ್ ಬಾಸ್ ಬರುವುದಕ್ಕೂ ಮುನ್ನ ರೋಡೀಸ್ ಶೋನಲ್ಲಿ ಇಬ್ಬರು ಗೆಲುವು ಕಂಡಿದ್ದರು. ಬಿಗ್ ಬಾಸ್ ಮನೆಗೆ ಬಂದ ಮೇಲೆ ಜಶ್ವಂತ್ ನಡವಳಿಕೆಯಲ್ಲಿ ಕೆಲವೊಂದು ಬದಲಾವಣೆಯಾಗಿತ್ತು. ಪ್ರೀತಿ ಪ್ರೇಮ ಬಿಗ್ ಬಾಸ್ಯೊಳಗೆ ಮುಗಿದಿತ್ತು. ಹೊರಗೆ ಬಂದ ಮೇಲೆ ನಂದು ತಮ್ಮ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು.

ಬಳಿಕ ಜಶ್ವಂತ್ ಹೆಸರು ಆಕೃತಿ ನೇಗಿ ಜೊತೆಗೆ ತಗಲಾಕಿಕೊಂಡಿತ್ತು. ರಿಯಾಲಿಟಿ ಶೋ ಒಂದರಲ್ಲಿಯೇ ಇಬ್ಬರ ಪರಿಚಯವಾಗಿತ್ತು. ಆಕೃತಿ ಹಾಗೂ ಜಶ್ವಂತ್ ನಡುವೆ ಇದ್ದ ಬಾಂಡಿಂಗ್ ಕಂಡು ಅವರಿಬ್ಬರು ಪ್ರೀತಿ ಮಾಡ್ತಾ ಇದಾರೆ ಎಂದೇ ಮಾತಾಡಿಕೊಂಡರು. ಇಬ್ಬರ ರೊಮ್ಯಾಂಟಿಕ್ ಫೋಟೋಗಳು, ರೀಲ್ಸ್ ಗಳು ಸೋಷಿಯಲದ ಮೀಡಿಯಾದಲ್ಲಿ ಜಲ್ ಚಲ್ ಎಬ್ಬಿಸಿತ್ತು. ಇದೀಗ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಈ ಬಗ್ಗೆ ಜಶ್ವಂತ್ ತಮ್ಮ ಸೋಷಿಯಲ್ ಮೀಡಿಯಾದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 

ಇದು ನಮ್ಮಿಬ್ಬರಿಗೂ ಕಠಿಣ ನಿರ್ಧಾರವಾಗಿತ್ತು. ಆದ್ರೆ ಇದು ಅನಿವಾರ್ಯವೂ ಕೂಡ ಆಗಿದೆ. ನಮ್ಮಿಬ್ಬರ ಮಧ್ಯೆ ಕೆಲವು ಗೊಂದಲಗಳಿವೆ. ಈ ಮಧ್ಯೆ ಯಾವುದೇ ಆರೋಪ ಮಾಡೋದಿಲ್ಲ. ಬಹುಶಃ ನಿಮ್ಮೆಲ್ಲರಿಗೂ ಹೇಳೋದಕ್ಕೆ ಇದು ಒಳ್ಳೆ ಸಮಯ. ನಮ್ಮದೇ ಆದ ರೀತಿಯಲ್ಲಿ ನಾವು ಮುಂದುವರೆಯಲೂ ನಿರ್ಧರಿಸಿದ್ದೇವೆ ಇದಕ್ಕೆ ನಿಮ್ಮ ಬೆಂಬಲವಿರಲಿ ಎಂದು ಬರೆದುಕೊಂಡಿದ್ದಾರೆ. ಹಾಗೇ ಇಬ್ಬರು ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಜೊತೆಗಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

suddionenews

Recent Posts

ಗೋಮಾತೆಯನ್ನು ಕಡಿದವರ ಕೈ ಕಡಿಯುವ ಶಪಥ ಮಾಡಿದ ಕೆ.ಎಸ್.ಈಶ್ವರಪ್ಪ

ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಿದ್ದು, ಈ ವೇಳೆ ತಮ್ಮ ಭಾಷಣದಲ್ಲಿ ಧರ್ಮ, ದೇಶದ ಬಗ್ಗೆ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ. ಜೀವನದಲ್ಲಿ…

7 hours ago

ಮಹಾಕುಂಭಮೇಳ : ಉತ್ತರ ಪ್ರದೇಶ ಸಿಎಂ ಭೇಟಿಯಾದ ವಚನಾನಂದ ಶ್ರೀಗಳು

ಪ್ರಯಾಗ್ ರಾಜ್: 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳವನ್ನು ಕಣ್ತುಂಬಿಕೊಳ್ಳುವುದಕ್ಕೆ ದೇಶದ ಜನ ಪ್ರಯಾಗ್ ರಾಜ್ ಗೆ ಭೇಟಿ ನೀಡುತ್ತಾ…

8 hours ago

ಅಡಿಕೆಧಾರಣೆ ಹೆಚ್ಚಳ : ರೈತರಲ್ಲಿ ಸಂತಸ

  ಶಿವಮೊಗ್ಗ: ಅಡಿಕೆ ಬೆಳೆಯಿಂದ ಒಳ್ಳೆ ಲಾಭವೇನೋ ಬರುತ್ತೆ. ಆದರೆ ಅದನ್ನ ಯಾವುದೇ ರೋಗ ಬರದಂತೆ ಕಾಪಾಡುವುದೇ ದೊಡ್ಡ ಸವಾಲಿನ…

10 hours ago

ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗಳ ಪಟ್ಟಿ ಸೇರಿಸಬೇಕು : ಎನ್.ಡಿ.ಕುಮಾರ್

ಚಿತ್ರದುರ್ಗ. ಫೆ.04 : ಸವಿತಾ ಸಮಾಜ ಬಾಂಧವರು ಶ್ರಮ ಹಾಗೂ ಕಾಯಕ ಜೀವಿಗಳಾಗಿದ್ದಾರೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣುತ್ತಿದ್ದಾರೆ…

10 hours ago

ಶುರುವಾದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರೆ : ಫೆಬ್ರವರಿ 13 ರಂದು ಬ್ರಹ್ಮ ರಥೋತ್ಸವ

  ಹಿರಿಯೂರು : ನಗರದ ದಕ್ಷಿಣ ಕಾಶಿಯೆಂದು ಹೆಸರಾಗಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವದ ಜಾತ್ರೆ ನಿನ್ನೆಯಿಂದ (ಫೆಬ್ರವರಿ.…

11 hours ago

ಫೆ. 7 ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರ ನೀರು

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ಎಂದು ರೈತರ ಒತ್ತಾಯದ ಮೇರೆಗೆ ಸಚಿವ…

11 hours ago