ಹಾವೇರಿ: ಚುನಾವಣೆ ಪ್ರಚಾರ ಜೋರಾಗ್ತಾ ಇದೆ. ಜನರನ್ನು ಸೆಳೆಯುವುದಕ್ಕೆ ಗಿಫ್ಟ್ ಪಾಲಿಟಿಕ್ಸ್ ಪ್ರಯೋಗ ಮಾಡ್ತಾ ಇದ್ದಾರೆ. ಕೆಲ ರಾಜಕಾರಣಿಗಳ ಮನೆಯಲ್ಲೆಲ್ಲಾ ಗಿಫ್ಟ್ ಗಳೇ ತುಂಬಿ ಹೋಗಿದೆ. ಇದೀಗ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಮನೆಯಲ್ಲೂ ಗಿಫ್ಟ್ ಗಳು ಪತ್ತೆಯಾಗಿದ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 30-40ಲಕ್ಷ ಮೌಲ್ಯದ ಉಡುಗೊರೆಯಾಗಿದೆ.
ರಾಣೆಬೆನ್ನೂರು ಪಟ್ಟಣದ ಬೀರೇಶ್ವರ ನಗರದಲ್ಲಿರುವ ಆರ್ ಶಂಕರ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೀರೆ ಬಾಕ್ಸ್, ತಟ್ಟೆ ಲೋಡ, ಬ್ಯಾಗ್ ಗಳು ಪತ್ತೆಯಾಗಿದೆ. ಈ ಎಲ್ಲಾ ಗಿಫ್ಟ್ ಗಳ ಮೇಲೆ ಆರ್ ಶಂಕರ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಎಲ್ ಕೆಜಿ ಯಿಂದ ಹಿಡಿದು ಡಿಗ್ರಿ ವಿದ್ಯಾರ್ಥಿಗಳ ತನಕ ನೀಡುವ ಬ್ಯಾಗ್ ಗಳು ಪತ್ತೆಯಾಗಿದೆ.
ಐಟಿ ಅಧಿಕಾರಿಗಳು 6 ಸಾವಿರ ಸೀರೆಗಳು, 9 ಸಾವಿರ ಬ್ಯಾಗ್ ಗಳು ಸೇರಿದಂತೆ 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಲಕನ್ನು ವಶಕ್ಕೆ ಪಡೆದಿದ್ದಾರೆ. ಇದೆಲ್ಲದರ ಬಿಲ್, ಸ್ಟಾಕ್ ಚೆಕ್ ಮಾಡಿದ್ದಾರೆ.
ಬೀದರ್,(ಏಪ್ರಿಲ್ 16): ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಏ. 16 : ಹೊಳಲ್ಕೆರೆ…
ಚಿತ್ರದುರ್ಗ. ಏ.16: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ…
ಚಿತ್ರದುರ್ಗ. ಏ.16: ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಹಜ್ ಸಮಿತಿ ಸಹಯೋಗದೊಂದಿಗೆ ಬುಧವಾರ ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲೆಯ 99…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ರಂಗಭೂಮಿ ಚಟುವಟಿಕೆಗಳ ಆಯಾಮಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಕ…
ಚಿತ್ರದುರ್ಗ. ಏ.16:ಚಿತ್ರದುರ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಯೂನಿಯನ್ ಪಾರ್ಕ್ ಬಳಿ, ಪುಟ್ಪಾತ್ ಮೇಲೆ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ.…