ರಾಮಲಲ್ಲಾ ಮೂರ್ತಿಯ ಕೆತ್ತನೆ ಹೇಗಾಯ್ತು..? ಶಿಲ್ಪಿಯ ಆಯ್ಕೆ ಹೇಗಿತ್ತು..? ಮಾಹಿತಿ ಬಿಚ್ಚಿಟ್ಟರು ಪೇಜಾವರಶ್ರೀ

 

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗಾಗಿ ಇಡೀ ದೇಶದ ಜನ ಕಾಯುತ್ತಿದ್ದಾರೆ. ಅಯೋಧ್ಯೆಯಂತೂ ಮಧುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಇನ್ನು ಕೇವಲ ಮೂರು ದಿನಗಳು ಮಾತ್ರ ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ಸಮಯ ಬಂದೇ ಬಿಡುತ್ತದೆ. ರಾಮಲಲ್ಲಾ ಮೂರ್ತಿಯ ಕೆತ್ತನೆ ಆಗಿದ್ದು ನಮ್ಮ ರಾಜ್ಯದಿಂದ. ಅದು ಹೇಗಾಯ್ತು..? ಶಿಲ್ಪಿಯ ಆಯ್ಕೆ ಹೇಗಾಯ್ತು..? ಶಿಲೆಗೆ ಏನೆಲ್ಲಾ ಹೇಳಿದ್ದರು ಈ ಎಲ್ಲಾ ಪ್ರಶ್ನೆಗಳು ಕಾಡದೆ ಇರುವುದಿಲ್ಲ. ಅದಕ್ಕೆಲ್ಲ ಪೇಜಾವರ ಶ್ರೀಗಳೇ ಉತ್ತರ ನೀಡಿದ್ದಾರೆ.

ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ಪೇಜಾವರ ಶ್ರೀಗಳು, ರಾಮ ಮಂದಿರಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಬೇಕು ಎಂದಾಗ, ಮೂರು ಪ್ರತಿಮೆಗಳ ನಿರ್ಮಾಣವಾಗಲಿ ಎಂದರು. ಯಾಕಂದ್ರೆ ಕಡೆ ಗಳಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು. ಬಳಿಕ ಯಾರ ಕೈಯಿಂದ ಮೂರ್ತಿ ಕೆತ್ತನೆ ಮಾಡಿಸುವುದು ಎಂಬ ಚರ್ಚೆ ಶುರುವಾದಾಗ, ಪ್ರಸಿದ್ಧ ಪಡೆದ ಎಲ್ಲಾ ಕಲಾವಿದರನ್ನು ಕರೆಸಲಾಗಿತ್ತು. ಅನುಭವ, ಕೆಲಸ ಹಂಚಿಕೊಳ್ಳಲು ಹೇಳಲಾಗಿತ್ತು. ಅದರಲ್ಲಿ ಮೂರು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಆ ಮೂವರಲ್ಲಿ ಇಬ್ಬರು ಕರ್ನಾಟಕದವರೇ. ಮೂರ್ತಿ ಆಯ್ಕೆಯಾಗಿದ್ದು ಕೂಡ ಕರ್ನಾಟಕದ್ದೇ ಎಂಬುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಸೆಲೆಕ್ಷನ್ ಕಮಿಟಿಯಲ್ಲೂ ಕರ್ನಾಟಕದಿಂದ ಪೇಜಾವರ ಶ್ರೀಗಳು ಮಾತ್ರ ಇದ್ದರಂತೆ. ಇನ್ನುಳಿದಂತೆ ಅಯೋಧ್ಯೆವರೇ ಇದ್ದರು. ಅದೃಷ್ಟವೆಂಬಂತೆ ಕರ್ನಾಟಕದ ಶಿಲೆಯೇ ಆಯ್ಕೆಯಾಗಿದ್ದು, ಆ ಶಿಲೆಗೆ ಬಳಸಿದ ಕಲ್ಲು ಸಹ ಕರ್ನಾಟಕದ್ದೆ ಆಗಿದೆ. ಇನ್ನುಳಿದ ಮೂರ್ತಿಗಳಿಗೂ ಮುಂದೆ ಯೋಗ್ಯವಾದ ಸ್ಥಳದಲ್ಲಿ ಪೂಜೆ ಸಲ್ಲಿಸಲಾಗುತ್ತದೆಯಂತೆ. ಜನವರಿ 22ಕ್ಕೆ ಕರ್ನಾಕಟದ ಶಿಲ್ಪಿ ಕೆತ್ತಿದ ರಾಮನ ಶಿಲೆ ಅನಾವರಣಗೊಳ್ಳಲಿದೆ.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

1 hour ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

5 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago